‘ಏಕಾಂತ ಲೋಕಾಂತ’ ಕೃತಿಯು ಓ.ಎಲ್. ನಾಗಭೂಷಣಸ್ವಾಮಿ ಅವರ ಪ್ರಬಂಧ ಸಂಕಲನ. ಕೃತಿಗೆ ಮುನ್ನುಡಿ ಬರೆದಿರುವ ಹೆಚ್. ಎಸ್. ರಾಘವೇಂದ್ರ ರಾವ್ ಅವರು, ಈ ಲೇಖನಗಳದು ಮೂರು ನೆಲೆ. ಅನುಭವಗಳ ಸುಡುಬೆಚ್ಚಗಿನ ನೆಲೆ ಒಂದು, ಎಲ್ಲೆಲ್ಲಿಯೂ ನೆಲೆ ನಿಲ್ಲದ, ಮನೆಯನೆಂದು ಕಟ್ಟದಿರು ಎನ್ನುವ ವಿಚಾರಗಳ ನೆಲೆ ಇನ್ನೊಂದು.ಹಲವು ಸುಗಂಧಗಳ ಹರಿಕಾರನಾದ ಮಂದಾನಿಲನಂತೆ ಕೆಲಸ ಮಾಡುವ ಓದುಗುಳಿಯದು ಮೂರನೇಯ ನೆಲೆ. ಈ ಮೂರು ನೆಲೆಗಳ ನಡುವೆ ನಡೆದ ಒಳಹೊರಗು ಓಡಾಟಗಳ ದಾಖಲೆ ಇಲ್ಲಿದೆ. ಸ್ವಾಮಿಯವರ ತುಡಿತವಿರುವುದು ಅಂತರಂಗದ ಕಡೆಗೆ. ಹೊರ ಜಗತ್ತು ಎನ್ನುವುದು, ಕಡೆಗೂ ನಾವು ಕಟ್ಟುಕೊಂಡ ಸತ್ಯ ಎಂಬ ತಿಳಿವಳಿಕೆಯೊಂದಿಗೆ ಹೊರಟಾಗ, ಅದನ್ನು ಬದಲಿಸುವ ಕದಲಿಸುವ ಹಂಬಲವಾದರೂ ಎಲ್ಲಿಂದ ಬಂತು? ಅಗತ್ಯವಾದರೂ ಏನು? ಸಾಮಾಜಿಕ ಸಂಗತಿಗಳ ಮಹಾಪೂರವೇ ಹರಿದರು, ಮನುಷ್ಯನ ರಕ್ತಗತವಾದ, ಚರ್ಮಸಹಜವಾದ ವರ್ತನೆಯಲ್ಲಿ ಬದಲಾವಣೆಯನ್ನು ಕಾಣದ ನಿರೀಕ್ಷಿಸಿದ ಮನಸ್ಸು ಇಲ್ಲಿ ಕೆಲಸ ಮಾಡಿದೆ’ ಎಂದು ಪ್ರಶಂಸಿಸಿದ್ದಾರೆ.
ಓ ಎಲ್ ನಾಗಭೂಷಣ ಸ್ವಾಮಿ- ಹುಟ್ಟಿದ್ದು22 ಸೆಪ್ಟೆಂಬರ್ 1953, ಬೆಂಗಳೂರು ಸಮೀಪದ ಹೊಸಕೋಟೆಯಲ್ಲಿ. ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ ಇಂಗ್ಲಿಷ್ (1873) , ಎಂ.ಎ. ಕನ್ನಡ(1975)ಪದವಿ, ಎಂಡಿಟಿಡಿಬಿ ಕಾಲೇಜು ಮೈಸೂರು, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು. ಶಿಕಾರಿಪುರ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆನೇಕಲ್. ಕನ್ನಡ ವಿಶ್ವವಿದ್ಯಾಲಯದಲ್ಲಿ ಭಾಷಾಂತರ ವಿಭಾಗದ ಪ್ರೊಫೆಸರ್ ಮತ್ತು ಮುಖ್ಯಸ್ಥರಾಗಿ ಸೇವೆ (1992-1998). ಜನವರಿ2005 ರಲ್ಲಿ ಉದ್ಯೋಗದಿಂದ ಸ್ವಯಂ ನಿವೃತ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ, ಕನ್ನಡ ವಿಶ್ವವಿದ್ಯಾನಿಲಯ ಕೆ. ಕೆ. ಬಿರ್ಲಾ ಫೌಂಡೇಷನ್, ಜೆ. ಕೃಷ್ಣಮೂರ್ತಿ ಪೌಂಡೇಷನ್ ಮುಂತಾದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಹಲವು ಮಹತ್ವದ ...
READ MORE