ಕರ್ನಾಟಕ ಸಾಹಿತ್ಯದ ಬರ್ನಾಡ್ ಷಾ ಎಂದೇ ಖ್ಯಾತಿಯ ಟಿ.ಪಿ.ಕೈಲಾಸಂ ಅವರ ಕೀಚಕ ನಾಟಕವನ್ನು ಜೆ.ಪಿ.ರಾಜರತ್ನಂ ಅವರು ಸರಳೀಕರಿಸಿದ್ದೇ ಈ ಕೃತಿ-ಕೀಚಕ. ಈ ಕೃತಿಯು ಮೊದಲು 1948ರಲ್ಲಿ, 1950ರಲ್ಲಿ ಹಾಗೂ 1969ರಲ್ಲಿ ಪ್ರಕಟಗೊಂಡು, ಇದೀಗ 4ನೇ ಮುದ್ರಣ ಕಾಣುತ್ತಿದೆ. ಕೀಚಕ ನಾಟಕವನ್ನು ಬರೆದು ಮುಗಿಸುವುದರೊಳಗೆ ಕೈಲಾಸಂ ತೀರಿಹೋದರು. ಆದರೆ, ಕಥಾವಸ್ತುವಿನ ಬಗ್ಗೆ ಅವರ ಒಡನಾಡಿ ರಾಮರಾಯ ಅವರಲ್ಲಿ ಚರ್ಚಿಸಿದ್ದರು. ಆ ಕೃತಿಯನ್ನು ಕನ್ನಡಕ್ಕೆ ತರುವ ಪ್ರಯತ್ನದ ಭಾಗವಾಗಿ ಜೆ.ಪಿ.ರಾಜರತ್ನಂ ಅವರು ರಾಮರಾಯರನ್ನು ಕೇಳಿಕೊಂಡು ಅದನ್ನು ಇಂಗ್ಲಿಷಿನಲ್ಲಿ ಬರೆಯಿಸಿ ನಂತರ ಅದನ್ನು ಕನ್ನಡಕ್ಕೆ ಭಾಷಾಂತರಿಸಲಾಯಿತು. ಈ ‘ಕೀಚಕ’ನನ್ನು ನಾಟಕ ಎಂದು ಪರಿಗಣಿಸಿದೇ ಕಲ್ಪನೆ ಎಂದು ಪರಿಗಣಿಸಿ, ಕೈಲಾಸಂ ಇದ್ದರೆ ಇನ್ನೂ ಉತ್ತಮವಾಗಿ ರಚನೆಗೊಳ್ಳುತ್ತಿತ್ತೇನೋ ಎಂದು ಜೆ.ಪಿ. ರಾಜರತ್ನಂ ಅವರು ಕೃತಿಗೆ ಬರೆದ ಪ್ರಸ್ತಾವನೆಯಲ್ಲಿ ಮನವಿ ಮಾಡಿದ್ದಾರೆ.
ಆಡುಮಾತಿನ ಪದಗಳ ಬಳಕೆಯ ‘ರತ್ನನ ಪದಗಳು’ ಮೂಲಕ ಜನಪ್ರಿಯರಾಗಿದ್ದ ಜಿ.ಪಿ. ರಾಜರತ್ನಂ ಅವರು ಕನ್ನಡ ಸಾಹಿತ್ಯದ ಪರಿಚಾರಿಕೆಗೂ ಹೆಸರಾಗಿದ್ದರು. ರಾಜರತ್ನಂ ಅವರು ಜನಿಸಿದ್ದು ಬೆಂಗಳೂರು ಜಿಲ್ಲೆಯ ರಾಮನಗರದಲ್ಲಿ 1908ರ ಡಿಸೆಂಬರ್ 8 ರಂದು. ತಂದೆ ಜೆ.ಪಿ. ಗೋಪಾಲಕೃಷ್ಣಯ್ಯಂಗಾರ್. ರಾಜರತ್ನಂ ಅವರು ಮೈಸೂರಿನಲ್ಲಿ ಪ್ರೌಢಶಾಲಾ ಶಿಕ್ಷಣ ಮುಗಿಸಿ, ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎ. ಮತ್ತು ಮೈಸೂರು ಮಹಾರಾಜ ಕಾಲೇಜಿನಲ್ಲಿ ಎಂ.ಎ. ಪದವಿ ಗಳಿಸಿದರು. ಅನಂತರ ಮೈಸೂರು, ತುಮಕೂರು, ಶಿವಮೊಗ್ಗ, ಬೆಂಗಳೂರು ಕಾಲೇಜುಗಳಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದ ಅವರು 1964ರಲ್ಲಿ ನಿವೃತ್ತರಾದ ಮೇಲೆ ಯುಜಿಸಿ ಉಪಾಧ್ಯಾಯರಾಗಿ ಕೆಲವು ಕಾಲ ಸೇವೆ ಸಲ್ಲಿಸಿದರು. ಕವಿ, ...
READ MORE