ಸದ್ಗುರು ಪ್ರಭಾವ- ಎಂಬುದು ಗಳಗನಾಥರು ಬರೆದ ಪ್ರಬಂಧಗಳ ಸಂಕಲನ. ಈ ಕೃತಿಯಲ್ಲಿ ಪುಸ್ತಕ ಮಾರಾಟ, ಪುಸ್ತಕ ಬರವಣಿಗೆ, ತಮ್ಮ ವ್ಯಕ್ತಿಗತ ಜೀವನ ನಿರ್ವಹಣೆ, ಕನ್ನಡದ ಅಸ್ತಿತ್ವ ಹೀಗೆ ವಿವಿಧ ವಿಷಯಗಳಡಿ ಗಳಗನಾಥರು ಬರೆದ ಪ್ರಬಂಧಗಳಿವೆ. ಬೆಂಗಳೂರು ಧನೌದಾರ್ಯ, ಬೆಂಗಳೂರು ಗುಣೌದಾರ್ಯ, ಗಳಗನಾಥನ ಪುಸ್ತಕಗಳು, ಗಳಗನಾಥನ ಆಶೆ, ಗೃಹಶಿಕ್ಷಣ ಮತ್ತು ಹಿರಿಯರ ಪುಣ್ಯ, ದಂಪತಿ, ಕುಟುಂಬ, ರಾಷ್ಟ್ರ, ವಿಶ್ವ, ಲೇಖಕರು, ವಿದ್ಯಾರ್ಥಿ, ವಿನಯದ ಬೇಡಿಕೆ ಹೀಗೆ ಹಲವು ಪ್ರಬಂಧಗಳು ಇಲ್ಲಿ ಸಂಕಲಿಸಲಾಗಿದೆ. ಪುಸ್ತಕ ಬರವಣಿಗೆ ಹಾಗೂ ಅವುಗಳ ಮಾರಾಟದಿಂದಲೇ ಬದುಕು ನೂಕಿಸುವ ಕನ್ನಡಾಭಿಮಾನಿಯ ನೋವು-ನಲಿವುಗಳನ್ನು ಈ ಕೃತಿ ಸಮರ್ಥವಾಗಿ ಬಿಂಬಿಸುತ್ತದೆ. ಒಂದರ್ಥದಲ್ಲಿ ಈ ಕೃತಿಯು ಗಳಗನಾಥರ ಆತ್ಮಕಥೆಯಂತೆಯೂ ಇದೆ.
ವಿಪುಲವಾದ ಕನ್ನಡ ಬರೆವಣಿಗೆಯಿಂದ ಇಡೀ ನಾಡಿನಲ್ಲಿ ಭಾಷಾ ಜಾಗೃತಿಯನ್ನುಂಟುಮಾಡಿದ ಪ್ರಸಿದ್ಧ ಲೇಖಕರಲ್ಲೊಬ್ಬರು ವೆಂಕಟೇಶ ತಿರಕೋ ಕುಲಕರ್ಣಿ. ’ಗಳಗನಾಥ’ ಅವರ ಕಾವ್ಯನಾಮ. ಹುಟ್ಟಿದ್ದು ಧಾರವಾಡ ಜಿಲ್ಲೆಯ ಹಾವೇರಿ ತಾಲ್ಲೂಕಿನ ಗಳಗನಾಥ ಎಂಬ ಹಳ್ಳಿ. ಗಳಗನಾಥರ ಮೊದಲ ಕಾದಂಬರಿ ’ಪದ್ಮನಯನೆಗೆ ಬಹುಮಾನ’. 1898ರಿಂದ 1942ರವರೆಗೆ ಅವ್ಯಾಹತ ಬರವಣಿಗೆಯಲ್ಲಿ ತೊಡಗಿಕೊಂಡವರು. ’ಕಮಲಕುಮಾರಿ, ಮೃಣಾಲಿನಿ, ವೈಭವ, ಕನ್ನಡಿಗರ ಕರ್ಮಕಥೆ’ ಮುಂತಾದ ಕಾದಂಬರಿಗಳ ರಚಿಸಿದ್ಧಾರೆ. ’ಗಿರಿಜಾ ಕಲ್ಯಾಣ, ಉತ್ತರರಾಮ ಚರಿತ್ರೆ, ಚಿದಂಬರ ಚರಿತ್ರೆ ಮುಂತಾದ ಪೌರಾಣಿಕ ಕಥೆಗಳು, ಸತ್ಪುರುಷರ ಚರಿತ್ರೆಗಳು, ನಿಬಂಧ-ಪ್ರಬಂಧಗಳ ರಚನೆ, ಪ್ರಕಟಣೆ. 1907ರಲ್ಲಿ ಸದ್ಬೋಧ ಚಂದ್ರಿಕಾ ಮಾಸಪತ್ರಿಕೆ ಪ್ರಾರಂಭಿಸಿದರು.. ‘ಮಾಧವ ಕರುಣಾವಿಲಾಸ’ ...
READ MORE