ಸ್ತ್ರೀ-ಪುರುಷ ಸಮಾನತೆಗೆ ಪ್ರಾಮುಖ್ಯತೆ ನೀಡಿ `ಚಾಮಚೆಲುವೆ’ ಎಂಬ ಸ್ತ್ರೀವಾದಿ ನಾಟಕವನ್ನು ರಚಿಸಿದ್ದಾರೆ ಸುಜಾತ ಅಕ್ಕಿ. “70ರ ದಶಕ ಎಲ್ಲ ಭಾರತೀಯ ಭಾಷೆಗಳಲ್ಲೂ ಸಾಂಸ್ಕೃತಿಕ ಅನನ್ಯತೆಯ ಹುಡುಕಾಟದ ಕಾಲವಾಗಿತ್ತು. ಆಗ ಹಲವರು ಜನಪದ ಕಥೆ-ಕಾವ್ಯ ವಸ್ತುಗಳನ್ನು ವರ್ತಮಾನಕ್ಕೆ ರೂಪಕ ಪ್ರತಿಮೆಗಳಾಗುವಂತೆ ಅನ್ವಯಿಸಿ ನಾಟಕ ರಚಿಸಿದ್ದಾರೆ. 90 ರ ದಶಕದಲ್ಲಿ ಇದು ಹಠಾತ್ ಸ್ಥಗಿತಗೊಂಡಂತಿದ್ದುದನ್ನು ಪುನಃ ಡಾ. ಸುಜಾತ ಅಕ್ಕಿ ಅವರು ಹಳೆಪುರಾಣವನ್ನು ಹೊಸ ಪುರಾಣವನ್ನಾಗಿ ವರ್ತಮಾನಕ್ಕೆ ಸಲ್ಲುವಂತೆ ಮುರಿದು ಕಟ್ಟುವ ಕೆಲಸ ಮಾಡಿದ್ದಾರೆ. 'ಚಾಮಚಲುವೆ'ನಾಟಕ ಜನಪದ ನೆಲೆಗಟ್ಟಿನಲ್ಲಿ ರಂಗರೂಪಕವಾಗಿ ಹರಳುಗಟ್ಟುವ ಪ್ರಕ್ರಿಯೆಗೆ ಚಾಲನೆ ಸಿಕ್ಕಿದಂತಾಗಿದೆ. ಪೌರಾಣಿಕ ಪಾತ್ರಗಳ ತರ್ಕಾತೀತ ಆವರಣ, ದೈವತ್ವದಲ್ಲಿಯೇ ನೆಲೆಕಾಣದೆ ಮಾನವೀಯ ಪಾತಳಿಯಲ್ಲಿ ಮಾನವ ಸಂಬಂಧಗಳನ್ನು, ಸಂಸಾರದ ವ್ಯವಹಾರ, ಮದುವೆ ಎಂಬ ಸಾಂಸ್ಕೃತಿಕ ವ್ಯವಸ್ಥೆಯ ಆಚೆಗಿನ ಗಂಡು-ಹೆಣ್ಣು ಸಂಬಂಧಗಳನ್ನು 'ಶೃಂಗಾರ ರಸ' ಒದಗಿಸಿರುವ ರಂಜನೀಯ ನಾಟಕೀಯ ತಿರುವುಗಳಿಂದ ಆಪ್ತವಾಗುವಂತೆ ಈ ನಾಟಕ ರೂಪುಗೊಂಡಿದೆ” ಎಂದು ಕೃತಿ ಕುರಿತು ನಾಟಕಕಾರ ಸಿ. ಬಸವಲಿಂಗಯ್ಯ ಶ್ಲಾಘಿಸಿದ್ದಾರೆ
ಕವಯತ್ರಿ ಸುಜಾತಾ ಅಕ್ಕಿ ಅವರು ಜಾನಪದೀಯ ಸಂಸ್ಕೃತಿಗಳಲ್ಲಿ ಅತ್ಯಂತ ಆಸ್ಥೆ ಹೊಂದಿದವರು. ಅವರು 1967 ಆಗಸ್ಟ್ 15ರಂದು ಬಳ್ಳಾರಿ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕು ತಂಬ್ರಹಳ್ಳಿಯಲ್ಲಿ ಜನಿಸಿದರು. ಜಾನಪದ ಅಧ್ಯಯನದೊಂದಿಗೆ ಕರ್ನಾಟಕ ಜನತೆಗೆ ತಲುಪುವಂತೆ ಮಡಿದವರು. ಜಾನಪದ ಹಾಗೂ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರೆ. ’ಪುಟಕ್ಕಿಟ್ಟ ಕವನ - ಕವನ ಸಂಕಲನ, ಸುರಗಿಸುವ್ವಾಲೆ - ಜಾನಪದ ಸಂಪಾದನೆ, ಶ್ರೀ ಬಂಡೆ ರಂಗನಾಥೇಶ್ವರ ಜಾತ್ರೆ - ಜಾನಪದೀಯ ಅಧ್ಯಯನ, ಸಾರಥಿ - ಬಯಲಾಟದ ಸಾರಥಿ, ಆಕೆ ಏನು?, ಮಾದೇವಿ ಮತ್ತು ಇತರೆ ನಾಟಕಗಳು. ’ಬಳ್ಳಾರಿ ಜಿಲ್ಲೆಯ ರಂಗನಟಿಯರು’ ಮಹಾಪ್ರಬಂಧಕ್ಕೆ ಪಿಎಚ್.ಡಿ. ಪದವಿ ಪಡೆದಿದ್ದಾರೆ. ’ಸಮಗ್ರ ...
READ MORE