‘ಥರಾವರಿ’ ಜಯಶ್ರೀ ಹೆಗಡೆ ಅವರ ರಚನೆಯ ಲಲಿತ ಪ್ರಬಂಧಗಳಾಗಿವೆ. ಸಾಮಾನ್ಯ ಜನರ ಬದುಕಿನ ಭಾಗವಾಗಿ ಯೋಚಿಸುತ್ತ ಸೂಕ್ಷ್ಮ ಸಾಮಾಜಿಕ ವಿಷಯಗಳನ್ನು ಚರ್ಚೆಗೆ ತರುವಂತಹ ಬರಹಗಳಿವು. ಒಂದು ಕಾದಂಬರಿ ಸೃಷ್ಟಿಸುವ ಚೈತನ್ಯವನ್ನು ನೀಡುವ ಈ ಕೃತಿಯು ಉನ್ನತ ನಿರೂಪಣಾ ಶೈಲಿಯನ್ನು ಹೊಂದಿದೆ. ಪಳಗಿದ ಭಾಷೆ, ಚಿತ್ರಕ ಶಕ್ತಿ. ಹಾಗೂ ವಿಸ್ತಾರವಾದ ಜೀವನನೋಟಗಳು ಈ ಕೃತಿಯನ್ನು ಅನನ್ಯಗೊಳಿಸಿವೆ. ಇವರಿಗೆ ಉತ್ತರ ಕರ್ನಾಟಕ ಲೇಖಕಿಯರ ಸಂಘದ ವತಿಯಿಂದ 2020ನೇ ಸಾಲಿನ ಲಲಿತ ಪ್ರಬಂಧ ಪ್ರಕಾರದಲ್ಲಿ ಇನ್ಫೋಸಿಸ್ ಫೌಂಡೇಶನ್ ಸಾಹಿತ್ಯ ಪ್ರಶಸ್ತಿಯನ್ನು ಪಡೆದ ಕೃತಿಯಾಗಿದೆ.
ಕನ್ನಡ ಮಹಿಳಾ ಸಾಹಿತ್ಯದಲ್ಲಿ ಕವಿತೆ, ನಾಟಕ, ಪ್ರಬಂಧ ಕೃತಿಗಳನ್ನು ರಚಿಸಿರುವ ಜಯಶ್ರೀ ಹೆಗಡೆ ಅವರು ವಿಜಯಪುರ ಜಿಲ್ಲೆಯ ಜಮಖಂಡಿಯಲ್ಲಿ ಜನಿಸಿಸಿದರು. ಬನಹಟ್ಟಿ, ಜಮಖಂಡಿ, ಧಾರವಾಡಗಳಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸಿದರು. ಪ್ರಸ್ತುತ ಮೈಸೂರಿನಲ್ಲಿ ನೆಲೆಸಿದ್ದಾರೆ. ಸಾಹಿತ್ಯದ ಜೊತೆಗೆ ರಂಗಭೂಮಿಯಲ್ಲೂ ತೀವ್ರವಾದ ಆಸಕ್ತಿಯನ್ನು ಇಟ್ಟುಕೊಂಡಿರುವ ಅವರು ಸಿಂಧುವಳ್ಳಿ ಅನ೦ತಮೂರ್ತಿ ನಾಟಕ ರಚನಾ ಸ್ಪರ್ಧೆಯಲ್ಲಿ ಬಹುಮಾನಿತರಾಗಿದ್ದಾರೆ. ಕೃತಿಗಳು: 'ಇಣುಕಿದಲ್ಲಿ ಛಂದ', ‘ಥರಾವರಿ’ ...
READ MORE