ಜಯಂತ ಕಾಯ್ಕಿಣಿ ರೂಪಾಂತರ ನಾಟಕಗಳು

Author : ಜಯಂತ ಕಾಯ್ಕಿಣಿ

Pages 248

₹ 225.00




Year of Publication: 2018
Published by: ಅಂಕಿತ ಪುಸ್ತಕ
Address: 53, ಶ್ಯಾಮ್‌ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು - 560 004
Phone: 080 - 26617100 / 26617755

Synopsys

ಖ್ಯಾತ ಸಾಹಿತಿ, ಲೇಖಕ ಜಯಂತ ಕಾಯ್ಕಿಣಿ ಅವರ ಮೂರು ನಾಟಕಗಳ ಸಂಕಲನ ‘ಜಯಂತ ಕಾಯ್ಕಿಣಿ ರೂಪಾಂತರ ನಾಟಕ’ ಈ ಕೃತಿಯ ಬಗ್ಗೆ ಮಾತಾಡುತ್ತಾ ಕಾಯ್ಕಿಣಿ ಅವರು ಹೇಳುವ ಮಾತುಗಳಿವು. ‘ಒಂದರ್ಥದಲ್ಲಿ ಮೂರಂಕಿನ ಪುಸ್ತಕ ಇದು. ಎರಡನ್ನು ನೀನಾಸಂ ತಿರುಗಾಟಕ್ಕಾಗಿ, ಒಂದನ್ನು ಸಂಕೇತ್ ತಂಡಕ್ಕಾಗಿ ಬರೆದಿದ್ದೆ. ಹಿಂದೆ ಬಿಡಿಯಾಗಿ ಪ್ರಕಟಗೊಂಡಿದ್ದ ಮೂರೂ ನಾಟಕಗಳನ್ನು ಪ್ರಾರಂಭಿಕ ಪುಟಗಳೊಂದಿಗೆ ಇಲ್ಲಿ ಸಂಕಲಿಸಲಾಗಿದೆ’ ಎನ್ನುತ್ತಾರೆ. ಆಯಾ ನಾಟಕಗಳ ಪ್ರಥಮ ಪ್ರಯೋಗದ ಕಲಾವಿದ, ತಂತ್ರಜ್ಞರ ಯಾದಿಯನ್ನು ಈಗ ನೋಡಲು ಖುಶಿಯಾಗುತ್ತದೆ, ಬಾಲ್ಯದ ಗ್ರೂಪ್ ಫೋಟೋ ನೋಡಿದಂತೆ.

ಕಳೆದೆರಡು ದಶಕಗಳಿಂದ ನಾನಾ ತಂಡಗಳು ಆಗಾಗ ಆಡುತ್ತ ಈ ನಾಟಕಗಳನ್ನು ಜೀವಂತವಾಗಿರಿಸಿವೆ. ಆಡಿದಾಗಲೇ ಅದು ನಾಟಕ. ಪುಟಗಳಿಂದ ಎದ್ದು ರಂಗದ ಮೇಲೆ ಬಂದಾಗಲೇ ಅದು ಬರಹದ ಭಾಗ್ಯ, ಇಲ್ಲವಾದರೆ, ಕವಿ ಗಂಗಾಧರ ಚಿತ್ತಾಲ ಕಾವ್ಯದ ಬಗ್ಗೆ ಹೇಳುವಂತೆ ಅದು - “ತಕ್ಕ ಮಣ್ಣಿನ ತೇವಕ್ಕಾಗಿ ಕಾದೇ ಇರುವ ಬೀಜ.” ಈ ನಡುವೆ, ಕಾರಾಗೃಹದಲ್ಲಿರುವ ಕೈದಿಗಳ ವಿಕಾಸ ಚಟುವಟಿಕೆಯ ಅಂಗವಾಗಿ, ರಂಗಾಯಣದ ಹುಲಿಗೆಪ್ಪ ಕಟ್ಟಿಮನಿ, ಕೈದಿಗಳ ಜೊತೆಗಿದ್ದು, ಅವರಿಂದಲೇ ಜತೆಗಿರುವನು ಚಂದಿರ” ಆಡಿಸಿದರು. ಸಮಾಜದ ದೃಷ್ಟಿಯಲ್ಲಿ ಅಪರಾಧಿಗಳಾಗಿ ಸಜೆ ಉಣ್ಣು ತಿರುವ ಕೈದಿಗಳು ಅದೇ ಸಮಾಜದ ಮುಂದೆ ಒಂದು ರಂಗಕೃತಿಯಲ್ಲಿ ಅರಳಿ, ಕೊನೆಯಲ್ಲಿ ಕೈಕೈ ಹಿಡಿದು ಸಾಲಾಗಿ ನಿಂತು, ಕಣ್ಣಲ್ಲಿ ಕಣ್ಣಿಟ್ಟು ಪ್ರಚಂಡ ಕರತಾಡನ ಸ್ವೀಕರಿಸುತ್ತ, ತಲೆಬಾಗಿದ ಕ್ಷಣ ಆಧ್ಯಾತ್ಮಿಕವಾಗಿತ್ತು. ಎಂಬುದು ಕಾಯ್ಕಿಣಿ ಅವರ ಅಭಿಪ್ರಾಯ. 

About the Author

ಜಯಂತ ಕಾಯ್ಕಿಣಿ
(24 January 1955)

ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ಜನಿಸಿದ ಜಯಂತ ಅವರ ತಂದೆ ಗೌರೀಶ ಕಾಯ್ಕಿಣಿ ಹೆಸರಾಂತ ವಿಚಾರವಾದಿ ಲೇಖಕ.  ಆಧುನಿಕ ಬದುಕಿನ ಆತಂಕಗಳನ್ನು ಕತೆಯಾಗಿಸುವ ಜಯಂತ ಕಾಯ್ಕಿಣಿ ಅವರು ಕನ್ನಡದ ಪ್ರಮುಖ ಕತೆಗಾರರಲ್ಲಿ ಒಬ್ಬರು.  ’ಕತೆಗಾರ’ ಎಂಬ ವಿಶೇಷಣ ಇದೆಯಾದರೂ ಅವರೊಬ್ಬ ಪ್ರಮುಖ ಕವಿ ಕೂಡ ಹೌದು. ಪ್ರಬಂಧ, ಅಂಕಣ ಬರಹ, ಚಲನಚಿತ್ರ ಸಂಭಾಷಣೆ ಮತ್ತು ಗೀತರಚನೆ ಹೀಗೆ ಹಲವು ಪ್ರಕಾರಗಳಲ್ಲಿ ಹೆಜ್ಜೆಗುರುತು ಮೂಡಿಸಿದ್ದಾರೆ. ’ಭಾವನಾ’ ಮಾಸಿಕ ಪತ್ರಿಕೆಯ ಸಂಪಾದಕರಾಗಿದ್ದ ಜಯಂತ ಅವರು ಈಟಿವಿ ವಾಹಿನಿಗಾಗಿ ’ನಮಸ್ಕಾರ’, ಬೇಂದ್ರೆ, ಕುವೆಂಪು, ಕಾರಂತ ನಮನ ಸರಣಿಯ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ರಂಗದಿಂದೊಂದಿಷ್ಟು ದೂರ, ಕೋಟಿತೀರ್ಥ, ಶ್ರಾವಣ ಮಧ್ಯಾಹ್ನ, ...

READ MORE

Related Books