ಪರ್ಣಕುಟಿ-ಸಿದ್ಧವನಹಳ್ಳಿ ಕೃಷ್ಣಶರ್ಮ ಅವರ ಕೃತಿ. 1938-39ರ ಅವಧಿಯಲ್ಲಿ ತಮ್ಮ ಮನಸ್ಸಿನಲ್ಲಿ ಮೂಡಿರುವ ವಿಚಾರ-ಭಾವಗಳಿಗೆ ಬಂದ ಚಿತ್ರಗಳಾಗಿವೆ. ರಾಜಕಾರಣದ ಸಲಹೆ ಕೇಳಲು ಹೋದರೂ ಅವರಿಗೆ ದೊರೆಯುವುದು ಧಾರ್ಮಿಕ ಅನುಭಾವ. ಇಂತಹ ಪರ್ಣಕುಟಿಯಲ್ಲಿ ಗಾಂಧೀಜಿಯ ಧಾರ್ಮಿಕ ಜೀವನ, ನಂಬಿದ ಸಂಸ್ಕೃತಿ, ಪರ್ಣಕುಟಿ ಅಂಗಳದಲ್ಲಿ ನಡೆದ ಪ್ರಾರ್ಥನೆ, ಒಬ್ಬ ವ್ಯಕ್ತಿ ಹೇಗೆ ತನ್ನ ಕುಟುಂಬ, ರಾಜಕಾರಣ, ಸ್ವಾತಂತ್ಯ್ರ ಹೋರಾಟ, ಗಲಭೆ-ಗೊಂದಲ, ಪ್ರಾರ್ಥನೆ, ಸ್ವದೇಶಿ ಪರಿಕಲ್ಪನೆ ಹೀಗೆ ಎಲ್ಲವನ್ನೂ ಸರಳವಾಗಿ ಉಸಿರಾಡಿಸುವಂತೆ ಮೈಗೂಡಿಸಿಕೊಂಡಿದ್ದರ ಬಗ್ಗೆ , ಪರ್ಣಕುಟಿಯಲ್ಲಿಯ ತಮ್ಮ ಅನುಭವಗಳನ್ನು ಲೇಖಕರು ಬರೆದಿದ್ದಾರೆ.
ಪ್ರಸಿದ್ಧ ಪತ್ರಿಕೋದ್ಯಮಿ, ಸಾಹಿತಿ, ಗಾಂಧೀವಾದಿ ಸಿದ್ದವನಹಳ್ಳಿ ಕೃಷ್ಣಶರ್ಮ ಚಿತ್ರದುರ್ಗ ಜಿಲ್ಲೆಯ ಸಿದ್ದವನಹಳ್ಳಿಯವರು. ಅವರು 1904 ಜುಲೈ 31ರಂದು ಜನಿಸಿದರು. ಚಿತ್ರದುರ್ಗ, ಮೈಸೂರುಗಳಲ್ಲಿ ಪ್ರಥಮ ಬಿ. ಎ. ತರಗತಿವರೆಗೆ ಓದಿದರು. ಭಾರತ ಸ್ವಾತಂತ್ರ್ಯ ಸಂಗ್ರಾಮದ ಪ್ರಭಾವಕ್ಕೆ ಒಳಗಾಗಿ ಓದನ್ನು ಬಿಟ್ಟು ದೇಶ ಸೇವೆಗೆ ದುಮುಕಿದರು. ಜೊತೆಗೆ ಪತ್ರಿಕೋದ್ಯಮ, ಬರೆವಣಿಗೆ ಕೆಲಸವನ್ನೂ ನಡೆಸಿದರು. 1942ರ ಕ್ವಿಟ್ ಇಂಡಿಯ ಚಳವಳಿಯಲ್ಲಿ ಭಾಗವಹಿಸಿ ಸೆರೆಮನೆ ಶಿಕ್ಷೆಗೆ ಒಳಗಾಗಿದ್ದರು. ಕನ್ನಡ ಪತ್ರಿಕೋದ್ಯಮದ ಏಳ್ಗೆಗೆ ಶ್ರಮಿಸಿದವರಲ್ಲಿ ಸಿದ್ಧವನಹಳ್ಳಿ ಪ್ರಮುಖರು. ಕನ್ನಡದಲ್ಲಿ ’ಹರಿಜನ’ ಪತ್ರಿಕೆ ಪ್ರಕಟಿಸಿದ ಅವರು ’ವಿಶ್ವ ಕರ್ನಾಟಕ’ ಪತ್ರಿಕೆಗೆ ಕೆಲಕಾಲ ಸಂಪಾದಕರಾಗಿದ್ದರು. ಆ ಪತ್ರಿಕೆಯಲ್ಲಿ ...
READ MORE