ಹದಿಹರೆಯದ ಮನಸ್ಥಿತಿಯ ವಿಶ್ಲೇಷಣೆ ಚಂದ್ರಶೇಖರ ಆಲೂರು ಅವರ ಕೇಂದ್ರ ಆಸಕ್ತಿ ಎನ್ನಬಹುದು. ಪ್ರಬಂಧದ ವಿಷಯ ಏನೇ ಆಗಿದ್ದರೂ - ಪ್ರೇಮ, ಪ್ರೀತಿ, ಮನುಷ್ಯ ಸಂಬಂಧಗಳು, ಏಕಾಕಿತನ, ಸಾವು, ಕ್ರಿಕೆಟ್, ಸಂಶಯ - ಅದಕ್ಕೆ ತರುಣ ಮನಸ್ಸುಗಳ ಪರವಾಗಿ ಎಂಬಂತೆ ಲೇಖಕರು ಪ್ರತಿಕ್ರಿಯಿಸುತ್ತಾರೆ. ಹೀಗಾಗಿ ಇಲ್ಲಿನ ಎಲ್ಲ ಪ್ರಬಂಧಗಳಲ್ಲಿ ಕೆಲಸ ಮಾಡುವ ಮನಸ್ಸು ಒಂದೇ ಎನಿಸುತ್ತದೆ.
ಇದರಿಂದಾಗಿ ಒಂದು ಬಗೆ ಆಪ್ತತೆ, ಸಮಗ್ರತೆಗಳು ಸಂಕಲನಕ್ಕೆ ಲಭ್ಯವಾಗಿವೆ. ಈ ಪ್ರಬಂಧಗಳು ಲೇಖಕರ ವಿವಿಧ ಭಾವಸ್ಥಿತಿಗಳ ದಾಖಲೆಗಳಾಗಿದ್ದರೂ ಒಟ್ಟಿಗೇ ಗಮನಿಸಿದಾಗ ಒಂದು ಬಗೆಯ ನಿರಂತರತೆಯನ್ನು ಕಾಣಬಹುದು. ಅಂದರೆ, ಈ ಪ್ರಬಂಧಗಳು ಆಯಾ ಕ್ಷಣಗಳ ದಾಖಲೆಯಾಗಿದ್ದರೂ ಅವು ಬಿಡಿಬಿಡಿ ಎನ್ನಿಸದೆ ಲೇಖಕನೊಬ್ಬನ ಗಂಭೀರ ಕಾಳಜಿಗಳ ಮುಂದುವರೆದ ಮಂಡನೆಯೆಂದೇ ತೋರುತ್ತವೆ.
ಈ ಪ್ರಬಂಧಗಳು ಸೃಜನಶೀಲ ಮನಸ್ಸಿನ ಸೃಷ್ಟಿಗಳು. ಹಾಗಾಗಿ ಪ್ರಬಂಧದ ವಸ್ತು ವಿಷಯಗಳು ಸಿದ್ದಪಡಿಸಿದ ಸಾಮಗ್ರಿಗಳ ಹಾಗೆ ಬಳಕೆಯಾಗದೆ ಅವುಗಳೊಂದಿಗೆ ಹೆಣಗಾಡಿದ ಸೃಜನಶೀಲ ಪ್ರಯತ್ನದ ಫಲಗಳಿಗಾಗಿ ಮೂಡಿಬರುತ್ತವೆ.
ಹುಟ್ಟಿದ್ದು ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಆಲೂರು. ತಂದೆ ಶ್ರೀ ಎ.ಎಚ್.ಲಿಂಗಯ್ಯ, ತಾಯಿ ಶ್ರೀಮತಿ ಅಂಕಮ್ಮ. ಏಳು ಸಹೋದರಿಯರು. ತಂದೆ ರೈಲ್ವೆ ಇಲಾಖೆಯಲ್ಲಿ ಸ್ಟೇಷನ್ ಮಾಸ್ಟರ್ ಆಗಿದ್ದರಿಂದ ರಾಜ್ಯದ ವಿವಿಧ ಕಡೆ ವಿದ್ಯಾಭ್ಯಾಸ. 1980 ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಎಂ.ಎ. 1981 ರಿಂದ 1990 ರವರೆಗೆ 'ಲಂಕೇಶ್ ಪತ್ರಿಕೆ'ಯಲ್ಲಿ; 1994 ರಿಂದ 1996ರ ವರೆಗೆ 'ಈ ವಾರ ಕರ್ನಾಟಕ'ದಲ್ಲಿ ವರದಿ, ಸಿನಿಮಾ ಅಂಕಣ, ಪ್ರಬಂಧ, ಕಥೆ, ವಿಮರ್ಶೆ ಇತ್ಯಾದಿ ಪ್ರಕಟ. 2000 ಜುಲೈನಿಂದ 'ಹಾಯ್ ಬೆಂಗಳೂರ್!' ಪತ್ರಿಕೆಯಲ್ಲಿ ಪ್ರತಿವಾರ “ಒಲಿದಂತೆ ಹಾಡುವೆ' ಅಂಕಣ. 2000ದಲ್ಲಿ ಅಮೆರಿಕಾ ...
READ MORE