ಒಟ್ಟು ಎಂಟು ದೃಶ್ಯಗಳನ್ನು ಒಳಗೊಂಡಂತಹ ನಾಟಕ ಯಮನ ಸೋಲು. ಇದೊಂದು ಪುರಾಣ ಆಧಾರಿತ ಕಥೆಯ ನಾಟಕ ರೂಪ. ಸಾವಿತ್ರಿ ಹಾಗೂ ಸತ್ಯವಾನ್ ಅವರ ಕಥೆಯನ್ನು ಆಧಾರಿಸಿ ಬರೆದಂತಹ ನಾಟಕ ಇದು. ಪೀಠಿಕಾ ದೃಶ್ಯ, ಉಪಸಂಹಾರ ದೃಶ್ಯವನ್ನು ಒಳಗೊಂಡು ಈ ನಾಟಕದಲ್ಲಿ ಎಂಟು ದೃಶ್ಯಗಳನ್ನು ರಚಿಸಲಾಗಿದೆ. ಈ ನಾಟಕದಲ್ಲಿ ಸಾವಿತ್ರಿಯ ನಿಷ್ಕಲ್ಮಷ ಪ್ರೀತಿ ಯಾವ ರೀತಿ ತನ್ನ ಪತಿಯ ರಕ್ಷಣೆಯನ್ನು ಮಾಡುತ್ತದೆ ಎಂಬುದರ ವಿವರವಿದೆ. ಸಾವಿತ್ರಿ ತನ್ನ ಪತಿಯನ್ನು ಉಳಿಸಿಕೊಳ್ಳಲು ಯಾವ ರೀತಿ ಪರಿತಪಿಸುತ್ತಾಳೆ? ಅವಳ ಪ್ರೀತಿ ಎಷ್ಟು ನಿಷ್ಕಲ್ಮಷವಾಗಿರುತ್ತದೆ? ಆ ನಿಷ್ಕಲ್ಮಷ ಪ್ರೀತಿ ಯಮನಿಂದ ಯಾವ ರೀತಿ ಸತ್ಯವಾನನ ಪ್ರಾಣವನ್ನು ಉಳಿಸುತ್ತದೆ? ಯಾಕೆ ಯಮ ತನ್ನ ಉದ್ದೇಶವನ್ನು ಈಡೇರಿಸುವಲ್ಲಿ ಸೋಲುತ್ತಾನೆ? ಎಂಬುದನ್ನು ಕಲಾತ್ಮಕವಾಗಿ ಈ ನಾಟಕದಲ್ಲಿ ಲೇಖಕರಾದ ಕುವೆಂಪು ಅವರು ವಿವರಿಸುತ್ತಾ ಹೋಗುತ್ತಾರೆ. ಯಮ ಧರ್ಮರಾಜ ಮತ್ತು ಸಾವಿತ್ರಿಯ ನಡುವೆ ನಡೆಯುವ ಸಂವಾದ ಈ ನಾಟಕದ ಪ್ರಮುಖ ಭಾಗ. ತನ್ನ ಇನಿಯನ ಪ್ರಾಣವನ್ನು ಉಳಿಸಿಕೊಳ್ಳಲು ಯಮನೊಂದಿಗೆ ವಾದಕ್ಕೆ ಇಳಿಯುವ ಸಾವಿತ್ರಿ ಯಾವ ರೀತಿ ತನ್ನ ಪತಿಯ ಪ್ರಾಣವನ್ನು ಯಮನ ವಶಕ್ಕೆ ನೀಡುವುದನ್ನು ಕ್ಷಣಕಾಲಕ್ಕೆ ತಡೆಯುತ್ತಾಳೆ ಎಂಬುದನ್ನು ಸ್ವಾರಸ್ಯಕರವಾಗಿ ಈ ನಾಟಕದಲ್ಲಿ ವರ್ಣಿಸಲಾಗಿದೆ.
ಕುವೆಂಪು ಎಂಬ ಕಾವ್ಯನಾಮದಿಂದ ಸಾಹಿತ್ಯ ರಚನೆ ಮಾಡಿದ ಕವಿ, ಪ್ರಖರ ವಿಚಾರವಾದಿ-ಚಿಂತಕ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ಅವರು ಕನ್ನಡ ಸಾಹಿತ್ಯದ ಮೇರೆಗಳನ್ನು ವಿಸ್ತರಿಸಿದವರು. ತಂದೆ ವೆಂಕಟಪ್ಪಗೌಡ ತಾಯಿ ಸೀತಮ್ಮ. ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳ್ಳಿಯವರಾದ ಪುಟ್ಟಪ್ಪ ಜನಿಸಿದ್ದು ಚಿಕ್ಕಮಗಳೂರು ಜಿಲ್ಲೆಯ ಹಿರೇಕೂಡಿಗೆಯಲ್ಲಿ 1904ರ ಡಿಸೆಂಬರ್ 29ರಂದು. ಮನೆಯಲ್ಲೇ ಖಾಸಗಿ ಮೇಷ್ಟರ ಮೂಲಕ ಪ್ರಾರಂಭಿಕ ವಿದ್ಯಾಭ್ಯಾಸದ ನಂತರ ತೀರ್ಥಹಳ್ಳಿಯಲ್ಲಿ ವಿದ್ಯಾಭ್ಯಾಸ ಮುಗಿಸಿ ಮೈಸೂರಿನಲ್ಲಿ ವೆಸ್ಲಿಯನ್ ಮಿಷನ್ ಹೈಸ್ಕೂಲ್, ಮಹಾರಾಜ ಕಾಲೇಜುಗಳಲ್ಲಿ ಓದಿ ಎಂ.ಎ. ಪದವಿ (1929) ಪಡೆದರು. ಮೈಸೂರು ಮಹಾರಾಜ ಕಾಲೇಜಿನಲ್ಲಿ ಅಧ್ಯಾಪಕ (1929) ಆಗಿ ಅನಂತರ ಕ್ರಮೇಣ ಉಪಪ್ರಾಧ್ಯಾಪಕ, ...
READ MORE