ಕೆ. ಸತ್ಯನಾರಾಯಣ ಕನ್ನಡದ ಬಹುಮುಖ್ಯ ಕತೆಗಾರ. ’ಮಾನ್ಯ ಸಾಮಾನ್ಯರ ಬದುಕು’ ಅವರ ಬಾಲ್ಯ, ಕೌಟುಂಬಿಕ ಜೀವನ, ವೃತ್ತಿ ಬದುಕು, ಸಾಂಸ್ಕೃತಿಕ ಒಡನಾಟದಲ್ಲಿ ಕಂಡು ಕೇಳಿದ ಕೆಲವು ಪ್ರಸಂಗಗಳ ಗುಚ್ಛ.
’ಇವುಗಳಲ್ಲಿ ಕೆಲವು ವ್ಯಾಖ್ಯಾನಗಳಾಗಿವೆ. ಇನ್ನು ಕೆಲವು ಕತೆಯ, ಪ್ರಬಂಧದ ಜಾಡನ್ನು ಹಿಡಿಯುತ್ತಿರುವಂತೆ ಕಂಡರೂ ನಿಜದಲ್ಲಿ ಅವು ಕತೆಗಳಲ್ಲ, ಪ್ರಬಂಧಗಳಲ್ಲ. ಹಾಗೆ ಆಗಬೇಕೆಂಬ ಆಸೆ ಕೂಡ ನನಗಿಲ್ಲ. ಇವುಗಳ ಜೀವಂತಿಕೆ, ಆತ್ಮೀಯತೆ, ಮುಕ್ತಸಾಧ್ಯತೆ-ಸ್ವಭಾವ ನನ್ನನ್ನು ಆಕರ್ಷಿಸಿದೆ. ಓದುಗರಿಗೂ ಅವರವರ ಬದುಕಿನ ಪ್ರಸಂಗಗಳನ್ನು ಮತ್ತೆ ರೂಪಿಸಿಕೊಳ್ಳಲು, ಹಂಚಿಕೊಳ್ಳಲು ಈ ಬರವಣಿಗೆಯಿಂದ ಪ್ರೇರಣೆ ಸಿಕ್ಕರೆ ನನಗೆ ಸಂತೋಷವಾಗುತ್ತದೆ’ ಎಂದಿದ್ದಾರೆ.
ಪ್ರಸಂಗದ ಸ್ಪರ್ಶ ಇರುವುದರಿಂದ ಕೃತಿ ಓದುಗರನ್ನು ಸುಲಭವಾಗಿ ಸೆಳೆಯುತ್ತದೆ. ಸನ್ನಿಧಿ ಪ್ರಕಾಶನ ಕೃತಿಯನ್ನು ಹೊರತಂದಿದೆ.
ಕೆ.ಸತ್ಯನಾರಾಯಣ ಅವರು ಹುಟ್ಟಿದ್ದು 1954 ಏಪ್ರಿಲ್ 21 ರಂದು. ಮಂಡ್ಯ ಜಿಲ್ಲಾ ಮದ್ದೂರು ತಾಲೋಕು ಕೊಪ್ಪ ಗ್ರಾಮದಲ್ಲಿ. 1972ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಎ.ಪದವಿ(ಸುವರ್ಣ ಪದಕದೊಂದಿಗೆ). 1978ರಲ್ಲಿ ಇದೇ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ. 1978ರಲ್ಲಿ ಭಾರತ ಸರ್ಕಾರದ ಇಂಡಿಯನ್ ರೆವಿನ್ಯೂ ಸರ್ವೀಸ್ ಗೆ ಸೇರಿ ಆದಾಯ ತೆರಿಗೆ ಇಲಾಖೆಯಲ್ಲಿ ದೇಶದ ನಾನಾ ಭಾಗಗಳಲ್ಲಿ ಕೆಲಸ ಮಾಡಿ(ಏಪ್ರಿಲ್ 2014ರಲ್ಲಿ ಕರ್ನಾಟಕ ಮತ್ತು ಗೋವಾ ವಲಯದ ಪ್ರಧಾನ ಮುಖ್ಯ ಆಯುಕ್ತರಾಗಿ, ಬೆಂಗಳೂರು) ನಿವೃತ್ತಿ. ಸಣ್ಣಕಥೆ, ಕಿರುಕಥೆ, ಕಾದಂಬರಿ, ಪ್ರಬಂಧ, ವ್ಯಕ್ತಿಚಿತ್ರ, ಆತ್ಮಚರಿತ್ರೆ, ಅಂಕಣಬರಹ, ವಿಮರ್ಶೆ, ಪ್ರವಾಸಕಥನ- ಹೀಗೆ ಬೇರೆ ಬೇರೆ ...
READ MORE