‘ನೀನಿಲ್ಲದೇ ನನಗೇನಿದೇ!’ ಲೇಖಕಿ ಛಾಯಾ ಭಗವತಿ ಅವರ ಪ್ರಬಂಧ ಸಂಕಲನ. ಬದುಕಿನ ಹಲವು ಅನುಭವಗಳಿಗೆ ಸೃಜನಶೀಲ ಬರವಣಿಗೆಯ ಮೂಲಕ ಹೊಸ ರೂಪು ನೀಡಿದ್ದಾರೆ. ಸಂಕಲನದ ‘ಬೇರಿಗಿಳಿದ ನೀರು’ ಪ್ರಬಂಧದಿಂದ ಆಯ್ದ ಕೆಲವು ಸಾಲುಗಳು: ನನ್ನೆರಡು ಮಕ್ಕಳು ಶಾಲೆಯಿಂದ ಮರಳಿ ಬರುವುದನ್ನೇ ಕಾಯುತ್ತಾ, ಶ್ರೀಮತಿ ಪಾರ್ವತಿ ರಾಮನ್ನರ ಮಾತುಗಳನ್ನೇ ಮೆಲುಕು ಹಾಕುತ್ತ ಮರುಮುಂಜಾವಿನ ಚಪಾತಿಗೆ ಚವುಳಿಕಾಯಿ ಸೋಸುತ್ತಾ ಕೂತೆ, ನಾಳೆ ದೊಡ್ಡವರಾದ ಮೇಲೆ ನನ್ನ ಮಕ್ಕಳ ಏನೆಲ್ಲಾ ಮಾತಾಡಿ ನನ್ನನ್ನು ಅಳಿಸಬಹುದು, ನನ್ನ ಪ್ರತಿಕ್ರಿಯೆ ಹೇಗಿರಬಹುದು ಎಂದೆಲ್ಲ ಕಲ್ಪಿಸಿಕೊಂಡು ನಕ್ಕವಳಿಗೆ ಮಕ್ಕಳಿಗಾಗಿ ಮೆಕ್ಕೆತೆನೆ ಬೇಯಿಸುವ ಕೆಲಸ ನೆನಪಾಗಿ ಯೋಚನೆಗಳಿಗೆ ಬ್ರೇಕು ಹಾಕಬೇಕಾಯಿತು. ಈ ಸಲ ಗುಡಿಗೆ ಹೋದಾಗ ನನ್ನುಳಿತಾಯದ ಹಣವನ್ನೇ ಮಂಗಳಾರತಿ ತಟ್ಟೆಗೆ ಹಾಕುವ ಕ್ರಾಂತಿಕಾರಿ ಯೋಚನೆಯೂ ಮೂಡದೇ ಇರಲಿಲ್ಲ…ಈ ರೀತಿಯ ಹಲವು ಪ್ರಬಂಧಗಳು ಈ ಕೃತಿಯಲ್ಲಿ ಸಂಕಲನಗೊಂಡಿವೆ.
ಗುಲ್ಬರ್ಗ ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ (ಎಂ.ಎ.) ಪದವಿ ಪಡೆದಿರುವ ಛಾಯಾ ಭಗವತಿ ಹವ್ಯಾಸಿ ಬರಹಗಾರ್ತಿ. ಬೆಂಗಳೂರು ಆಕಾಶವಾಣಿಯ ಎಫ್ಎಂ ರೈನ್ ಬೋ ವಾಹಿನಿಯಲ್ಲಿ ಆರ್ ಜೆ (ರೇಡಿಯೊ ಜಾಕಿ) ಆಗಿ ಕೆಲಸ ಮಾಡಿರುವ ಛಾಯಾ ಅವರು ಕೆಲಕಾಲ ಪ್ರಿಸಂ ಬುಕ್ಸ್ ಪ್ರೈ ಲಿ. ನಲ್ಲಿ ಸಂಪಾದಕಿ, ಅನುವಾದಕಿ ಹಾಗೂ ಲೇಖಕಿಯಾಗಿ ಕಾರ್ಯ ನಿರ್ವಹಿಸಿದ್ದರು. ವಿಜಯನಗರ ಬಿಂಬ ರಂಗಶಿಕ್ಷಣ ಕೇಂದ್ರದಲ್ಲಿ ರಂಗಭೂಮಿ ಡಿಪ್ಲೊಮಾ ಮಾಡಿರುವ ಅವರಿಗೆ ನಟನೆ, ಫೋಟೋಗ್ರಫಿ, ಪ್ರವಾಸ, ಸಂಗೀತ, ಅನುವಾದ ಆಸಕ್ತಿಯ ಕ್ಷೇತ್ರಗಳು. ವೈಕಂ, ರಸ್ಕಿನ್ ಬಾಂಡ್ ಕತೆಗಳನ್ನು ಕನ್ನಡಕ್ಕೆ ಅನುವಾದಿಸಿರುವ ಛಾಯಾ ಸ್ವಂತ ಕತೆ-ಪ್ರಬಂಧಗಳನ್ನು ಪ್ರಕಟಿಸಿದ್ದಾರೆ. ’ಪುಟಾಣಿ ...
READ MORE