ಕನ್ನಡವೊಂದರಲ್ಲಿಯೇ ಅಲ್ಲದೆ ಭಾರತದ ಇತರೆ ಭಾಷೆಗಳಲ್ಲಿಯೂ ಸೇರಿದಂತೆ ಜಗತ್ತಿನಲ್ಲಿ ಒಂದು ಲಕ್ಷದಷ್ಟು ರಾಮಾಯಣಗಳಿವೆಯಂತೆ. ಕವಿ ಗುರು ರವೀಂದ್ರನಾಥ್ ಠಾಕೂರರು ಹೇಳುವಂತೆ ‘ರಾಮಾಯಣದ ಬಗ್ಗೆ ರಚಿತವಾಗಿರುವ ಸಾಹಿತ್ಯವನ್ನು ಓದಿ ಮುಗಿಸಲು ಒಂದು ಜೀವಮಾನ ಸಾಕಾಗುವುದಿಲ್ಲ’. ಈ ನಿಟ್ಟಿನಲ್ಲಿ ಲೇಖಕ ನರೇಂದ್ರ ಕೊಟಾರಿಯವರು ಹಿಂದಿಯಲ್ಲಿ ಬರೆದಿದ್ದ ಈ ಕೃತಿಯನ್ನು ಲೇಖಕರಾದ ಎಂ.ವಿ.ನಾಗರಾಜಸ್ವಾಮಿ ಹಾಗೂ ತಿಪ್ಪೇಸ್ವಾಮಿಯವರು ಕನ್ನಡಕ್ಕೆ ಅನುವಾದಿಸಿದ್ದಾರೆ.
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಎಂ.ವಿ. ನಾಗರಾಜ ರಾವ್, ಸರ್ಕಾರಿ ಜೂನಿಯರ್ ಕಾಲೇಜಿನ ಉಪಾನ್ಯಾಸಕರು ನಂತರ ಪ್ರಾಂಶುಪಾಲರಾಗಿ ನಿವೃತ್ತಿ ಹೊಂದಿದ್ದಾರೆ. ಕನ್ನಡ ಹಾಗೂ ಹಿಂದಿಯಲ್ಲಿ ಎಂ.ಎ. ಹಾಗೂ ಬಿ.ಇಡಿ. ಸಾಹಿತ್ಯ ರತ್ನ ಪೂರೈಸಿದ್ದಾರೆ. ಜೇಮ್ಸ್ ಹ್ಯಾಡ್ಲಿ ಚೇಸ್ ಅವರ 20 ಕಾದಂಬರಿಗಳನ್ನು ಕನ್ನಡಕ್ಕೆ ಅನುವಾದಿಸಿದ ಹೆಗ್ಗಳಿಕೆ ಇವರದ್ದು. ಹಾಸ್ಯ-ವಿಡಂಬನೆ-ವೈಚಾರಿಕತೆ ಸೇರಿದಂತೆ ಸುಮಾರು 300ಕ್ಕೂ ಅಧಿಕ ಲೇಕನಗಳನ್ನು ಬರೆದಿದ್ದಾರೆ. ಇವರ ‘ಕಂಪನ’ ಕಾದಂಬರಿಯು ಚಲನಚಿತ್ರವಾಗಿದೆ. ಮಕ್ಕಳ ಸಾಹಿತ್ಯಕ್ಕೆ ಸಂಬಂಧಿಸಿದ ಕೃತಿಗಳನ್ನು ರಚಿಸಿದ್ದಾರೆ. 1985ರಲ್ಲಿ ಶೃಂಗಾರ ಪ್ರಕಾಶನ ಸಂಸ್ಥೆ ಸ್ಥಾಪಿಸಿ, ಸುಮಾರು 242 ಪುಸ್ತಕಗಳನ್ನು ಪ್ರಕಟಿಸಿದ್ದು, ಕರ್ನಾಟಕ ಸರ್ಕಾರದಿಂದ ‘ಪುಸ್ತಕ ಸೊಗಸು’ ಪ್ರಶಸ್ತಿ ಪಡೆದಿದ್ದಾರೆ. ಅನುವಾದಿತ ಕೃತಿಗಳು : ಜೇಮ್ಸ್ ಹ್ಯಾಡ್ಲಿ ...
READ MORE