‘ಚಿತ್ರಪಟ ಅಗ್ನಿವರ್ಣ ಉರಿಯ ಉಯ್ಯಾಲೆ’ ಎಚ್. ಎಸ್. ವೆಂಕಟೇಶಮೂರ್ತಿಯವರ ನಾಟಕವಾಗಿದೆ. ಇದಕ್ಕೆ ಬಿ.ವಿ.ಕಾರಂತರ ಬೆನ್ನುಡಿ ಬರಹವಿದೆ; ಎಚ್. ಎಸ್. ವೆಂಕಟೇಶ ಮೂರ್ತಿಯವರ ಕವಿತೆಗಳೇ ಇರಲಿ, ನಾಟಕವೇ ಇರಲಿ, ಎರಡರಲ್ಲೂ ಸಹಜವಾದ ಒಂದು ಗುಣವಿದೆ. ಅದು ನಾಟಕ ಮತ್ತು ಕಾವ್ಯ ಸಹಜವಾಗಿ ಹೆಣೆದುಕೊಳ್ಳುವ ಗುಣ. ರಘುವಂಶವನ್ನು ಆಧರಿಸಿದ ಮೂರ್ತಿಯವರ ಅಗ್ನಿವರ್ಣ ರೂಪಾಂತರವಲ್ಲ ಪ್ರಕಾರಾಂತರ ಅದು ನಾಟಕ ಭಾಷೆಯಲ್ಲಿ ಒಂದು ಪರಕಾಯ ಪ್ರವೇಶ ಪ್ರಕ್ರಿಯೆ. ಹಾಗೆಯೇ ಉರಿಯ ಉಯ್ಯಾಲೆ, ರಂಗಭೂಮಿಯಲ್ಲಿ ಸ್ವಗತ ಎಷ್ಟು ಮಹತ್ವ ಪೂರ್ಣವಾದದ್ದು ಎಂಬುದನ್ನು ಮನವರಿಕೆ ಮಾಡಿಕೊಡುವ ಕೃತಿ. ಚಿತ್ರಪಟದಲ್ಲಿ ಮೂರ್ತಿಯವರ ಪಾತ್ರ, ಕಲ್ಪನೆ ಇನ್ನಷ್ಟು ಸಮೃದ್ಧವಾಗಿದೆ. ಇಲ್ಲಿ ರಾಮಾಯಣದ ಘಟನೆಗಳ ಕ್ರಮ ವ್ಯತ್ಯಯದಲ್ಲೇ ಒಂದು ತಾಜಾ ಅನುಭವವಿದೆ ಎಂಬುವುದನ್ನು ಈ ಕೃತಿಯಲ್ಲಿ ನೋಡಬಹುದು ಎಂದಿದ್ದಾರೆ.
©2024 Book Brahma Private Limited.