ಮಾತನಾಡುವ ಕಲ್ಲು ಮತ್ತು ಬಡವಿಯ ಬಾವಿ

Author : ಸತೀಶ ಕುಲಕರ್ಣಿ

₹ 60.00




Year of Publication: 2017
Published by: ‌ಡಾ.‌ ‌ಬೆಟಗೇರಿ‌ ‌ಕೃಷ್ಣಶರ್ಮರ‌ ‌ಸ್ಮಾರಕ‌ ‌ಟ್ರಸ್ಟ್‌
Address: ಕುಮಾರ‌ ‌ಗಂಧರ್ವ‌ ‌ಹಾಲ್‌ ‌, ಸುಭಾಷ‌ ‌ನಗರ,‌ ‌ಬೆಳಗಾವಿ‌ ‌

Synopsys

ಮಾತಾಡುವ‌ ‌ಕಲ್ಲು‌ ‌ಮತ್ತು‌ ‌ಬಡವಿಯ‌ ‌ಬಾವಿ‌ ‌-ಡಾ.‌ ‌ಬೆಟಗೇರಿ‌ ‌ಕೃಷ್ಣಶರ್ಮರ‌ ‌4‌ ‌ಕಥೆಗಳ‌ ‌ಆಧಾರಿತ‌ ‌2‌ ‌ನಾಟಕಗಳ ಕೃತಿ ಇದು. ಮಾತಾಡುವ‌ ‌ಕಲ್ಲು-ಈ ‌ಕಥೆಯನ್ನು‌‌ ‌ಪ್ರೊ.‌ ‌ಚಂದ್ರಶೇಖರ‌ ‌ವಸ್ತ್ರದ‌ ಅವರು ನಾಟಕಕ್ಕೆ ರೂಪಾಂತರಿಸಿದರೆ,‌ ‌ಬಡವಿಯ‌ ‌ಬಾವಿ‌ ‌ಕಥೆಯನ್ನುಸತೀಶ‌ ‌ಕುಲಕರ್ಣಿ‌ ಅವರು ನಾಟಕಕ್ಕೆ ‌ರೂಪಾಂತರಿಸಿದ್ದಾರೆ.‌ ಸೂಕ್ತ ಹಾಗೂ ಪರಿಣಾಮಕಾರಿ ಸಂಭಾಷಣೆ, ಸನ್ನಿವೇಶಗಳ ಜೋಡಣೆಯ ಕುಸುರಿ ಕೆಲಸದಿಂದ ಈ ನಾಟಕಗಳು ಪ್ರೇಕ್ಷಕರನ್ನು ಸೆಳೆಯುತ್ತವೆ.

About the Author

ಸತೀಶ ಕುಲಕರ್ಣಿ
(13 July 1951)

ಕವಿ, ಕಲಾವಿದ, ನಾಟಕಕಾರ ಸತೀಶ ಕುಲಕರ್ಣಿ ಅವರು 1951 ಜುಲೈ 13 ರಂದು ಧಾರವಾಡದಲ್ಲಿ ಜನಿಸಿದರು. ತಾಯಿ ಲೀಲಾಬಾಯಿ, ತಂದೆ ನೀಲಕಂಠರಾವ್ ಕುಲಕರ್ಣಿ. ಬಾಲ್ಯದಿಂದಲೂ ರಂಗಭೂಮಿಯಲ್ಲಿ ಆಸಕ್ತಿ ಇದ್ದ ಇವರು ಹಲವಾರು ನಾಟಕಗಳಲ್ಲಿ ಅಭಿನಯಿಸಿದ್ದಾರೆ ಹಾಗೂ ನಿರ್ದೇಶಿಸಿದ್ದಾರೆ.  ಲಂಕೇಶರ ತೆರೆಗಳು, ಜೋಕುಮಾರಸ್ವಾಮಿ, ಕುಂಟಾಕುಂಟಾ ಕುರವತ್ತಿ, ಪ್ರಸ್ತುತ, ಬಂಗಾರದ ಕೊಡ, ಗಾಂಧಿ ಹಬ್ಬಿದ ಗಿಡ, ಪರಸಪ್ಪನ ಕಥೆ, ಅನಾಮಿಕ, ಕಂಪ್ಯೂಟರ್, ದೊಡ್ಡಮನುಷ್ಯ, ಹಾವು ಬಂತು ಹಾವು, ಗಗ್ಗಯ್ಯನ ಗಡಿಬಿಡಿ, ಗಾಡಿಬಂತುಗಾಡಿ ಮುಂತಾದ ನಾಟಕ ನಿರ್ದೇಶನ ಮತ್ತು ಅಭಿನಯ.   ‘ವಿಷಾದಯೋಗ, ಗಾಂಧಿಗಿಡ, ಕಂಪನಿ ಸವಾಲ್, ಬೆಂಕಿನೀರು, ನೆಲದ ನೆರಳು, ವಿಕ್ಷಿಪ್ತ: ಗಾಂಧಿ ಒಡಲಾಳ ...

READ MORE

Related Books