ವಿಗಡ ವಿಕ್ರಮರಾಯ

Author : ಸಂಸ (ಎ.ಎನ್.ಸ್ವಾಮಿ ವೆಂಕಟಾದ್ರಿ ಅಯ್ಯರ್)

Pages 84

₹ 50.00




Year of Publication: 2015
Published by: ಅಭಿನವ ಪ್ರಕಾಶನ
Address: # 17, 18-2, 1ನೇ ಮುಖ್ಯರಸ್ತೆ, 2ನೇ ಬ್ಲಾಕ್, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-560040

Synopsys

ಹಿರಿಯ ಲೇಖಕ ಸಂಸ (ಎ.ಎನ್.ಸ್ವಾಮಿ ವೆಂಕಟಾದ್ರಿ ಅಯ್ಯರ್) ಅವರು ಬರೆದ ಐತಿಹಾಸಿಕ ನಾಟಕ ಕೃತಿ-ವಿಗಡ ವಿಕ್ರಮರಾಯ. 1926-26ರಲ್ಲಿ ರಚಿಸಿದ ಈ ನಾಟಕವನ್ನು ಮೊದಲ ಬಾರಿಗೆ ‘ಪ್ರಬುದ್ಧ ಕರ್ನಾಟಕ’ ಪತ್ರಿಕೆ ಪ್ರಕಟಿಸಿತ್ತು. ಇವರನ್ನು ಚಾರಿತ್ರಿಕ ನಾಟಕಗಳ ಪಿತಾಮಹಾ ಎಂದು ಕರೆಯಲಾಗುತ್ತದೆ. ಮೈಸೂರು ಮಹಾರಾಜರ ಕಾಲದ ದಳವಾಯಿಯೊಬ್ಬರ ಹಣದ ದಾಹ, ಅಧಿಕಾರ ಮೋಹ, ಭ್ರಷ್ಟಾಚಾರ ಇಲ್ಲಿಯ ಕಥಾ ವಸ್ತು. ಈ ಬಗ್ಗೆ ಮಹಾರಾಜರು ತನಿಖೆ ನಡೆಸಲು ಆದೇಶಿಸುತ್ತಿದ್ದಂತೆ, ದಾಖಲೆಗಳ ತಿದ್ದುಪಡಿಗೆ ವಿಕ್ರಮರಾಯ ಆತುರ ಪಡುತ್ತಾನೆ. ಮಹಾರಾಜರನ್ನೂ ಸಹ ಕೊಲ್ಲುವ ಸಂಚು ರೂಪಿಸುತ್ತಾನೆ. ಆಸ್ಥಾನ ವೈದ್ಯ ಬೊಮ್ಮರಸ ಪಂಡಿತನನ್ನು ಬಳಸಿಕೊಳ್ಳುತ್ತಾನೆ. ಮಹಾರಾಜರನ್ನು(ಇಮ್ಮಡಿರಾಜ) ಕೊಂದ ನಂತರ ರಣಧೀರ ಕಂಠೀರವನನ್ನು ಪಟ್ಟಕ್ಕೇರಲು ಆಹ್ವಾನಿಸುತ್ತಾನೆ. ವಿಗಡ ವಿಕ್ರಮರಾಯನ ಲೆಕ್ಕಾಚಾರ ತಪ್ಪುತ್ತದೆ. ರಣಧೀರ ಕಂಠೀರವ ಈತನ ಹೇಳಿದ ಹಾಗೆ ಕೇಳುವುದಿಲ್ಲ. ಆಗ ವಿಕ್ರಮರಾಯನ ಕೊಲೆಯಾಗುತ್ತದೆ. ಇದು ಇತಿಹಾಸ ಸಂಗತಿಯ ಕಥಾ ವಸ್ತುವಾಗಿದ್ದರೂ ಇಂದಿಗೂ ರಾಜಕಾರಣದ ಇಂತಹ ಸಂಚುಗಳು ಚಾಲ್ತಿಯಲ್ಲಿರುವುದನ್ನು ಕಾಣುತ್ತೇವೆ.

About the Author

ಸಂಸ (ಎ.ಎನ್.ಸ್ವಾಮಿ ವೆಂಕಟಾದ್ರಿ ಅಯ್ಯರ್)
(13 January 1898)

ಸಂಸ ಎಂಬ ಕಾವ್ಯನಾಮದಿಂದ ಗುರುತಿಸಿಕೊಂಡಿದ್ದ ಲೇಖಕ ಎ.ಎನ್.ಸ್ವಾಮಿ ವೆಂಕಟಾದ್ರಿ ಅಯ್ಯರ್ ಮೂಲತಃ ಯಳಂದೂರು ತಾಲ್ಲೂಕಿನ ಅಗರ ಗ್ರಾಮದವರು. ತಂದೆ- ನರಸಿಂಹ ಪಂಡಿತರು, ತಾಯಿ- ಗೌರಮ್ಮ. ಪ್ರಾಥಮಿಕ ಶಿಕ್ಷಣವನ್ನು ಕೊಳ್ಳೆಗಾಲದ ಕುನಗನಹಳ್ಳಿಯಲ್ಲಿ ಮತ್ತು ಮಾಧ್ಯಮಿಕ ಶಿಕ್ಷಣವನ್ನು ಕೊಳ್ಳೆಗಾಲದ ತಾಲ್ಲೂಕು ಬೋರ್ಡ್ ಮಿಡ್ಲ್ ಸ್ಕೂಲಿನಲ್ಲಿ ಪೂರ್ಣಗೊಳಿಸಿದ ಅವರು ಹೈಸ್ಕೂಲು ಓದಿದ್ದು ಮೈಸೂರಿನ ಮರಿಮಲ್ಲಪ್ಪ ಸ್ಕೂಲಿನಲ್ಲಿ. ಮೆಟ್ರಿಕ್ಯುಲೇಷನ್ ಮುಗಿಸದಿದ್ದರೂ ತಮಿಳು, ಇಂಗ್ಲಿಷ್ ಭಾಷೆಗಳಲ್ಲಿ ಪ್ರಾವೀಣ್ಯತೆ ಪಡೆದಿದ್ದ ಸಂಸ ಅವರು ತಮ್ಮ 17ನೇ ವಯಸ್ಸಿನಲ್ಲಿ ಕೌಶಲ ಎಂಬ ಕಾದಂಬರಿಯನ್ನು ಪ್ರಕಟಿಸಿದ್ದರು. ಬಹುಮುಖ ಪ್ರತಿಭೆಯಾಗಿದ್ದ ಸಂಸ ಅವರು ತಂದೆಯ ಮರಣದಿಂದಾಗಿ ಸಾಂಸಾರಿಕ ಬಂಧನಗಳಿಂದ ದೂರವಾಗಿದ್ದರು. ಇದೇ ...

READ MORE

Related Books