‘ಓಪನ್ ಗ್ರೌಂಡ್’ ಕಿಶೋರ ಸಾಹಿತಿ ಅಂತಃಕರಣನ ಕ್ರೀಡಾ ಅಂಕಣ ಪ್ರಬಂಧಗಳ ಸಂಕಲನ. ಈ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಲೇಖಕ ಡಾ. ಕೆ. ಪುಟ್ಟಸ್ವಾಮಿ ಬೆನ್ನುಡಿ ಬರೆದಿದ್ದಾರೆ. ಕೇವಲ ಐದು-ಆರನೇ ತರಗತಿಯಲ್ಲಿ ಓದುತ್ತಿರುವ ಬಾಲಕನೊಬ್ಬ ನುರಿತ ವರದಿಗಾರನಂತೆ ಕ್ರೀಡಾ ಸಾಹಿತ್ಯವನ್ನು ರಚಿಸುತ್ತಿರುವುದು ನಿಜಕ್ಕೂ ಅದ್ಭುತ ಪವಾಡ ಎನ್ನುತ್ತಾರೆ. ಕೆ. ಪುಟ್ಟಸ್ವಾಮಿ.
ಇಲ್ಲಿಯ ಕ್ರೀಡೆಗಳ ಹರಹು ವಿಸ್ತಾರವಾದದ್ದು, ಅದು ಸಾಕರ್, ಕ್ರಿಕೆಟ್, ಹಾಕಿ, ಒಲಿಂಪಿಕ್ಸ್ ಕೂಟ, ವೃತ್ತಿ ಕಬ್ಬಡಿ, ಟೆನಿಸ್ ಮುಂತಾದ ಕ್ರೀಡೆಗಳವರೆಗೆ ವ್ಯಾಪಿಸಿದೆ. ಅಲ್ಲದೆ ಸಮಕಾಲೀನ ಕ್ರೀಡಾಕೂಟಗಳ ಸಮರ್ಥ ದಾಖಲೆಗಳಾಗಿವೆ. ಇಲ್ಲಿಯ ಲೇಖನಗಳ ಹಿಂದ ಇರುವುದು ವರದಿಗಾರನ, ಅಂಕಿ ಅಂಶಗಳ ಕಣಜ ಹೊತ್ತ ಬರಹಗಾರನ ಮನೋಧರ್ಮವಲ್ಲ. ಬದಲಿಗೆ ಆಟದ ರೋಮಾಂಚನ, ಆಟಗಾರರ ಕೌಶಲ್ಯ, ಶ್ರಮ ಮತ್ತು ಆಟದ ವಿರಾಟ್ ಲೀಲೆಯನ್ನು ಅರ್ಥಮಾಡಿಕೊಂಡು ಗ್ರಹಿಸ ಬಲ್ಲ ಉತ್ಸಾಹಿ ಹೃದಯ, ಇದೇ ಅಂತಃಕರಣನ ಬರಹದ ಹೆಚ್ಚುಗಾರಿಕೆ.
ಅಂತಃಕರಣ ತನ್ನ 4ನೇ ಕ್ಲಾಸಿನಿಂದ 'ಎಚ್ಚರಿಕೆ', 'ಜೀವನ್ಮುಖಿ' ಪತ್ರಿಕೆಗಳಲ್ಲಿ ಮತ್ತು ಅಂತರ್ಜಾಲ ಪತ್ರಿಕೆ 'ವಿಶ್ವಕನ್ನಡಿಗ'ದಲ್ಲಿ ವಾರಕ್ಕೆ 2 ಅಂಕಣ ಬರೆಯುತ್ತಿರುವ ಅಂಕಣಕಾರ. ಇದುವರೆಗೆ ಕ್ರೀಡಾಂಕಣಗಳೂ ಸೇರಿದಂತೆ 500 ಅಂಕಣಪ್ರಬಂಧ, 95 ಕವಿತೆ, 78 ಕತೆ, 4 ಕಾದಂಬರಿ ಮತ್ತು 1 ನಾಟಕಗಳನ್ನು ರಚಿಸಿರುವ ಕನ್ನಡ ಮತ್ತು ಇಂಗ್ಲಿಷಿನಲ್ಲಿ ಬರೆಯುವ ಲೇಖಕ. 9ನೇ ತರಗತಿಯೊಳಗೆ 4 ಸಮಗ್ರ ಬರಹಗಳ ಕೃತಿಗಳು ಸೇರಿದಂತೆ ಒಟ್ಟು 30 ಕೃತಿಗಳನ್ನು ರಚಿಸಿರುವ ಪುಟ್ಟ ಸಾಹಿತಿ. ಪ್ರಸ್ತುತ ಶಿವಮೊಗ್ಗದ ಲೊಯಲಾ ಪ್ರೌಢಶಾಲೆಯಲ್ಲಿ 10ನೇ ತರಗತಿ ವಿದ್ಯಾರ್ಥಿ. ಕನ್ನಡ ಪ್ರವೇಶ, ಕಾವ ಸಾಹಿತ್ಯ ಪರೀಕ್ಷೆಗಳಲ್ಲಿ ಮತ್ತು ...
READ MORE