ಯಸುನಾರ ಕವಾಬಟ ಅವರ ಈ ಕೃತಿ 1968ರಲ್ಲಿ ನೊಬೆಲ್ ಪ್ರಶಸ್ತಿಗೆ ಭಾಜನವಾಗಿತ್ತು. ಜಪಾನಿಯ ಸರಳ ಭಾಷೆಯಿಂದ ದಟ್ಟವಾದ ಟೀ (ಚಹಾ) ಸಂಸ್ಕೃತಿಯನ್ನು ಎಳೆಎಳೆಯಾಗಿ ಇಲ್ಲಿ ಚಿತ್ರಿಸಿದ್ದಾರೆ ಕಾದಂಬರಿಕಾರರು.
ಜಪಾನಿನ ಚಹಾ ಸಂಸ್ಕೃತಿ ಲೋಕ ಪ್ರಸಿದ್ಧ.ಅದಕ್ಕೆಂದೇ ಚಹಾ ಕುಟೀರಗಳು ಇನ್ನೂ ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡಿವೆ. ಚಹಾ ಸೇವಿಸಲು ಇಂತಹುದೇ ಉಡುಪು ಧರಿಸಿರಬೇಕು, ಅತಿಥೇಯ ಚಹಾವನ್ನು ಹೇಗೆ ತಯಾರಿಸಿ ನೀಡಬೇಕು ಎನ್ನುವ ನಿರ್ದಿಷ್ಟತೆಗಳು ನಮ್ಮನ್ನು ಪುಳಕರನ್ನಾಗಿಸುತ್ತದೆ.
ಚಹಾ ತಯಾರಿಕೆ ಒಂದು ಆಚರಣೆಯ ಹಿನ್ನೆಲೆಯಲ್ಲಿ ಕಥೆ ಬಿಚ್ಚಿಕೊಳ್ಳುತ್ತದೆ. ಕಥಾ ನಾಯಕ 'ಕಿಕುಜಿ' ತನ್ನ ಅಪ್ಪನ ಪ್ರೇಯಸಿಯಾಗಿದ್ದ 'ಚಿಕಕೋ' ನಡೆಸುವ ಸಂಭಾಷಣೆಗಳು ಆತ್ಮೀಯತೆಯ ಹದದಲ್ಲಿ ನಮ್ಮನ್ನು ಕರಗಿಸುತ್ತದೆ. ಪ್ರೀತಿಯ ಹಂಬಲ, ಹಕ್ಕುಸ್ಥಾಪನೆ, ಪರಂಪರೆ, ಅಸೂಯೆ ಎಲ್ಲವನ್ನೂ ಚಹಾ ಸಂಸ್ಕೃತಿಯ ಹಿನ್ನೆಲೆಯಲ್ಲಿ ಸರಳವಾಗಿ ಕಾಡುವ ಈ ಕೃತಿಯನ್ನು ಟಿ. ಎನ್. ಕೃಷ್ಣರಾಜು ಅವರು ಭಾವಕ್ಕೆ ಧಕ್ಕೆಯಾಗದಂತೆ ಕನ್ನಡಕ್ಕೆ ಅನುವಾದಿಸಿದ್ದಾರೆ.
ವೃತ್ತಿಯಿಂದ ವೈದ್ಯರಾದ ಟಿ.ಎನ್. ಕೃಷ್ಣರಾಜು ಪ್ರವೃತ್ತಿಯಿಂದ ಲೇಖಕರು. ಎನ್. ಕೃಷ್ಣರಾಜು ಅವರು ಹುಟ್ಟಿದ್ದು 1945ರಲ್ಲಿ ಕಡಲತೀರದ ಉಡುಪಿ ತಾಲೂಕಿನ ಕೊಡವೂರು ಗ್ರಾಮದಲ್ಲಿ. ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದಲ್ಲಿ ಪ್ರಾಥಮಿಕ ಮತ್ತು ಹೈಸ್ಕೂಲು ವಿದ್ಯಾಭ್ಯಾಸವನ್ನು ಮಾಡಿದ ಅವರು, ಯುವರಾಜ ಕಾಲೇಜಿನಲ್ಲಿ ಪಿಯುಸಿ, ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ಎಂ.ಬಿ.ಬಿ.ಎಸ್ ಪದವಿ ಪಡೆದರು. ಮುಂಬೈ ಯೂನಿವರ್ಸಿಟಿಯಲ್ಲಿ ಡಿ.ಸಿ.ಎಚ್ ಮತ್ತು ಎಂ.ಡಿ. ಪೂರ್ತೀಕರಿಸಿದರು. ಅಲ್ಲದೆ 1972 ರಲ್ಲಿ ಅಮೆರಿಕಕ್ಕೆ ವ್ಯಾಸಂಗಕ್ಕಾಗಿ ಹೋಗಿ, ಚಿಕಾಗೋ ನಗರದ ಕುಕ್ ಕೌಂಟಿ ಆಸ್ಪತ್ರೆ ಮತ್ತು ಇಲಿನಾಯ್ ವಿಶ್ವವಿದ್ಯಾಲದ ಆಸ್ಪತ್ರೆಗಳಲ್ಲಿ ನವಜಾತ ಶಿಶು ಶಾಸ್ತ್ರದ ಬಗ್ಗೆ ನಾಲ್ಕು ವರ್ಷ ತರಬೇತಿ ...
READ MORE