`ಶಕ್ತಿಶಾಲಿ ವ್ಯಕ್ತಿತ್ವದ ನಿರ್ಮಾಣ’ ಕೃತಿಯು ದೀಪಕ್ ಬಿಳ್ಳೂರ ಅವರ ಪ್ರಬಂಧ ಸಂಕಲನವಾಗಿದ್ದು, ಲೇಖಕರು ಸಹಜೀವಿಗಳ ಕುರಿತು ಹೊಂದಿದ ಕಾಳಜಿ ಈ ಪುಸ್ತಕದಲ್ಲಿ ವ್ಯಕ್ತವಾಗಿದೆ. ವ್ಯಕ್ತಿತ್ವದಿಂದ ವಿಕಾಸದ ಮೆಟ್ಟಿಲು ಏರಲು ಉಪನಿಷದ್ಕಾರರ ಮಾರ್ಗ ವಿವರಿಸಿದ್ದಾರೆ. ಅಂತೆಯೇ ಬಾಹ್ಯ-ಜೀವನದಲ್ಲಿ ಯಶಸ್ಸು ಕಾಣಲು ಹಲವು ಸಂಗತಿಗಳನ್ನು ಈ ಪುಸ್ತಕದಲ್ಲಿ ನಿರೂಪಿಸಿದ್ದಾರೆ. ಈ ಕಿರುಪುಸ್ತಕದ ಓದಿನಿಂದ ಬಹಳ ಪುಸ್ತಕಗಳನ್ನು ಓದಿದ ಅನುಭವವಾಗುತ್ತದೆ. ಸಜ್ಜನತೆ, ಸುಶೀಲತೆ, ಕರ್ತವ್ಯಪರತೆ, ರಾಷ್ಟ್ರನಿಷ್ಠೆ, ಆತ್ಮಾಭಿಮುಖತೆ ವರ್ಧಿಸಲು ಈ ಪುಸ್ತಕ ಪ್ರೇರಿಸುತ್ತದೆ. ಶಕ್ತಿ ಇಲ್ಲದ ವ್ಯಕ್ತಿ ಖಾಲಿ ಕೊಡದಂತೆ, ಜೀವನದುದ್ದಕ್ಕೂ ಶಕ್ತಿ ಸಂಗ್ರಹ ಕಾರ್ಯ ನಡೆದೇ ಇರಬೇಕು. ಆಗ ಸಾರ್ಥಕತೆ ಎಂಬ ಕೊಡ ತುಂಬುವುದು. ಸರ್ವತೋನ್ಮುಖ ಪ್ರಗತಿಯೇ ಶಕ್ತಿಶಾಲಿ ವ್ಯಕ್ತಿತ್ವದ ಮಾನದಂಡ. ಈ ನಿಟ್ಟಿನಲ್ಲಿ ಸಮರ್ಥ ವಸ್ತು ವಿಷಯವನ್ನು ಈ ಪುಸ್ತಕ ನೀಡುತ್ತದೆ.
ದೀಪಕ ಬಿಳ್ಳೂರ ಮೂಲತಃ ಬೆಳಗಾವಿ ಜಿಲ್ಲೆಯ ಅಥಣಿಯವರು. 1977 ಜುಲೈ 22 ರಂದು ಜನನ. ತಂದೆ ಪ್ರಭಾಕರ ಬಿಳ್ಳೂರ ತಾಯಿ ಸುವರ್ಣಾ ಬಿಳ್ಳೂರ. ಬರವಣಿಗೆ ಅವರ ಆಸಕ್ತಿಯ ಕ್ಷೇತ್ರ. ರಾಜ್ಯದ ಅನೇಕ ದಿನಪತ್ರಿಕೆಗಳಲ್ಲಿ ಇವರ ಕವನ ಹಾಗೂ ಲೇಖನ ಬರಹಗಳು ಪ್ರಕಟಗೊಂಡಿವೆ. ಪೂರ್ವ ಶಿಕ್ಷಣವನ್ನು ಶಿರಗುಪ್ಪಿ ಮತ್ತು ಕಾಗವಾಡದಲ್ಲಿ, ತಮ್ಮ B.E (Mechanical) ಪದವಿಯನ್ನು ವಿಜಯಪುರದ B.L.D.E'S. ಇಂಜಿನೀಯರಿಂಗ್ ಕಾಲೇಜಿನಲ್ಲಿ ಓದಿ, 2000ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಿಂದ ಪದವಿ ಪಡೆದರು. ಪ್ರಸ್ತುತ 'ಪೂಜ್ಯ ಮಾತಾಜಿ ಪ್ರಕಾಶನ" ಎಂಬ ಪ್ರಕಾಶನ ಸಂಸ್ಥೆಯನ್ನು ಅಥಣಿಯಲ್ಲಿ ಸ್ಥಾಪಿಸಿ ಮೂರು ಕವನ ಸಂಕಲನಗಳನ್ನು, ಸಾಮಾಜಿಕ ರಂಗನಾಟಕವನ್ನು ಕೃತಿಯ ...
READ MORE