ಗಾಂಧೀ ಅಜ್ಜಗ ನಮ್ಮ ಶರಣು ಮತ್ತು ನಿಶ್ಚಿಂತನಾಗಬೇಕಂತಿ

Author : ಸಂಗಮೇಶ ತಮ್ಮನಗೌಡ್ರ

Pages 48

₹ 40.00




Year of Publication: 2011
Published by: ನೀಲಾ ಪ್ರಕಾಶನ
Address: ಗುಜಮಾಗಡಿ, ತಾ: ರೋಣ, ಜಿ: ಗದಗ-582 102
Phone: 9449074397

Synopsys

ಲೇಖಕ ಸಂಗಮೇಶ ತಮ್ಮನಗೌಡ್ರ ಅವರು ಬರೆದ ಎರಡು ನಾಟಕಗಳು-ಗಾಂಧೀ ಅಜ್ಜಗ ನಮ್ಮ ಶರಣು ಮತ್ತು ನಿಶ್ಚಿತನಾಗಬೇಕಂತಿ. ಗಾಂಧೀಜಿ ಪರಿಶುದ್ಧ ಬದುಕು ‘ಗಾಂಧಿ ಅಜ್ಜಗ ನಮ್ಮ ಶರಣು ನಾಟಕದ ಒಟ್ಟು ಭಾವವಾಗಿದ್ದರೆ ‘ಶಿಶುನಾಳ ಶರೀಫರ ಭಾವಕೋಶವೇ ಆಗಿದ್ದಅನುಭಾವ ಗೀತೆಗಳ ಸಾರವನ್ನು ತಿಳಿಸುವ ನಾಟಕ- ‘ನಿಶ್ಚಿಂತನಾಗಬೇಕಂತಿ’ . ಈ ಎರಡೂ ನಾಟಕಗಳು ಉದಾತ್ತ ಬದುಕಿನ ಆದರ್ಶವನ್ನು ಒಳಗೊಂಡಿದ್ದು, ಪ್ರಸ್ತುತ ಯುವಪೀಳಿಗೆಗೆ ಇಂತಹ ಸಂದೇಶಗಳು ಅವಶ್ಯ ಎಂದು ಲೇಖಕರು ಕೃತಿಯ ಪ್ರಸ್ತಾವನೆಯಲ್ಲಿ ಬರೆದ ಮಾತುಗಳಲ್ಲಿ ಅಭಿವ್ಯಕ್ತಿಸಿದ್ದಾರೆ.

About the Author

ಸಂಗಮೇಶ ತಮ್ಮನಗೌಡ್ರ
(15 January 1970)

ಸಂಗಮೇಶ ತಮ್ಮನಗೌಡ್ರ (ಎಸ್.ವಿ. ತಮ್ಮನಗೌಡ್ರ) ಮೂಲತಃ ಗದಗ ಜಿಲ್ಲೆಯ ಗುಜಮಾಗಡಿ ಗ್ರಾಮದವರು. (ಜನನ: 15-01-1970) ಸದ್ಯ, ರೋಣ ತಾಲೂಕಿನ ಬೂದಿಹಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಹಾರಾಷ್ಟ್ರದ ಕೊಲ್ಹಾಪುರ ವಿ.ವಿ.ಯಿಂದ ಎಂ.ಎ, ಮಧುರೈ ಕಾಮರಾಜ ವಿವಿಯಿಂದ ಎಂ.ಫಿಲ್ ಹಾಗೂ ಮುಂಬೈ ವಿ.ವಿ.ಯಿಂದ ಪಿಎಚ್ ಡಿ (ವಿಷಯ: ಕನ್ನಡದಲ್ಲಿ ಏಕಾಂಕಗಳು: ಒಂದು ಅಧ್ಯಯನ-1975-95) ಪದವಿ ಪಡೆದರು. ದ.ರಾ. ಬೇಂದ್ರೆ ವೇದಿಕೆ ಸ್ಥಾಪಿಸಿ (2000) ನಿರಂತರವಾಗಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. ಕೃತಿಗಳು: ಹಂಸ, ಸ್ಫೂರ್ತಿ-ಕವನ ಸಂಕಲನಗಳು, ಮತ್ತೆ ಹುಟ್ಟಿತು ಕವನ-ಭಾವಗೀತೆಗಳ ಸಂಕಲನ, ಪಶ್ಚಾತ್ತಾಪ, ಕರುಳಿನ ಬೆಲೆ, ಖಳನಾಯಕನ ...

READ MORE

Related Books