ಸಾಹಿತಿ, ಕತೆಗಾರ, ಅನುವಾದಕರಾದ ಎಸ್. ದಿವಾಕರ್ ಅವರ ಪ್ರಬಂಧಗಳ ಸಂಕಲನ’ ಒಂದೊಂದು ನೆನಪಿಗೂ ಒಂದೊಂದು ವಾಸನೆ’.
ಖಾಲಿ ಕ್ಯಾನ್ವಾಸ್ ತುಂಬೀತು ಹೇಗೆ?, ಒಂದು ಕತೆಯ ತೊಂಬತ್ತೊಂಬತ್ತು ಅವತಾರ, ನಗರಗಳ ಮರಗಳು, ಬಾಲಮುರಳೀ ಕೃಷ್ಣ ಮತ್ತು ಜಾಕ್ಸನ್ ಪೊಲ್ಯಾಕ್, ತೋರುಬೆರಳು ತೋರಲೇಕೆ?, ಸಮಗ್ರ, ಸಂಕಲಿತ, ವಾಚಿಕೆ ಇತ್ಯಾದಿ, ಸಂಬಂಧಗಳು, ಜ್ಷಾನ್ ಜ್ಷಿಯೋನೊ ಮತ್ತು ಸಾಲುಮರದ ತಿಮ್ಮಕ್ಕ, ದ್ವಿತೀಯ ಪುರುಷ ನಿರೂಪಣೆ, ಹಚ್ಚನೆ ಹಸುರದು ಪಚ್ಚೆಯ ವೇದಿಕೆ, ಕನ್ನಡ ಕಾದಂಬರಿ ಕನ್ನಡಕ್ಕೇ ಹಿಂತಿರುಗಿದ ಕಥೆ, ಗಾಂಧೀಜಿ ಮತ್ತು ಪತ್ರಿಕೋದ್ಯಮ, ವಿ,ಸೀ. ಮತ್ತು ಲಂಡನ್, ರಾಗ ತಾಳಗಳ ರಮ್ಯಲೋಕ, ಅತಿಸಣ್ಣಕತೆ, ಕಾವ್ಯ ಮತ್ತು ಜಾಹೀರಾತು, ಆತ್ಮಚರಿತ್ರೆ ಹೀಗೂ ಇರಬಹುದು, ಭಿಕ್ಷುಕರ ಮುಷ್ಕರ, ಲೈಬ್ರರಿ ಎಂಬ ಸಮಾನಾಂತರ ವಿಶ್ವ, ಸಾಹಿತ್ಯವೆಂಬ ಕಲ್ಪನಾಲೋಕ, ಸೂರ್ಯಕಾಂತಿ ಮತ್ತು ವ್ಯಾನ್ ಗೊ, ಲಂಡನ್ನಿನಲ್ಲಿ ಕಾರ್ಲ್ಮಾರ್ಕ್ಸ್, ಜಗಲಿ ಮತ್ತು ಹಿತ್ತಲು ಯಾರು ಧೀಮಂತ ? ಯಾರು ಚಿಂತಕ? ಮುಂತಾದ ಹಲವು ಲೇಖನಗಳನ್ನು ಈ ಕೃತಿ ಒಳಗೊಂಡಿದೆ.
ಎಸ್. ದಿವಾಕರ್ ಅವರು 28 ನವೆಂಬರ್ 1944 ರಲ್ಲಿ ಜನಿಸಿದರು. ಹುಟ್ಟಿದ್ದು ಬೆಂಗಳೂರು ಜಿಲ್ಲೆಯ ಸೋಮತ್ತನಹಳ್ಳಿಯಲ್ಲಿ. ಸಣ್ಣಕಥೆ, ಕಾವ್ಯ, ಪ್ರಬಂಧ, ವಿಮರ್ಶೆ, ಅಂಕಣ ಬರಹ, ಭಾಷಾಂತರ, ಸಂಪಾದನೆ ಇವೆಲ್ಲದರಲ್ಲಿ ಸ್ವೋಪಜ್ಞತೆ ಮತ್ತು ವಿಶಿಷ್ಟತೆ ಮೆರೆದಿರುವ ಎಸ್. ದಿವಾಕರ್, ಸವಿಸ್ತಾರ ಓದಿನ ಜಾಗೃತ ಮನಸ್ಸಿನ ಲೇಖಕರು. ಸುಧಾ, ಪ್ರಜಾವಾಣಿ ಪತ್ರಿಕೆಗಳಲ್ಲಿ ಕೆಲಸ ಮಾಡಿ, ನಂತರ ಅಮೆರಿಕನ್ ಕಾನ್ಸುಲೇಟ್ ಕಚೇರಿಯಲ್ಲಿ ಕನ್ನಡ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ. ಇವರ ಪ್ರಕಟಿತ ಕೃತಿಗಳಾದ ಇತಿಹಾಸ, ಎಲ್ಲ ಬಲ್ಲವರಿಲ್ಲ ಈ ಊರಿನಲ್ಲಿ ಆಯ್ದ ಕತೆಗಳು (ಕಥಾ ಸಂಕಲನಗಳು), ಆತ್ಮಚರಿತ್ರೆಯ ಕೊನೆಯ ಪುಟ (ಕವನ ಸಂಕಲನ), ನಾಪತ್ತೆಯಾದ ಗ್ರಾಮಾಫೋನು, ಕೃಷ್ಣಲೀಲೆಯಿಂದ ರಾಮರಾಜ್ಯಕ್ಕೆ ...
READ MORE