ಪ್ರೀತಿ-ಪ್ರೇಮ ಈ ಜಗತ್ತಿನ ಬೆಚ್ಚಗಿನ ಭಾವ ಎನ್ನುವುದರಲ್ಲಿ ಯಾರ ಭಿನ್ನಾಭಿಪ್ರಾಯವೂ ಇರದು! ಅದೊಂದು ಅನುಭೂತಿ. ಅದನ್ನೇ ಕವಿಗಳು, ಸಾಹಿತಿಗಳು ತೀರಾ ವೈಭವೀಕರಿಸಿದರೂ ಅದು ಪೂರಾ ಸುಳ್ಳೇನು ಅಲ್ಲ. ‘ಬಾಡದ ಹೂ’ ಆಗಿನ ಪ್ರಜಾಮತ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾದಾಗ ಓದುಗರಲ್ಲಿ ಒಂದು ರೀತಿಯ ಸಂಚಲನ. ಲೇಖಕಿಯ ಮೊದಲ ಕಾದಂಬರಿಗೆ ಅದ್ಭುತ ಸಾಗತ. ವ್ಯವಸ್ಥಾಪಕ ಸಂಪಾದಕರಾದ ಮ.ನ.ಮೂರ್ತಿಗಳು ಓದುಗರ ಮೆಚ್ಚುಗೆ ಪೂರದ ಪತ್ರಗಳ ರಾಶಿಯನ್ನು ಮುಂದೆ ಹಾಕಿದ್ದರು. ಅಂದಿನ ಓದುಗರ ಮೆಚ್ಚುಗೆಯೇ ಇಂದೂ ಉಳಿದುಕೊಂಡಿದೆ; ಹನ್ನೆರಡು ಬಾರಿ ಅಚ್ಚಾಗಿದೆ. ಬೆಳ್ಳಿ ತೆರೆಯಲ್ಲೂ ಮಿನುಗಿದ ‘ಬಾಡದ ಹೂ’ ಚಲನಚಿತ್ರ ರಸಿಕರ ಪ್ರಶಸ್ತಿಯನ್ನು ಪಡೆದಿತ್ತು.
ಕನ್ನಡ ಕಾದಂಬರಿ ಲೋಕದ ಅನನ್ಯ ಪ್ರತಿಭೆ ಸಾಯಿಸುತೆ. ತಮ್ಮ ಕಾದಂಬರಿಗಳ ಮೂಲಕ ಹೆಂಗಳೆಯರ ಮೆಚ್ಚುಗೆಗೆ ಪಾತ್ರವಾದ ಲೇಖಕಿ. ಅವರು ಕನ್ನಡ ಓದುಗ ವಲಯ ವಿಸ್ತರಿಸಿದ ಬರಹಗಾರ್ತಿ ಕೂಡ. ಸಾಯಿಸುತೆ ಅವರು ಕೋಲಾರದಲ್ಲಿ 1942ರ ಆಗಸ್ಟ್ 20ರಂದು ಜನಿಸಿದರು. ಅವರ ಹೆಸರು ರತ್ನ. ’ಸಾಯಿಸುತೆ’ ಎಂಬುದು ಕಾವ್ಯನಾಮ. ತಂದೆ ವೆಂಕಟಪ್ಪ ಮತ್ತು ತಾಯಿ ಲಕ್ಷಮ್ಮ. ಕೋಲಾರದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಅವರು, ಓದುವ ಹಂಬಲದಿಂದ ಕಾಲೇಜು ಮೆಟ್ಟಿಲೇರಿದ್ದರು. ಆದರೆ, 16ನೇ ವಯಸ್ಸಿಗೆ ಮದುವೆಯಾದರು. ನಂತರದಲ್ಲಿ ಅವರಿಗೆ ನೆರವಾದವರು ಸಾಹಿತ್ಯಪ್ರೇಮಿ ಪತಿ ಅಶ್ವತ್ಥನಾರಾಯಣ. ಮನೆಯಲ್ಲಿದ್ದ ಸಾಹಿತ್ಯ ಪುಸ್ತಕಗಳನ್ನು ಓದುತ್ತಾ ಸಾಹಿತ್ಯದ ಒಲವು ಬೆಳೆಸಿಕೊಂಡ ...
READ MORE