‘ಮಣ್ಣಿನ ವಾಸನೆ’ ಹಿರಿಯ ಕವಿ ಗೋಪಾಲಕೃಷ್ಣ ಅಡಿಗ ಅವರ ಪ್ರಬಂಧಗಳ ಸಂಕಲನ. ಅಡಿಗರಿಗೆ ಸಾಹಿತ್ಯಕ ಮತ್ತು ರಾಜಕೀಯ ವಿಷಯಗಳ ಕುರಿತ ಸಮಗ್ರ ದೃಷ್ಟಿಯ ಅರಿವು ನಮಗೆ ತಿಳಿಯುತ್ತದೆ. ಇಲ್ಲಿರುವ ಲೇಖನಗಳು ಮತ್ತು ಅವರ ಕಾವ್ಯಗಳನ್ನು ಒಟ್ಟೊಟ್ಟಿಗೆ ಗಮನಿಸಿದಾಗ ಅವರಿಗಿರುವ ಕಾವ್ಯ ಮತ್ತು ಜೀವನಗಳ ಅನ್ಯೋನ್ಯ ಸಂಬಂಧದ ಅರಿವು ಆಗುತ್ತದೆ. ಅಡಿಗರ ಜೀವನ ದೃಷ್ಟಿ ಬೇರೆ ಅಲ್ಲ ಕಾವ್ಯ ದೃಷ್ಟಿ ಬೇರೆ ಅಲ್ಲ. ಕಾವ್ಯ ತಮ್ಮ ಜೀವನವನ್ನು ಅರ್ಥಪೂರ್ಣ ಮಾಡಿಕೊಳ್ಳಲು ನಡೆಸುವ ಹೋರಾಟ, ಆದ್ದರಿಂದಲೇ ಭಾಷೆಯ ಬಳಕೆಯಲ್ಲಿ ಅವರದ್ದು ಅನ್ವೇಷಕ ದೃಷ್ಟಿ, ಭಾಷೆಯ ಸಾಧ್ಯತೆಯ ಅನ್ವೇಷಣೆಯ ಮೂಲಕವೇ ತಮ್ಮ ಜೀವನದ ಅರ್ಥಪೂರ್ಣ ಅನ್ವೇಷಣೆಯಲ್ಲೂ ಅವರು ತೊಡಗುತ್ತಾರೆ ಇಲ್ಲಿಯ ಪ್ರಬಂಧಗಳಲ್ಲಿ ಆ ಅನ್ವೇಷಣೆಯನ್ನು ಗಮನಿಸಬಹುದಾಗಿದೆ.
ಕನ್ನಡದಲ್ಲಿ ನವ್ಯಕಾವ್ಯಕ್ಕೆ ನಾಂದಿ ಹಾಡಿದ ಮೊಗೇರಿ ಗೋಪಾಲಕೃಷ್ಣ ಅಡಿಗ ಅವರನ್ನು ‘ಒಂದು ಜನಾಂಗದ ಕಣ್ಣು ತೆರೆಸಿದ ಕವಿ’ ಎಂದು ಗುರುತಿಸಲಾಗುತ್ತಿತ್ತು. ಅಡಿಗರು 1918ರ ಫೆಬ್ರುವರಿ 18ರಂದು ಜನಿಸಿದರು. ತಂದೆ ರಾಮಪ್ಪ ಮತ್ತು ತಾಯಿ ಗೌರಮ್ಮ. ಬೈಂದೂರಿನಲ್ಲಿ ಶಾಲಾ ಶಿಕ್ಷಣ, ಮೈಸೂರಿನಲ್ಲಿ ಕಾಲೇಜು ವಿದ್ಯಾಭ್ಯಾಸ ಆಯಿತು. ಬಿ.ಎ. ಆನರ್ಸ್ ಪದವಿ (1942) ಗಳಿಸಿದ ನಂತರ ಚಿತ್ರದುರ್ಗ, ದಾವಣಗೆರೆ, ಬೆಂಗಳೂರು ಪ್ರೌಢಶಾಲೆಗಳಲ್ಲಿ ಅಧ್ಯಾಪಕರಾಗಿ ಕೆಲಸಮಾಡಿದ್ದರು. ಆಮೇಲೆ ಮೈಸೂರು ಮಹಾರಾಜ ಕಾಲೇಜಿನಲ್ಲಿ ಓದಿ ಎಂ.ಎ. ಪದವಿ (1947) ಗಳಿಸಿದರು. ಮೈಸೂರಿನ ಶಾರದಾವಿಲಾಸ್ ಕಾಲೇಜಿನಲ್ಲಿ ಉಪನ್ಯಾಸಕ (1948-52), ಸೈಂಟ್ ಫಿಲೋಮಿನಾ ಕಾಲೇಜಿನಲ್ಲಿ (1952-54) ...
READ MORE