ಉರ್ವಿ

Author : ಆನಂದ ಋಗ್ವೇದಿ

Pages 57

₹ 25.00




Year of Publication: 2003
Published by: ಕೆ.ಎಸ್. ಮುದ್ದಪ್ಪ ಸ್ಮಾರಕ ಟ್ರಸ್ಟ್
Address: ಕೃಷ್ಣಾಪುರದೊಡ್ಡಿ, # 1149, 3ನೇ ಅಡ್ಡರಸ್ತೆ, 8ನೇ ಮುಖ್ಯರಸ್ತೆ, ಆರ್.ಪಿ.ಸಿ. ಲೇಔಟ್, ಬೆಂಗಳೂರು-560040
Phone: 0803409512

Synopsys

ಲೇಖಕ ಆನಂದ ಋಗ್ವೇದಿ ಅವರ ನಾಟಕ ಕೃತಿ ‘ಉರ್ವಿ. ಅಖಿಲ ಭಾರತ 71ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯು ಪುಸ್ತಕ ಪ್ರಕಟಣೆಗೆ ನೀಡುವ ಧನಸಹಾಯ ಯೋಜನೆಯಡಿ ಈ ಕೃತಿ ಪ್ರಕಟಗೊಂಡಿದೆ. ಸಾಹಿತಿ ಎ.ಎಸ್. ಪ್ರಭಾಕರ ಅವರು ಕೃತಿಗೆ ಬೆನ್ನುಡಿ ಬರದು ‘ಉರ್ವಿ -ಈ ನೆಲದ, ಸಮಾಜದ ಕಥೆ. ಸಮಾಜ ಸಂಘರ್ಷದ ಕಥೆ. ಈ ನೆಲ ತಮ್ಮದೇ ಎಂದು ತಿಳಿದಿರುವ ಆಳುವ ದೊರೆಗಳ ಅಹಂಕಾರ ಹಾಗೂ ಆಳಿಸಿಕೊಳ್ಳುತ್ತಿರುವ ಸಹಾಯಕರ ಪ್ರತಿರೋಧಗಳ ತೀವ್ರತೆಗಳನ್ನು ಕಟ್ಟಿಕೊಡುವ ಕಥೆ. ಪೌರಾಣಿಕ ಸನ್ನಿವೇಶದ ವಿನ್ಯಾಸವೊಂದರಲ್ಲಿ ಆಧುನಿಕ ಇಂಡಿಯಾ ಈ ನಾಟಕ ಅನಾವರಣ ಮಾಡುತ್ತದೆ. ಉರ್ವಿಯನ್ನು ಓದುತ್ತಿದ್ದಂತೆ ಭಾರತ ಸರ್ಕಾರ ಹಠಕ್ಕೆ ಬಿದ್ದು ಕಟ್ಟಿದ ಸರ್ದಾರ ಸರೋವರದಲ್ಲಿ ಮುಳುಗಿ ಸತ್ತ ಆದಿವಾಸಿಗಳು, ಗುಜರಾತಿನ ಕಗ್ಗೊಲೆಗಳಲ್ಲಿ ಪ್ರಾಣಬಿಟ್ಟ ಅಮಾಯಕರು ಕಣ್ಣೆದುರು ನಿಲ್ಲುತ್ತಾರೆ. ವರ್ತಮಾನದ ಹಿಂಸೆ ಹಾಗೂ ತಲ್ಲಣಗಳನ್ನುಸರಳವಾಗಿ ಹಾಗೂ ತೀವ್ರವಾಗಿ ಹೇಳುವ ಕ್ರಮವೇ ಈ ನಾಟಕವನ್ನು ಸಮಕಾಲೀನ ಗೊಳಿಸುತ್ತದೆ. ತಮ್ಮ ಹಕ್ಕುಗಳಿಗಾಗಿ ಎಚ್ಚೆತ್ತು ನಿಂತವರಿಗೆ, ಮಾನವತೆಯನ್ನು ಕನಸುವವರಿಗೆ ಹಾಗೂ ಪ್ರತಿರಾಜಕಾರಣವನ್ನು ಹಂಬಲಿಸುವವರಿಗೆ ಈ ನಾಟಕ ಇಷ್ಟವಾಗುತ್ತದೆ’ ಎಂದು ಪ್ರಶಂಸಿಸಿದ್ದಾರೆ.

About the Author

ಆನಂದ ಋಗ್ವೇದಿ
(24 May 1974)

ಬರಹಗಾರ ಡಾ. ಆನಂದ್ ಋಗ್ವೇದಿ ಅವರು ಜನಿಸಿದ್ದು 1974ರ ಮೇ 24 ಚಿತ್ರದುರ್ಗ ಜಿಲ್ಲೆ ಗುಂಜಿಗನೂರಿನಲ್ಲಿ. ತಂದೆ-  ರಾಘವೇಂದ್ರ ರಾವ್ ತಿರುಮಲಾರಾಯ ಕುಕ್ಕವಾಡ, ತಾಯಿ ಜಿ.ಎಸ್. ಸುಶೀಲಾದೇವಿ ಆರ್. ರಾವ್. ವೃತ್ತಿಯಲ್ಲಿ ದಾವಣಗೆರೆಯ ಸರ್ಕಾರಿ (ಚಿಗಟೇರಿಯವರ ಸ್ಮಾರಕ) ಜಿಲ್ಲಾ ಆಸ್ಪತ್ರೆಯಲ್ಲಿ ಸಹಾಯಕ ಆಡಳಿತ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವಿಜ್ಞಾನ ಪದವೀಧರರು. ಕನ್ನಡದಲ್ಲಿ ಸ್ನಾತಕೋತ್ತರ ಪದವೀಧರರು. ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಪಿ.ಎಚ್.ಡಿ ಪದವಿ ಪಡೆದಿದ್ದಾರೆ.  ಕತೆ, ಕವಿತೆ, ಪ್ರಬಂಧ, ವಿಮರ್ಶೆ, ನಾಟಕ, ಸಂಶೋಧನೆ. . ಮೊದಲಾದ ಪ್ರಕಾರಗಳಲ್ಲಿ ಬರಹ.  ‘ಜನ್ನ ಮತ್ತು ಅನೂಹ್ಯ ಸಾಧ್ಯತೆ’, ‘ಮಗದೊಮ್ಮೆ ನಕ್ಕ ಬುದ್ಧ’ ‘ಕರಕೀಯ ಕುಡಿ’ ...

READ MORE

Reviews

ಹೊಸತು-2004- ಮೇ

ಪುರಾಣಗಳಲ್ಲಿ ನಾವು ಓದುತ್ತಿರುವ ವಿಷಯಗಳಿಗೂ ಇಂದಿನ ಈ ನಮ್ಮ ನೆಲದ ಮೇಲೆ ನಡೆಯುವ ಘಟನೆಗಳಿಗೂ ಸಾಮ್ಯತೆ  ಇದೆಯೇ ? ಅವುಗಳೆಲ್ಲಾ ಮರುಕಳಿಸುವಂತೆ ನಮಗೆ ಅನ್ನಿಸುತ್ತಿದೆಯೇ ? ಕೌರ್ಯ-ಹಿಂಸೆ- ಶಾಂತಿ-ಪ್ರೇಮ ಮಾತ್ರವಲ್ಲ ಉತ್ತಮ ಹಾಗೂ ಅಧಮ ವಿಚಾರಗಳೆಲ್ಲವೂ ಎಲ್ಲ ಕಾಲದಲ್ಲೂ ಮನುಷ್ಯನನ್ನು ಕಾಡಿವೆ. ದುರಹಂಕಾರ ದರ್ಪ ಯಾವ ರಾಜಮನೆತನದವರನ್ನೂ ಬಿಟ್ಟಿಲ್ಲ ವಾದ್ದರಿಂದಲೇ ಖಾಂಡವ ದಹನ ರಾಜಸೂಯದಂಥ ಅತಿರೇಕಗಳು ವಿಜೃಂಭಿಸಿದವು. ಪುರಾಣದ ಪಾತ್ರಗಳನ್ನು ಮುಂದಿಟ್ಟು ವಾಸ್ತವವನ್ನೂ ತಿಳಿಸುವ ಒಂದು ನಾಟಕ.

Related Books