ಪ್ರಕಾಶ್ ನಾಯಕ್ ಅವರ ಪ್ರಬಂಧಗಳ ಸಂಕಲನ-ಬದಲಾವಣೆಯ ಬೆನ್ನಟ್ಟಿ. ಕಲೈಡೋಸ್ಕೋಪಿನಲ್ಲಿ ಕಾಲನ ಹೆಜ್ಜೆಗಳು-ಉಪಶೀರ್ಷಿಕೆಯ ಈ ಕೃತಿಯನ್ನು ಪ್ರಕಾಶ ನಾಯಕ್ ಅವರು ಶಂಕರ ಹೆಗಡೆ ಅವರೊಂದಿಗೆ ಸಂಪಾದಿಸಿದ್ದಾರೆ. ಪ್ರಬಂಧಗಳು ವಸ್ತುವಿನ ವೈವಿಧ್ಯತೆ, ನಿರೂಪಣಾ ಶೈಲಿ, ಸಾಮಾಜಿಕ ಹೊಣೆಗಾರಿಕೆಯ ಎಚ್ಚರಿಕೆ ಇತ್ಯಾದಿ ಅಂಶಗಳಿಂದ ಈ ಕೃತಿಯು ಓದುಗರನ್ನು ಸೆಳೆಯುತ್ತದೆ. .
ಲೇಖಕ, ಕಾದಂಬರಿಕಾರ ಪ್ರಕಾಶ್ ನಾಯಕ್ ಅವರು ಉತ್ತರ ಕನ್ನಡ ಜಿಲ್ಲೆಯ ಹನೇಹಳ್ಳಿಯವರು. ಓದಿದ್ದು ಇಲೆಕ್ಟ್ರಿಕಲ್ ಇಂಜಿನಿಯರಿಂಗ್ ಆದರೂ ಸಾಹಿತ್ಯಾಸಕ್ತರು. ಪ್ರಸ್ತುತ ಅಮೇರಿಕೆಯಲ್ಲಿನ ಉತ್ತರ ಕ್ಯಾಲಿಫೋರ್ನಿಯಾದ ಕುಪರ್ಟಿನೋದಲ್ಲಿ ವಾಸ. ಸಾಂತಾ ಕ್ಲಾರಾದಲ್ಲಿನ ಮಾರ್ವೆಲ್ ಸೆಮಿಕಂಡಕ್ಟರ್ ಕಂಪನಿಯಲ್ಲಿ ಪ್ರಾಜೆಕ್ಟ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ. ಅಮೇರಿಕೆಯಲ್ಲಿನ ಕನ್ನಡ ಕೂಟ, ಅಕ್ಕ, ಕನ್ನಡ ಸಾಹಿತ್ಯ ರಂಗಗಳ ಪ್ರಕಟಣೆಯಲ್ಲಿ ಸಂಪಾದಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ‘ಅಮೂರ್ತ ಚಿತ್ತ’ ಇವರ ಪ್ರಕಟಿತ ಕಥಾಸಂಕಲನ. ‘Albert Camusನ The Stranger’ ಎಂಬ ಆಂಗ್ಲಾದ ಕಾದಂಬರಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಇವರ ಹಲವಾರು ಕಥೆಗಳು ಕನ್ನಡದ ಪ್ರಮುಖ ನಿಯತಕಾಲಿಕಗಳಲ್ಲಿ ಪ್ರಕಟವಾಗಿದ್ದು ‘ಅಂತು’ ಕಾದಂಬರಿ ಛಂದ ...
READ MORE