ಹನ್ನೆರಡನೇ ಶತಮಾನದ ಶರಣಮಾರ್ಗದ ವಸ್ತುವನ್ನಾಧರಿಸಿದ ಕಥೆಯಾಗಿದ್ದು, ಅಂತರ್ಜಾತೀಯ ವಿವಾಹದ ವಸ್ತುವಿನಿಂದ ಅತೀತವಾಗಿ ಚಿತ್ರಣಗೊಂಡಿದೆ. ಚರಿತ್ರೆಯ ವಾಸ್ತವ ಹಾಗೂ ಕಲ್ಪನೆಯ ಪಾತ್ರ - ಸನ್ನಿವೇಶಗಳೊಂದಿಗೆ ರೂಪ ಪಡೆದಿದ್ದು, ಹಿತಮಿತವಾದ ಪಾತ್ರಗಳಿದ್ದು, ಚಿಕ್ಕ ಚಿಕ್ಕ ಸನ್ನಿವೇಶ-ಸಂಭಾಷಣೆಗಳೊಂದಿಗೆ ಕಥಾಕೇಂದ್ರಿತವಾಗಿ ಬೆಳೆದಿದೆ. - ಡಾ. ಅರವಿಂದ ಮಾಲಗತ್ತಿ
ಮನು ಗುರುಸ್ವಾಮಿ ಮೂಲತಃ ಮೈಸೂರು ಜಿಲ್ಲೆಯ ತಲಕಾಡಿನವರು. ಮೈಸೂರು ವಿಶ್ವವಿದ್ಯಾನಿಲಯ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಿಂದ ಕನ್ನಡ ಸ್ನಾತಕೋತ್ತರ ಪದವಿಯನ್ನು ಪಡೆದಿರುವ ಅವರು ಬೆಂಗಳೂರಿನ ಕೆ ಎಲ್ ಇ -ಎಸ್ ನಿಜಲಿಂಗಪ್ಪ ಕಾಲೇಜಿನಲ್ಲಿ ಅಧ್ಯಾಪಕ ವೃತ್ತಿಯನ್ನು ಆರಂಭಿಸಿದ ಇವರು ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಪ್ರಸ್ತುತ ಬೆಂಗಳೂರಿನ ವಿದ್ಯಾವನ ಪಿಯು ಮತ್ತು ಪದವಿ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವಳೂ ಕತೆಯಾದಳು, ವ್ಯಭಿಚಾರಿ ಹೂವು, ಕಲ್ಲು ದೇವರು ದೇವರಲ್ಲ, ಗಾಂಧಿ ನೀ ನನ್ನ ಕೊಂದೆ ಕೃತಿಗಳು ಪ್ರಕಟಣಾ ಹಂತದಲ್ಲಿವೆ. ಕೃತಿಗಳು : ನಿಬ್ಬೆರಗು ...
READ MOREತಳಸಮುದಾಯದ ಗೋಗಾಹಿ ಶಂಕರ ವೈದ್ಯನಾಗುವುದು, ವೈದ್ಯರಾದ ದಾಮೋದರ ಭಟ್ಟರ ಪಾತ್ರ ನಾಯಕನ ಪಾತ್ರಕ್ಕಿಂತ ಮಿಗಿಲಾಗಿ ಮಿಂಚಿದೆ. ಇದು ಒಂದು ಕ್ಷಣ ಗೋರೂರರ 'ಹೇಮಾವತಿ' ಕಾದಂಬರಿಯನ್ನು ನೆನಪಿಸುತ್ತದೆ.