‘ತೀರದ ತುಡಿತ’ ಆರತಿ ಪೆಟ್ರಮೆ ಅವರ ಪ್ರಬಂಧ ಸಂಕಲನ. ನಗರ ಜೀವನದ ಗತ್ತು-ಗಮ್ಮತ್ತುಗಳನ್ನು ಕರಾವಳಿ ಬದುಕಿನ ಹಿನ್ನೆಲೆಯಲ್ಲಿ ನವಿರಾಗಿ ಹೇಳುವ ಪ್ರಯತ್ನ ಇಲ್ಲಿನ ಪ್ರಬಂಧಗಳಲ್ಲಿದೆ. ಇವುಗಳ ನಡುವೆ ಮಂಗಳೂರಿನ ಹಲವು ಚಿತ್ರಗಳಿವೆ. ಹಾಗೆಂದು ಇವು ಒಂದು ಊರಿಗೋ ನಗರಕ್ಕೋ ಸೀಮಿತವಾದುದ್ದಲ್ಲ. ಓದುತ್ತಾ ಹೋದಂತೆ ಇವು ಎಲ್ಲೆಲ್ಲೂ ಇವೆಯಲ್ಲ ಎಂದು ಹೊಳೆದು `ಅರೆ ನಾವೂ ಇಲ್ಲಿದ್ದೇವೆ ' ಎಂದೆನಿಸಿ ಮುಖದಲ್ಲಿ ಮಂದಹಾಸ ಮೂಡದೆ ಇರದು. ಸದಾ ಧಾವಂತದ ಬಿಂಬದಂತಿರುವ ಎಂ.ಜಿ. ರೋಡು, ತುರ್ತು ಸಂದರ್ಭದಲ್ಲೇ ಕೈಕೊಡುವ ಕರೆಂಟು ಸಿಟಿಬಸ್ಸುಗಳೆಂಬ ಮಹಾಸಭೆ, ಸಮಯಹರಣಕ್ಕೆಂದೇ ಇರುವ ವಿಂಡೋ ಶಾಪಿಂಗ್ ಅಲ್ಲದೆ ಮನೆಯೊಳಗಿನ ತೊಟ್ಟಿಲ ಕೊಂಡಿಯೂ ಇಲ್ಲಿನ ಲೇಖನಗಳಿಗೆ ವಸ್ತುವಾಗಿದೆ. ಸದಾ ವಿಸ್ಮಯದ ಒಡಲೆನಿಸುವ ಮಂಗಳೂರಿನ ಕಡಲು, ಕುಚ್ಚಿಲಕ್ಕಿಯ ಗಂಜಿ, ವರ್ಣವೈಭವದ ಯಕ್ಷಗಾನ, ಮೀನಿನ ಊಟವೆಂಬ ಬ್ರಾಂಡ್, ದೇಹವನ್ನೇ ಬಸಿಯುವಂಥ ಸೆಕೆ, ಧೋ ಎಂದು ಸುರಿಯುವ ಮುಸಲ ಧಾರೆ..ಮುಂತಾದ ಆಪ್ತ ನೋಟಗಳಿಂದ ಪುಸ್ತಕ ಹೃದಯಕ್ಕೆ ಹತ್ತಿರವಾಗುತ್ತದೆ.
ಲೇಖಕಿ ಆರತಿ ಪಟ್ರಮೆ ವೃತ್ತಿಯಲ್ಲಿ ಇಂಗ್ಲಿಷ್ ಉಪನ್ಯಾಸಕರು; ಪ್ರವೃತ್ತಿಯಲ್ಲಿ ಯಕ್ಷಗಾನ ಕಲಾವಿದೆ ಹಾಗೂ ಲೇಖಕಿ. ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸದಸ್ಯರು. ಮೂಲತಃ ದಕ್ಷಿಣ ಕನ್ನಡದವರು. ಉಜಿರೆಯ ಎಸ್ ಡಿ ಎಂ ಕಾಲೇಜಿನಲ್ಲಿ ಪತ್ರಿಕೋದ್ಯಮ, ಇಂಗ್ಲಿಷ್ ಸಾಹಿತ್ಯ ಹಾಗೂ ಮನಃಶಾಸ್ತ್ರದಲ್ಲಿ ಬಿಎ ಪದವಿ ಪೂರೈಸಿ ಮಂಗಳೂರು ವಿಶ್ವವಿದ್ಯಾನಿಲಯದಿಂದ 2005ರಲ್ಲಿ ಇಂಗ್ಲಿಷ್ ಎಂ.ಎ. ಪದವಿ ಪಡೆದರು. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಿಂದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಎಂ.ಎ. ಪದವಿಯನ್ನೂ ಪಡೆದಿದ್ದಾರೆ. ‘ವಿಜಯ್ ಟೈಮ್ಸ್’ ಇಂಗ್ಲಿಷ್ ದೈನಿಕದಲ್ಲಿ ಉಪಸಂಪಾದಕಿಯಾಗಿ ವೃತ್ತಿಜೀವನವನ್ನು ಆರಂಭಿಸಿ, ಮುಂದೆ ಉಜಿರೆ ಎಸ್ ಡಿ ಎಂ ಕಾಲೇಜಿನಲ್ಲಿ ...
READ MORE