ಮನುಷ್ಯ ಸಂಬಂಧದ ನಂಬಿಕೆಯ ತಳಹದಿಯನ್ನಿಟ್ಟುಕೊಂಡು ಕಾದಂಬರಿಯನ್ನು ರಚಿಸಿದ್ದಾರೆ ಯಂಡಮೂರಿ ವೀರೇಂದ್ರನಾಥ್. ಸಮಾಜದಲ್ಲಿ ಗೋಮುಖ ವ್ಯಾಘ್ರನಂತೆ ಬದುಕುವವರನ್ನು ತಮ್ಮ ವಿಶ್ಲೇಷಣೆಗೆ ತೆಗೆದುಕೊಂಡು ಅದರ ಕುರಿತು ಚರ್ಚಿಸಿದ್ದು ಇಲ್ಲಿದೆ. ರಾಜಾ ಚೆಂಡೂರ್ ಅವರು ಕನ್ನಡಕ್ಕೆ ಈ ಕೃತಿಯನ್ನು ಅನುವಾದಿಸಿದ್ದಾರೆ.
ತೆಲುಗಿನ ಖ್ಯಾತ ಲೇಖಕ, ಕಾದಂಬರಿಕಾರ ಯಂಡಮೂರಿ ವೀರೇಂದ್ರನಾಥ್ ಅವರ ಬಹುತೇಕ ಕೃತಿಗಳು ಕನ್ನಡದಲ್ಲೂ ಅನುವಾದಗೊಂಡು ಜನಪ್ರಿಯವಾಗಿವೆ. ಇವರ ಕೃತಿಗಳನ್ನು ವಂಶಿ, ಸರಿತಾ ಜ್ಞಾನಾನಂದ, ಬೇಲೂರು ರಾಮಮೂರ್ತಿ, ರವಿ ಬೆಳಗೆರೆ, ಯತಿರಾಜ್ ವೀರಾಂಬುದಿ ಮುಂತಾದವರು ಕನ್ನಡಕ್ಕೆ ಅನುವಾದಿಸಿದ್ದಾರೆ. ...
READ MORE