ಲೇಖಕ ಟಿ.ಪಿ. ಕೈಲಾಸಂ ಅವರ ನಾಟಕ ಕೃತಿ-‘ನಮ್ಕ್ಳಬ್ಬು ಮತ್ತು ಕೈಲಾಸಂ ನೂಕ್ ನ ಕೆಲವು ಕಲ್ಪನೆಗಳು’. 1943 ರಲ್ಲಿ ಮೊದಲ ಮುದ್ರಣ ಕಂಡಿತ್ತು. ಕೈಲಾಸಂ ಅವರ ಕುಲುಮೆಯಲ್ಲಿ ರೂಪುಗೊಂಡ ಕೆಲ ಘಟನೆಗಳು ಮಹತ್ವವನ್ನು ಪಡೆದು, ಇಲ್ಲಿ ದಾಖಲಾಗಿವೆ. ಅದನ್ನು ಕೈಲಾಸಂ ನೂಕ್ -ಸುದೀರ್ಘ ಅಧ್ಯಾಯದಲ್ಲಿ ಕಾಣಬಹುದು. ಮೊಮ್ಮಗಳ ಮುಯ್ಯಿ, ಮಲೆಯಾಳೀ ತಿಪ್ಪಾರಳ್ಳೀ-ಈ ಎರಡೂ ಲೇಖನಗಳು ವೈ.ಎನ್. ಕೃಷ್ಣಮೂರ್ತಿ, ಕೈಲಾಸಂ ಅವರ ಹಾಸ್ಯದ ಹರಿಗೋಲು ಮತ್ತು ಗುಂಡೂ ಗುಳಿಗೆಗಳು-ಈ ಎರಡೂ ಲೇಖನಗಳು ಜಿ.ಪಿ. ರಾಜರತ್ನಂ, ವಿಚಿತ್ರ ವ್ಯಕ್ತಿ ಕೈಲಾಸಂ-ಪ್ರೊ.ಕೆ.ವಿ.ಅಯ್ಯರ್, ನಾನು ಕಂಡ ಕೈಲಾಸಂ-ಕಂದಾಡೆ ಕೃಷ್ಣ ಅಯ್ಯಂಗಾರ, ಕೈಲಾಸಂ : ಒಂದು ನೆನಪು-ಎಚ್.ವಿ. ವೆಂಕಟಸುಬ್ಬಯ್ಯ ಈ ಲೇಖನಗಳು ಇಲ್ಲಿ ಸಂಕಲನಗೊಂಡಿವೆ.
ಕನ್ನಡ ನಾಟಕರಂಗದಲ್ಲಿ ಹೊಸಶಕೆಯನ್ನು ಆರಂಭಿಸಿದ ಟಿ ಪಿ. ಕೈಲಾಸಂ ಅವರು ಬೆಂಗಳೂರಿನಲ್ಲಿ 26-07-1885ರಲ್ಲಿ ತ್ಯಾಗರಾಜ ಪರಮಶಿವ ಅಯ್ಯರ್ – ಕಲಮಮ್ಮ ದಂಪತಿಗಳ ಪುತ್ರರಾಗಿ ಜನಿಸಿದರು. ಬೆಂಗಳೂರು, ಹಾಸನ, ಮೈಸೂರುಗಳಲ್ಲಿ ಶಾಲಾ ಶಿಕ್ಷಣ ಮುಗಿಸಿ 1908ರಲ್ಲಿ ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿಗೆ ಸೇರಿ ಬಿ ಎ ಪದವಿಗಳಿಸಿದರು. ಪ್ರೌಢವ್ಯಾಸಂಗಕ್ಕೆ ಲಂಡನ್ನಿಗೆ ತೆರಳಿ 6 ವರ್ಷಗಳ ಕಾಲ ಭೂಗರ್ಭಶಾಸ್ತ್ರ ಅಭ್ಯಸಿಸಿ 1915ಕ್ಕೆ ಬೆಂಗಳೂರಿಗೆ ಹಿಂತಿರುಗಿದರು. ಭೂಗರ್ಭಶಾಸ್ತ್ರ ಇಲಾಖೆಯಲ್ಲಿ ಭೂಶೋಧಕರಾಗಿ ಸೇರಿ 5 ವರ್ಷ ಉದ್ಯೋಗ ಮಾಡಿದರು. ಅನಂತರ ರಾಜೀನಾಮೆ ನೀಡಿ ರಂಗಭೂಮಿಯ ಚಟುವಟಿಕೆಗಳಲ್ಲಿ ನಿರತರಾದರು. ವ್ಯಾಯಾಮಕ್ಕೆ ಹೆಚ್ಚು ಒತ್ತು ಕೊಟ್ಟಿದ್ದ ಕೈಲಾಸಂ ಕನ್ನಡ ...
READ MORE