ಈ ಪುಸ್ತಕದಲ್ಲಿ ಸೇರಿರುವ ಪ್ರಬಂಧಗಳ ಪೈಕಿ, 'ಸಂಸ್ಕೃತಿ ಮತ್ತು ಸಾಹಿತ್ಯ', 'ರೊಮ್ಯಾಂಟಿಸಿಸ್ಟ್ ಮತ್ತು ವಾಸ್ತವಿಕತೆ', 'ಸಾಹಿತ್ಯ ವಿಮರ್ಶೆ' - ಇವುಗಳ ಕುರಿತು ಬರೆದ ಲೇಖನಗಳು ಇಲ್ಲಿವೆ. 'ಸಾಹಿತ್ಯವಿಮರ್ಶೆ' ಲೇಖನವು ಲೇಖಕರ ಗುರುಗಳಾದ ಬಿ. ಎಂ. ಶ್ರೀಕಂಠಯ್ಯನವರಿಗೆ ಶಿಷ್ಯರೂ ಮಿತ್ರರೂ ಅರ್ಪಿಸಿದ 'ಸಂಭಾವನೆ' ಎಂಬ ಗ್ರಂಥಕ್ಕಾಗಿ ಬರೆದಿದ್ದು, 'ರೊಮಾಂಟಿ ಸಿಸ್ಟ್ ಮತ್ತು ವಾಸ್ತವಿಕತೆ' ಆಕಾಶವಾಣಿಯವರು ಏರ್ಪಡಿಸಿದ್ದ ಒಂದು ಸೆಮಿನಾರ್ಗಾಗಿ ಹಾಗೂ ಸರ್ಕಾರದ ಸಂಸ್ಕೃತಿ ಪ್ರಸಾರದ ಇಲಾಖೆ ಆರಂಭವಾದ ತರುಣದಲ್ಲಿ ಸಂಸ್ಕೃತಿ' ಎಂಬ ಪುಸ್ತಕಕ್ಕೆ ಬರೆದದ್ದಾಗಿದೆ.
ಲಲಿತ ಪ್ರಬಂಧ ಪ್ರಕಾರಕ್ಕೆ ವಿಶೇಷ ಕೊಡುಗೆ ನೀಡಿದ್ದ ಅಕ್ಕಿ ಹೆಬ್ಬಾಳು ನರಸಿಂಹಮೂರ್ತಿರಾವ್ ವಿಮರ್ಶಕರೂ ಆಗಿದ್ದರು. ವೈಚಾರಿಕ ಗ್ರಂಥ ‘ದೇವರು’ ಮೂಲಕ ಜನಪ್ರಿಯರಾದ ಮೂರ್ತಿರಾವ್ ಅವರು 1900ರ ಜೂನ್ 18ರಂದು ಮಂಡ್ಯ ಜಿಲ್ಲೆಯ ಅಕ್ಕಿ ಹೆಬ್ಬಾಳಿನಲ್ಲಿ ಜನಿಸಿದರು. ತಂದೆ ಎಂ.ಸುಬ್ಬರಾವ್ ಮತ್ತು ತಾಯಿ ಪುಟ್ಟಮ್ಮ. ಬಾಲ್ಯದ ದಿನಗಳನ್ನು ಮೇಲುಕೋಟೆ, ನಾಗಮಂಗಲಗಳಲ್ಲಿ ಕಳೆದ ಮೇಲೆ 1913ರಲ್ಲಿ ಮೈಸೂರಲ್ಲಿ ವೆಸ್ಲಿಯನ್ ಮಿಷನ್ ಸ್ಕೂಲಿನಲ್ಲಿ ಶಾಲಾ ಶಿಕ್ಷಣ ಮುಗಿಸಿ ಮೈಸೂರು ಮಹಾರಾಜ ಕಾಲೇಜನ್ನು ಸೇರಿದರು. ಬಿ.ಎ. ಪದವಿ (1922), ಎಂ.ಎ. ಪದವಿ (1924) ಪಡೆದರು. ಮಹಾರಾಜ ಕಾಲೇಜಿನಲ್ಲಿ ಟ್ಯೂಟರ್ (1924), ಮೈಸೂರು ವಿಶ್ವವಿದ್ಯಾಲಯದಲ್ಲಿ ...
READ MORE