ಅನಿರೀಕ್ಷಿತ ಸಂದರ್ಭ, ಸನ್ನಿವೇಶದಲ್ಲಿ ಜೊತೆಯಲ್ಲಿದ್ದ ಯುವಕನನ್ನ ಪರಿಚಯಿಸಿದ್ದು 'ಹಕ್ಕು, ಅಧಿಕಾರ ಇಲ್ಲದ ಜೊತೆಗಾರ.' ಆರಂಭದಲ್ಲಿ ಆಶ್ವರ್ಯ ಎನಿಸಿದರೂ ನಂತರ ಸುಲಭವಾಗಿ ಮನವರಿಕೆಯಾಯಿತು. ಮದುವೆ ವ್ಯವಸ್ಥೆಗೆ ಪರ್ಯಾಯವಾದದ್ದು 'ಲಿವಿಂಗ್-ಟು-ಗೆದರ್, ಲಿವ್-ಇನ್-ರಿಲೇಷನ್', ಇಷ್ಟಪಟ್ಟು ಒಟ್ಟೊಟ್ಟಿಗೆ ವಾಸಿಸುತ್ತಾರೆ. ಬೇಡವೆನಿಸಿದರೆ ಬಿಟ್ಟು ಹೋಗುವುದು ನಿರಾಳವಾಗಿರುತ್ತದೆ. ಇಂತಹ ವಿಷಯಗಳ ಬಗ್ಗೆ ಅಕ್ಷರರೂಪ ಪಡೆದು ಕೊಂಡು ಸ್ಯಯಂವಧು ಎಂಬ ಕಾದಂಬರಿ ಮೂಲಕ ಓದುಗರ ಮುಂದೆ ಬಂದಿದೆ.
ಕನ್ನಡ ಕಾದಂಬರಿ ಲೋಕದ ಅನನ್ಯ ಪ್ರತಿಭೆ ಸಾಯಿಸುತೆ. ತಮ್ಮ ಕಾದಂಬರಿಗಳ ಮೂಲಕ ಹೆಂಗಳೆಯರ ಮೆಚ್ಚುಗೆಗೆ ಪಾತ್ರವಾದ ಲೇಖಕಿ. ಅವರು ಕನ್ನಡ ಓದುಗ ವಲಯ ವಿಸ್ತರಿಸಿದ ಬರಹಗಾರ್ತಿ ಕೂಡ. ಸಾಯಿಸುತೆ ಅವರು ಕೋಲಾರದಲ್ಲಿ 1942ರ ಆಗಸ್ಟ್ 20ರಂದು ಜನಿಸಿದರು. ಅವರ ಹೆಸರು ರತ್ನ. ’ಸಾಯಿಸುತೆ’ ಎಂಬುದು ಕಾವ್ಯನಾಮ. ತಂದೆ ವೆಂಕಟಪ್ಪ ಮತ್ತು ತಾಯಿ ಲಕ್ಷಮ್ಮ. ಕೋಲಾರದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಅವರು, ಓದುವ ಹಂಬಲದಿಂದ ಕಾಲೇಜು ಮೆಟ್ಟಿಲೇರಿದ್ದರು. ಆದರೆ, 16ನೇ ವಯಸ್ಸಿಗೆ ಮದುವೆಯಾದರು. ನಂತರದಲ್ಲಿ ಅವರಿಗೆ ನೆರವಾದವರು ಸಾಹಿತ್ಯಪ್ರೇಮಿ ಪತಿ ಅಶ್ವತ್ಥನಾರಾಯಣ. ಮನೆಯಲ್ಲಿದ್ದ ಸಾಹಿತ್ಯ ಪುಸ್ತಕಗಳನ್ನು ಓದುತ್ತಾ ಸಾಹಿತ್ಯದ ಒಲವು ಬೆಳೆಸಿಕೊಂಡ ...
READ MORE