ಸಾಧು ತುಕಾರಾಮ

Author : ಬೆಳ್ಳಾವೆ ನರಹರಿಶಾಸ್ತ್ರಿ

Pages 161




Year of Publication: 1934
Published by: ಬೆಳ್ಳಾವೆ ಪುಸ್ತಕಾಲಯ
Address: ಬಳೇಪೇಟೆ, ಬೆಂಗಳೂರು ನಗರ.

Synopsys

ಪಾಂಡುರಂಗನ ಭಕ್ತನಾದ ಸಾಧು ತುಕಾರಾಮನ ಜೀವನಚರಿತ್ರೆಯನ್ನು ರಂಗದ ಮೇಲೆ ತರುವ ಉದ್ದೆಶದೊಂದಿಗೆ ಲೇಖಕ ಬೆಳ್ಳಾವೆ ನರಹರಿಶಾಸ್ತ್ರಿಗಳು ‘ಸಾಧು ತುಕಾರಾಮ’ ಎಂಬ ನಾಟಕ ರಚಿಸಿದ್ದಾರೆ. ಇದು ಧರ್ಮ-ನೀತಿ-ಭಕ್ತಿ-ಬೋಧಕ ನಾಟಕವಾಗಿದೆ.

ತುಕಾರಾಮ, ಈತನ ಮಗ ಮಹಾದೇವ, ಶಿವಾಜಿ ಮಹಾರಾಜ, ಶಿವಾಜಿಯ ಕಡೆಯ ಅಧಿಕಾರಿ ಪಂಡಿತರಾವ್, ಶಿವಾಜಿಯ ಕಡೆಯ ಸೇನಾನಿ ಹಿರೋಜಿ, ಬಿಜಾಪುರ ಬಾದಶಹಾನ ಕಡೆಯ ಸೇನಾನಿಗಳಾದ ರಹಮತ್ ಖಾನ್ ಹಾಗೂ ದಿಲಾವರ ಖಾನ್, ತುಕಾರಾಮನ ಪತ್ನಿ ಜೀಜಾಬಾಯಿ, ಶಿವಾಜಿಯ ಪತ್ನಿ ಸಯೀಬಾಯಿ, ತುಕಾರಾಮನ ಮಗಳು ಕಾಶೀಬಾಯಿ ಇನ್ನಿತರೆ ಪಾತ್ರಗಳು ಇತಿಹಾಸ ಮತ್ತು ಸನ್ನಿವೇಶಗಳಿಗೆ ಮೆರಗು ನೀಡುತ್ತವೆ.

About the Author

ಬೆಳ್ಳಾವೆ ನರಹರಿಶಾಸ್ತ್ರಿ
(21 September 1882 - 21 June 1961)

ನಾಟಕಗಳು ಇಲ್ಲದೇ ಸೊರಗಿದ್ದ ಕಾಲದಲ್ಲಿ, ವೃತ್ತಿ ರಂಗಭೂಮಿಗೆ ನಾಟಕಗಳನ್ನು ಬರೆದುಕೊಟ್ಟು, ಕನ್ನಡಿಗರಲ್ಲಿ ಹಾಸ್ಯಪ್ರಜ್ಞೆ ಮೂಡಿಸಿದವರು ನರಹರಿಶಾಸ್ತ್ರಿ. 1882 ಸೆಪ್ಟಂಬರ್‌ 21 ತುಮಕೂರಿನ ಬೆಳ್ಳಾವೆ ಗ್ರಾಮದಲ್ಲಿ ಜನಿಸಿದರು. 1901ರಲ್ಲೇ ’ಸ್ಯಮಂತಕೋಪಾಖ್ಯಾನ’ ನಾಟಕ ರಚನೆ. ಗುಬ್ಬಿ ವೀರಣ್ಣನವರ ಅಪೇಕ್ಷೆಯಂತೆ ರಚಿಸಿದ ನಾಟಕ ಶ್ರೀಕೃಷ್ಣ ಲೀಲಾ. ಗುಬ್ಬಿ ಕಂಪನಿಗೂ, ನಾಟಕಕಾರರಿಗೂ ತಂದುಕೊಟ್ಟ ಹೆಸರು. ನಂತರ ರಚಿಸಿದ್ದು ’ಸದಾರಮೆ, ಗುಲೇಬಕಾವಲಿ, ಕಂಸವಧೆ, ಲಂಕಾದಹನ, ರುಕ್ಮಿಣೀ ಸ್ವಯಂವರ, ಮಹಾತ್ಮ ಕಬೀರದಾಸ, ಜಲಂಧರ’ ಈ ನಾಟಕಗಳು ಗುಬ್ಬಿ ಕಂಪನಿಯಿಂದಲೇ ಪ್ರದರ್ಶನಗೊಂಡವು. ’ಶಂಕರವಿಜಯ, ದಶಾವತಾರ, ಸತೀ ಅನಸೂಯ, ಶಾಕುಂತಲ, ಪಾರಿಜಾತ, ಹೇಮರೆಡ್ಡಿ ಮಲ್ಲಮ್ಮ, ಪ್ರಭಾವತಿ ಮುಂತಾದ ನಾಟಕಗಳನ್ನು ಬರೆದರು. ಇವರ ...

READ MORE

Related Books