ಈ ಸಮಾಜ ಎದುರಿಸುತ್ತಿರುವ ಪಿಡುಗುಗಳಲ್ಲಿ ಮುಖ್ಯವಾದದ್ದು ಮೂಢನಂಬಿಕೆ. ನಮ್ಮ ಭಾರತದಲ್ಲಂತೂ ಇಂತಹ ಮೂಢ ನಂಬಿಕೆಗಳಿಗೆ ಲೆಕ್ಕವೇಇಲ. ಆದರೆ ಇಂತಹ ಕೆಟ್ಟನಂಬಿಕೆಗಳು ಹೆಚ್ಚಾಗಿ ಹೇಣ್ಣನ್ನೇ ಬಲಿಪಡೆಯುವಂತಹದ್ದು, ಇಂತಹದೇ ಸಮಾಜದ ಮೂಢನಂಬಿಕೆಗಳಿಗೆ ಉದಾಹರಣೆ ಈ ಕಾದಂಬರಿ.ಇಂಥಾ ಸಂಪ್ರದಾಯಗಳ ದಾಳಿಗೆ ಬಲಿಯಾದ ಉರ್ಮೀಳಳ ಬಾಳನು ನಿಶೆಯಿಂದ ಉಷೆಗೆ ಕೊಂಡೊಯ್ಯದ ಗೋಪಿ.ಮಕ್ಕಳಾಗದೇ ಇರುವುದು ಬರೀ ಹೆಣ್ಣಿನ ತಪ್ಪೇ?! ಎನ್ನುವ ಅಭಿಪ್ರಾಯ ಹೊಂದಿರುವ ಅತ್ತೆ ಮಂಗಳಮ್ಮ, ಹೆಂಡತಿಗೆ ದೋಹ ಬಗೆದ ಪತಿ ಶಂಕರ,ಇವರಗಳ ಮಧೈ ಪ್ರೀತಿಯ ತೋರುವ ನಾದಿನಿ ಸರಿತ ಸಿಕ್ಕಿದ್ದು ಉರ್ಮೀಳ ಪಾಲಿಗೆ ಚೇತೋಹಾರಿ.ಇಂತಹ ಮೌಢ್ಯಗಳ, ಅದನ್ನು ನಂಬುವ ಜನರ ಕಪಿಮುಷ್ಠಿಯಲ್ಲಿ ಬೆಂದ ಹೆಣ್ಣಿನ ಕಥನಕವೇ ಈ ಕಾದಂಬರಿ.
ಕನ್ನಡ ಕಾದಂಬರಿ ಲೋಕದ ಅನನ್ಯ ಪ್ರತಿಭೆ ಸಾಯಿಸುತೆ. ತಮ್ಮ ಕಾದಂಬರಿಗಳ ಮೂಲಕ ಹೆಂಗಳೆಯರ ಮೆಚ್ಚುಗೆಗೆ ಪಾತ್ರವಾದ ಲೇಖಕಿ. ಅವರು ಕನ್ನಡ ಓದುಗ ವಲಯ ವಿಸ್ತರಿಸಿದ ಬರಹಗಾರ್ತಿ ಕೂಡ. ಸಾಯಿಸುತೆ ಅವರು ಕೋಲಾರದಲ್ಲಿ 1942ರ ಆಗಸ್ಟ್ 20ರಂದು ಜನಿಸಿದರು. ಅವರ ಹೆಸರು ರತ್ನ. ’ಸಾಯಿಸುತೆ’ ಎಂಬುದು ಕಾವ್ಯನಾಮ. ತಂದೆ ವೆಂಕಟಪ್ಪ ಮತ್ತು ತಾಯಿ ಲಕ್ಷಮ್ಮ. ಕೋಲಾರದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಅವರು, ಓದುವ ಹಂಬಲದಿಂದ ಕಾಲೇಜು ಮೆಟ್ಟಿಲೇರಿದ್ದರು. ಆದರೆ, 16ನೇ ವಯಸ್ಸಿಗೆ ಮದುವೆಯಾದರು. ನಂತರದಲ್ಲಿ ಅವರಿಗೆ ನೆರವಾದವರು ಸಾಹಿತ್ಯಪ್ರೇಮಿ ಪತಿ ಅಶ್ವತ್ಥನಾರಾಯಣ. ಮನೆಯಲ್ಲಿದ್ದ ಸಾಹಿತ್ಯ ಪುಸ್ತಕಗಳನ್ನು ಓದುತ್ತಾ ಸಾಹಿತ್ಯದ ಒಲವು ಬೆಳೆಸಿಕೊಂಡ ...
READ MORE