1926ರಲ್ಲಿ ಮೊದಲ ಬಾರಿಗೆ ಪ್ರಕಟವಾದ ಈ ನಾಟಕ ಕುವೆಂಪು ಅವರ ಮೊದಲ ಮಕ್ಕಳ ಗೀತ ನಾಟಕ. ಒಂದೇ ದೃಶ್ಯವನ್ನು ಹೊಂದಿರುವ ಈ ನಾಟಕಕ್ಕೆ ಐದು ಪಾತ್ರಗಳು ಜೀವ ತುಂಬುತ್ತವೆ. ವಿಶೇಷವಾಗಿ ಮೋಡ ಮತ್ತು ಹುಡುಗನ ನಡುವೆ ನಡೆಯುವಂತಹ ಸಂಭಾಷಣೆ ಬಹಳ ಆತ್ಮೀಯವಾಗಿ ಕಾಣುತ್ತದೆ. ಈ ನಾಟಕದಲ್ಲಿರುವ ಪ್ರತಿಯೊಂದು ಸಂಭಾಷಣೆಯೂ ಗೀತೆಯ ರೂಪದಲ್ಲಿದೆ. ಒಬ್ಬ ಹುಡುಗ ಮೋಡದೊಂದಿಗೆ ತಾನೂ ಬರುವೆನೆಂದು ವಿನಂತಿ ಮಾಡಿಕೊಳ್ಳುವ ಪರಿ ಓದುಗರಿಗೆ ಮುದ ನೀಡುತ್ತದೆ. ಕೇವಲ ಹದಿನೈದು ಪುಟಗಳಲ್ಲಿ ಪ್ರಕೃತಿ ಸೌಂದರ್ಯದ ಕೂಲಂಕುಷ ವರ್ಣನೆಯನ್ನು ಮಾಡಿರುವುದು ಈ ನಾಟಕದಲ್ಲಿ ಕಾಣಬಹುದು. ಮೂಲತಃ ಮಲೆನಾಡಿನವರಾದ ಕುವೆಂಪು ಅವರು, ತಮ್ಮ ಬರೆವಣಿಗೆಯಲ್ಲಿ ಹಲವು ಬಾರಿ ಮಲೆನಾಡನ್ನು ವರ್ಣಿಸಿರುವುದು ಕಾಣಬಹುದು. ಇಲ್ಲೂ ಕೂಡ ಅದೇ ರೀತಿಯ ಬರೆವಣಿಗೆ ಮುಂದುವರೆದಿದೆ ಎಂದೇ ಹೇಳಬಹುದು. ಮಲೆನಾಡಿನ ಕಾಡು, ಗಿರಿ ಶಿಖರ, ಮಳೆ, ಮೋಡವನ್ನು ಗೀತ ರೂಪಕದ ಮೂಲಕ ಓದುಗರ ಮುಂದಿಟ್ಟಿದ್ದಾರೆ ಲೇಖಕರು. ಕುವೆಂಪು ಅವರ ಪರಿಸರ ಪ್ರೇಮಕ್ಕೆ ತೆರೆದಿಟ್ಟ ಕನ್ನಡಿಯ ರೀತಿ ಈ ನಾಟಕವು ಭಾಸವಾಗುತ್ತದೆ.
ಕುವೆಂಪು ಎಂಬ ಕಾವ್ಯನಾಮದಿಂದ ಸಾಹಿತ್ಯ ರಚನೆ ಮಾಡಿದ ಕವಿ, ಪ್ರಖರ ವಿಚಾರವಾದಿ-ಚಿಂತಕ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ಅವರು ಕನ್ನಡ ಸಾಹಿತ್ಯದ ಮೇರೆಗಳನ್ನು ವಿಸ್ತರಿಸಿದವರು. ತಂದೆ ವೆಂಕಟಪ್ಪಗೌಡ ತಾಯಿ ಸೀತಮ್ಮ. ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳ್ಳಿಯವರಾದ ಪುಟ್ಟಪ್ಪ ಜನಿಸಿದ್ದು ಚಿಕ್ಕಮಗಳೂರು ಜಿಲ್ಲೆಯ ಹಿರೇಕೂಡಿಗೆಯಲ್ಲಿ 1904ರ ಡಿಸೆಂಬರ್ 29ರಂದು. ಮನೆಯಲ್ಲೇ ಖಾಸಗಿ ಮೇಷ್ಟರ ಮೂಲಕ ಪ್ರಾರಂಭಿಕ ವಿದ್ಯಾಭ್ಯಾಸದ ನಂತರ ತೀರ್ಥಹಳ್ಳಿಯಲ್ಲಿ ವಿದ್ಯಾಭ್ಯಾಸ ಮುಗಿಸಿ ಮೈಸೂರಿನಲ್ಲಿ ವೆಸ್ಲಿಯನ್ ಮಿಷನ್ ಹೈಸ್ಕೂಲ್, ಮಹಾರಾಜ ಕಾಲೇಜುಗಳಲ್ಲಿ ಓದಿ ಎಂ.ಎ. ಪದವಿ (1929) ಪಡೆದರು. ಮೈಸೂರು ಮಹಾರಾಜ ಕಾಲೇಜಿನಲ್ಲಿ ಅಧ್ಯಾಪಕ (1929) ಆಗಿ ಅನಂತರ ಕ್ರಮೇಣ ಉಪಪ್ರಾಧ್ಯಾಪಕ, ...
READ MORE