ಈ ಕಾದಂಬರಿಯು ಇಪ್ಪತ್ತೊಂದನೇ ಶತಮಾನದ ಈ ಯುಗದಲ್ಲಿ ಹೆಮ್ಮರವಾಗಿ ಬೆಳೆದ, ಮತ್ತು ಈ ತಲೆಮಾರಿನ ಅಗತ್ಯವಾಗುತ್ತಿರುವ ಅಂತರ್ಜಾಲವನ್ನೆ ಮುಖ್ಯವಿಷಯವನ್ನಾಗಿಟ್ಟುಕೊಂಡ ಕಥೆಯನ್ನು ಒಳಗೊಂಡಿದೆ. ಟಿಕೆಟ್ ಬುಕಿಂಗ್ನಿಂದ ಹಿಡಿಗು ಬಿಲ್ ಪಾವತಿಯವರೆಗೂ ನಮ್ಮ ಎಲ್ಲಾ ದೈನಂದಿನ ಆಗುಹೋಗುಗಳಲ್ಲಿ ಹೆಚ್ಚಿನವು ಅಂತರ್ಜಾಲದ ಮೂಲಕ ನಡೆಯತೊಡಗಿರುವ ಕಾಲದಲ್ಲಿ ಪ್ರೀತಿ, ಪ್ರೇಮದ ಕತೆಯೇನು? ಅದರಲ್ಲೂ ಅಂತರ್ಜಾಲವು ಗಣನೀಯ ಪಾತ್ರವಹಿಸಿದೆ. ಮ್ಯಾಟ್ರಿಮೊನಿ ಡಾಟ್ಕಾಮ್, ಶಾದಿ ಡಾಟ್ಕಾಮ್ ಸ್ವಯಂವರ ಡಾಟ್ಕಾಮ್ಗಳು ಇವೆ. ಸಂಗಾತಿಯ ಆಯ್ಕೆ ಈ ರೀತಿಯಲ್ಲಿ ನಡೆಯುವುದರಿಂದ ಸಹಜ ಪ್ರೀತಿ, ಪ್ರೇಮದ ಕತೆಯೇನು ಎನ್ನುವುದು ಕೆಲವರ ಪ್ರಶ್ನೆ. ಇಂಥ ಬದಲಾವಣೆಯ ನಡುವೆಯು ‘ಬಾಲು, ಸುಜಾತ’ಳಂಥ ಪ್ರೇಮಿಗಳು ಇದ್ದರೆ. ಪ್ರೀತಿ ಎನ್ನುವ ಎರಡು ಅಕ್ಷರ ಮನದಲ್ಲಿ ಬರೆದು ಬರೆದು ಅಳಸಿದರು ‘ಸುಜಾತ’ ಎನ್ನುವ ಮೂರು ಅಕ್ಷರ ಬಾಲುವಿನ ಮನದಲ್ಲಿ ನಿಂತು ಶೃತಿಯ ತರಂಗಗಳನ್ನು ಎಬ್ಬಿಸುತ್ತೆ. ಪ್ರೇಮ ಹುಚ್ಚು ಪ್ರವಾಹವಲ್ಲ ನವಿರಾದ ಅನನ್ಯತೆಯ ರಸಧಾರೆ.ಇದು ಈ ಕಾದಂಬರಿಯ ಮುಕ್ತಾದಲ್ಲಿರುವ ಪಂಕ್ತಿಗಳು.
ಕನ್ನಡ ಕಾದಂಬರಿ ಲೋಕದ ಅನನ್ಯ ಪ್ರತಿಭೆ ಸಾಯಿಸುತೆ. ತಮ್ಮ ಕಾದಂಬರಿಗಳ ಮೂಲಕ ಹೆಂಗಳೆಯರ ಮೆಚ್ಚುಗೆಗೆ ಪಾತ್ರವಾದ ಲೇಖಕಿ. ಅವರು ಕನ್ನಡ ಓದುಗ ವಲಯ ವಿಸ್ತರಿಸಿದ ಬರಹಗಾರ್ತಿ ಕೂಡ. ಸಾಯಿಸುತೆ ಅವರು ಕೋಲಾರದಲ್ಲಿ 1942ರ ಆಗಸ್ಟ್ 20ರಂದು ಜನಿಸಿದರು. ಅವರ ಹೆಸರು ರತ್ನ. ’ಸಾಯಿಸುತೆ’ ಎಂಬುದು ಕಾವ್ಯನಾಮ. ತಂದೆ ವೆಂಕಟಪ್ಪ ಮತ್ತು ತಾಯಿ ಲಕ್ಷಮ್ಮ. ಕೋಲಾರದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಅವರು, ಓದುವ ಹಂಬಲದಿಂದ ಕಾಲೇಜು ಮೆಟ್ಟಿಲೇರಿದ್ದರು. ಆದರೆ, 16ನೇ ವಯಸ್ಸಿಗೆ ಮದುವೆಯಾದರು. ನಂತರದಲ್ಲಿ ಅವರಿಗೆ ನೆರವಾದವರು ಸಾಹಿತ್ಯಪ್ರೇಮಿ ಪತಿ ಅಶ್ವತ್ಥನಾರಾಯಣ. ಮನೆಯಲ್ಲಿದ್ದ ಸಾಹಿತ್ಯ ಪುಸ್ತಕಗಳನ್ನು ಓದುತ್ತಾ ಸಾಹಿತ್ಯದ ಒಲವು ಬೆಳೆಸಿಕೊಂಡ ...
READ MORE