ಫಾತಿಮಾ ರಲಿಯಾ ಅವರ ಲಲಿತ ಪ್ರಬಂಧಗಳ ಸಂಕಲನ ಕಡಲು ನೋಡಲು ಹೋದವಳು. ಬೊಳುವಾರು ಮಹಮದ್ ಕುಂಞಿ ಅವರು ಈ ಕೃತಿಯಲ್ಲಿ ಬೆನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಅವರು ಹೇಳುವಂತೆ, ಸಾಕಷ್ಟು ಕರುಳು ಹಿಂಡುವ ಕತೆಗಳೂ, ನರನಾಡಿಗಳನ್ನು ಕರಗಿಸಿ ಕುದಿಸುವಂತಹ ವೈಚಾರಿಕ ಬರಹಗಳೂ ದಂಡಿಯಾಗಿ ಪ್ರಕಟವಾಗುತ್ತಿರುವ ಈ ದಿನಗಳಲ್ಲಿ, ಲಲಿತ ಪ್ರಬಂಧಗಳನ್ನು ಯಾಕೆ ಓದಬೇಕು ಎನ್ನುವವರಿಗೆ ಬಾಲ ಪಾಠದಂತಿದೆ, ‘ಸುಧಾ ಯುಗಾದಿ ಪ್ರಬಂಧ ಸ್ಪರ್ಥೆಯಲ್ಲಿ ಪ್ರಥಮ ಬಹುಮಾನ’ವನ್ನೂ ಪಡೆದ ಪ್ರಬಂಧವನ್ನೊಳಗೊಂಡ ಹದಿನೇಳು ಲಲಿತ ಪ್ರಬಂಧಗಳ ಈ ಸಂಕಲನ. ಈಗಷ್ಟೇ ಕಟ್ಟಿದ ಮಲ್ಲಿಗೆ ಮಾಲೆಯೊಂದರಿಂದ ಹಗೂರ ಜಾರಿದ ಹೂವೊಂದು ಗಾಳಿ ಬೀಸಿದಾಗಲೆಲ್ಲ ತನ್ನ ಘಮವೊಂದನ್ನು ಉಳಿಸಿಕೊಳ್ಳುವಂತೆ ‘ಗದ್ಯದ ಭಾವಗೀತೆ’ ನೇಯಬಲ್ಲ ಇವರ, ‘ಉನ್ಮತ್ತ ಕುರುಕ್ಷೇತ್ರವೂ ಬೃಂದಾವನದ ಕೊಳಲೂ..’ ಎಂಬೊಂದು ತಲೆ ಬರಹದ ಪ್ರಬಂಧವೇ ಈಕೆ ಯಾರು, ಏನು ಮತ್ತು ಎತ್ತ ಎಂಬುದನ್ನು ಜಾಹೀರು ಮಾಡುತ್ತವೆ. ಮಿದು ಮನಸ್ಸಿನ ಕನ್ನಡಿಗರು ಈ ಕೃತಿಯನ್ನು ಖಂಡಿತವಾಗಿಯೂ ಪ್ರೀತಿಯಿಂದಲೇ ಓದುತ್ತಾರೆ ಎಂಬುದಾಗಿ ಹೇಳಿದ್ದಾರೆ
ದಕ್ಷಿಣ ಕನ್ನಡ ಜಿಲ್ಲೆಯ ಪುಟ್ಟ ಹಳ್ಳಿಯಾಗಿರುವ ಪೆರ್ನೆಯ ಅಬ್ದುಲ್ ರಶೀದ್ ಮತ್ತು ಆಯಿಶಾ ದಂಪತಿಯ ಮಗಳು. ಕಲ್ಲಡ್ಕ, ಪೆರ್ನೆ, ಉಪ್ಪಿನಂಗಡಿ, ಪುತ್ತೂರು ಗಳಲ್ಲಿ ವಿದ್ಯಾಭ್ಯಾಸ. ಇನ್ಫಾರ್ಮೇಶನ್ ಟೆಕ್ನಾಲಜಿಯಲ್ಲಿ ಎಂಬಿಎ ಪದವೀಧರೆ. ಗೃಹಿಣಿ. 2020ರಲ್ಲಿ ಸುಧಾ ಯುಗಾದಿ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, 2021ರಲ್ಲಿ ಮೊಗವೀರ ಸಾಹಿತ್ಯ ಪ್ರಶಸ್ತಿ, 2022ರಲ್ಲಿ ಸಮಾಜಮುಖಿ ಕಥಾಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಮತ್ತು ಅಪ್ರಕಟಿತ ಕವನ ಸಂಕಲನಕ್ಕಾಗಿ ವಿದ್ಯಾಧರ ಪ್ರತಿಷ್ಠಾನ ಕೊಡಮಾಡುವ ದ.ರಾ. ಬೇಂದ್ರೆ ಸಾಹಿತ್ಯ ಪ್ರಶಸ್ತಿ ದೊರಕಿದೆ. ಇವರ 'ಕಡಲು ನೋಡಲು ಹೋದವಳು' ಕೃತಿಗೆ ಲಂಕೇಶ್ ಪ್ರಶಸ್ತಿ ಮತ್ತು ಅವ್ವ ಪ್ರಶಸ್ತಿ 2023ರಲ್ಲಿ ದೊರಕಿದೆ. 2023ರಲ್ಲಿ ...
READ MORE