`ಸಾಲುದೀಪ’ ನಾಗೇಶ್ ಜೆ. ನಾಯಕ ಅವರ ವಿಮರ್ಶ ಸಂಕಲನವಾಗಿದೆ. ಇದಕ್ಕೆ ಆನಂದ ಈ. ಕುಂಚನೂರ ಅವರ ಬೆನ್ನುಡಿ ಬರಹವಿದೆ; ಕವಿಯೇ ವಿಮರ್ಶಕನಾದರೆ ವಿಮರ್ಶೆಗೂ ಒಂದು ಕವಿತ್ವ ಪ್ರಾಪ್ತಿಯಾಗುತ್ತದೆ. ಹಾಗೆಂದು ವಿಮರ್ಶೆ ತನ್ನ ಹಾದಿ ತಪ್ಪುತ್ತಿದೆಯೆಂದರ್ಥವಲ್ಲ. ಬದಲಾಗಿ ಕವಿತ್ವದೊಂದಿಗೆ ಹರಳುಗಟ್ಟಿಸಿಕೊಂಡು ಇನ್ನಷ್ಟು ಬಲವಾಗುತ್ತದೆ. ನಮ್ಮ ಸಾಹಿತ್ಯದಲ್ಲಿ ಈ ಬಗೆಯಲ್ಲಿ ವಿಮರ್ಶೆಗೆ ಕವಿತ್ವದ ಲಯಗಳು ಪ್ರಾಪ್ತವಾದುದರ ದೊಡ್ಡ ಪರಂಪರೆಯೆ ಇದೆ. ವಿಮರ್ಶಾ ಸಂಕಲನಗಳು ಒಂದು ಕಾಲಘಟ್ಟದ ಸಾಹಿತ್ಯಕ್ಕೆ ಕೈಗನ್ನಡಿಗಳಾಗಿ ನಮ್ಮನ್ನು ಮುನ್ನಡೆಸುತ್ತವೆ ಎಂಬುದು ನಮ್ಮೆಲ್ಲರ ನಂಬಿಕೆ. ಪ್ರಸ್ತುತ ನಾಗೇಶ್ ಅವರು ಇತ್ತೀಚಿನ ಕೆಲ ಕಾವ್ಯದ ಬರವಣಿಗೆಗಳಿಗೆ ವಿಮರ್ಶೆಯ ಒರೆಹಚ್ಚಿ ನೋಡಲು ಪ್ರಯತ್ನಿಸಿದ್ದಾರೆ. ಅದರಲ್ಲಿ ಇಷ್ಟವಾಗುವ ಅಂಶವೆಂದರೆ ಅವರು ತಮ್ಮ ವಿಮರ್ಶೆಗೆ ಬಹುತೇಕ ಹೊಸ ಅಥವಾ ಕಿರಿಯ ಬರಹಗಾರರ ಕೃತಿಗಳನ್ನು ಆರಿಸಿರುವುದು. ಅವರ ಬರಹಗಳನ್ನು ಓದುತ್ತಿದ್ದರೆ ಅವರು ಯಾವ ಹಿಂದಿನ ವಿಮರ್ಶಾಕಾರರ ಜಾಡಿಗೆ ಬೆನ್ನು ಬಿದ್ದಂತಿಲ್ಲ. ಬದಲಾಗಿ ತಮಗೆ ಅನಿಸಿದ ಅಭಿಪ್ರಾಯಗಳನ್ನು ಪ್ರಾಮಾಣಿಕವಾಗಿ ದಾಖಲಿಸಿದ್ದಾರೆ.
ನಾಗೇಶ್ ಜೆ. ನಾಯಕ ವೃತ್ತಿಯಲ್ಲಿ ಶಿಕ್ಷಕರು. 1975 ಫೆಬ್ರವರಿ 23 ರಂದು ಸವದತ್ತಿಯಲ್ಲಿ ಜನಿಸಿದರು. ಕನ್ನಡ ದಿನಪತ್ರಿಕೆಗಳಲ್ಲಿ ಇವರ ಲೇಖನಗಳು ಪ್ರಕಟವಾಗಿವೆ. ‘ನೀನೊಂದು ಮುಗಿಯದ ಸಂಭ್ರಮ, ಪ್ರೀತಿಯಿಂದ ಪ್ರೀತಿಗೆ, ಭರವಸೆಗಳ ಬೆನ್ನೇರಿ, ಪುಟ್ಟ ಪದ್ಯಗಳು, ಕವಿ ಸಮಯ ಮಠದೊಳಗಣ ಬೆಕ್ಕು’ ಮುಂತಾದ ಕೃತಿಗಳು ಪ್ರಕಟಣೆಗೊಂಡಿವೆ. ಬಯಲ ಕನ್ನಡಿ-ವಿಮರ್ಶಾ ಸಂಕಲನ, ಒಡಲ ದನಿ-ಅಂಕಣ ಬರಹಗಳು, ಘನದ ಕುರುಹು-ವ್ಯಕ್ತಿ ಚಿತ್ರಣ, ಚಿನ್ನದ ಚೂರಿ-ಕಥಾ ಸಂಕಲನ ಅವರ ಇತ್ತಿಚಿನ ಕೃತಿಗಳಾಗಿವೆ. ಇವರ ಸಾಹಿತ್ಯ ರಚನೆಗಾಗಿ ಸಂಕ್ರಮಣ ಸಾಹಿತ್ಯ ಪ್ರಶಸ್ತಿ, ಸಂಚಯ ಕಾವ್ಯ ಪುರಸ್ಕಾರ, ಆಜೂರು ಪುಸ್ತಕ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ...
READ MORE