‘ಪುಸ್ತಕ ಓದಿದ್ದಕ್ಕೆ ಪುಸ್ತಕವೇ ಸಾಕ್ಷಿ’ ಲೇಖಕ ಎಸ್. ದಿವಾಕರ್ ಅವರ ಪ್ರಬಂಧ ಸಂಕಲನ. ಕತೆಗಾರ ಅಗೂಸ್ತೋ ಮೊಂತೆರ್ರೋಸೊ ಒಂದೇ ಒಂದು ಸಾಲಿನ ಸಣ್ಣಕತೆಯೊಂದನ್ನು ಬರೆದಿದ್ದಾನೆ. ಅದರ ಬಗ್ಗೆ ಸಾಕಷ್ಟು ಚರ್ಚೆ ನಡೆದಿದೆ. ಅತ್ಯುತ್ತಮ ಕೃತಿಗಳ ಜೊತೆಗಿಟ್ಟು ಚರ್ಚಿಸಿದ್ದು, ಈ ಚರ್ಚೆ ಒಂದು ತುದಿಯಾದರೆ, ಇದು ಕತೆಯೇ ಅಲ್ಲ ಎಂಬುದು ಇನ್ನೊಂದು ತುದಿ. ಮೊಂತೆರ್ರೋಸೊ ಸಂದರ್ಶನ ಒಂದರಲ್ಲಿ ಇದರ ಬಗ್ಗೆ ಪ್ರಸ್ತಾಪಿಸುತ್ತ 'ನಿಜ, ಇದು ಸಣ್ಣಕತೆ ಅಲ್ಲ, ನಿಜಕ್ಕೂ ಒಂದು ಕಾದಂಬರಿ' ಎನ್ನುತ್ತಾನೆ.
ದಿವಾಕರ್ ಅವರ ಪ್ರಬಂಧಗಳನ್ನು ಓದುವಾಗ ಅವರೇ ಉಲ್ಲೇಖಿಸಿರುವ ಈ ಪ್ರಸಂಗ ನೆನಪಾಗುತ್ತದೆ. ಇವು ಪ್ರಬಂಧ ಮಾತ್ರವಲ್ಲ, ನಿಜಕ್ಕೂ ಇವು ಕತೆ, ಕವಿತೆ, ವ್ಯಕ್ತಿಚಿತ್ರ, ಪ್ರಬಂಧ, ಲೇಖನ ಎಲ್ಲವೂ ಹೌದು. ಆಧುನಿಕ ಸಾಹಿತ್ಯದ ಮುಖ್ಯ ಬೆಳವಣಿಗೆಯೆಂದರೆ ಪ್ರಕಾರಗಳ ಹಂಗು ಮೀರಿದ್ದು. ದಿವಾಕರರ ಪ್ರಬಂಧಗಳನ್ನು ಓದುವಾಗ ಕೆಲವೊಮ್ಮೆ ಕವಿತೆ ಓದಿದ ಅನುಭವವಾಗುತ್ತದೆ; ಕೆಲವು ಕಡೆ ಕತೆ ಓದಿದ ಉಲ್ಲಾಸವಿರುತ್ತದೆ. ಮಗದೊಮ್ಮೆ ಪ್ರಬಂಧದ ಲಹರಿಯಿದೆ. ಇನ್ನು ಕೆಲವೊಮ್ಮೆ ಅತ್ಯುತ್ತಮ ಲೇಖನದಂತೆ ಅರಿವಿಗೆ ಹಾದಿ ಮಾಡಿಕೊಡುತ್ತದೆ.
ಎಸ್. ದಿವಾಕರ್ ಅವರು 28 ನವೆಂಬರ್ 1944 ರಲ್ಲಿ ಜನಿಸಿದರು. ಹುಟ್ಟಿದ್ದು ಬೆಂಗಳೂರು ಜಿಲ್ಲೆಯ ಸೋಮತ್ತನಹಳ್ಳಿಯಲ್ಲಿ. ಸಣ್ಣಕಥೆ, ಕಾವ್ಯ, ಪ್ರಬಂಧ, ವಿಮರ್ಶೆ, ಅಂಕಣ ಬರಹ, ಭಾಷಾಂತರ, ಸಂಪಾದನೆ ಇವೆಲ್ಲದರಲ್ಲಿ ಸ್ವೋಪಜ್ಞತೆ ಮತ್ತು ವಿಶಿಷ್ಟತೆ ಮೆರೆದಿರುವ ಎಸ್. ದಿವಾಕರ್, ಸವಿಸ್ತಾರ ಓದಿನ ಜಾಗೃತ ಮನಸ್ಸಿನ ಲೇಖಕರು. ಸುಧಾ, ಪ್ರಜಾವಾಣಿ ಪತ್ರಿಕೆಗಳಲ್ಲಿ ಕೆಲಸ ಮಾಡಿ, ನಂತರ ಅಮೆರಿಕನ್ ಕಾನ್ಸುಲೇಟ್ ಕಚೇರಿಯಲ್ಲಿ ಕನ್ನಡ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ. ಇವರ ಪ್ರಕಟಿತ ಕೃತಿಗಳಾದ ಇತಿಹಾಸ, ಎಲ್ಲ ಬಲ್ಲವರಿಲ್ಲ ಈ ಊರಿನಲ್ಲಿ ಆಯ್ದ ಕತೆಗಳು (ಕಥಾ ಸಂಕಲನಗಳು), ಆತ್ಮಚರಿತ್ರೆಯ ಕೊನೆಯ ಪುಟ (ಕವನ ಸಂಕಲನ), ನಾಪತ್ತೆಯಾದ ಗ್ರಾಮಾಫೋನು, ಕೃಷ್ಣಲೀಲೆಯಿಂದ ರಾಮರಾಜ್ಯಕ್ಕೆ ...
READ MORE