ಲೇಖಕ ಭಿ.ಪ. ಕಾಳೆ ಅವರು ಬರೆದ ಪ್ರಬಂಧಗಳ ಸಂಕಲನ-ಪ್ರಗತಿ ಅಥವಾ ದಾಸ್ಯ ವಿಮೋಚನ. ಈ ಕೃತಿಯಲ್ಲಿ ದಾಸ್ಯ ವಿಮೋಚನೆಯ ನೈಜ ಅರ್ಥ, ಸ್ವಾತಂತ್ಯ್ರ ಪ್ರೀತಿ, ಪ್ರತಿಕೂಲತೆ, ಸಮಯ ಸಾಫಲ್ಯ, ಅನನ್ಯ ಸಂಕಲ್ಪ ಶಕ್ತಿ, ಸಾಮರ್ಥ್ಯ ಸಂಚಯ, ಆಸ್ಥೆ-ಕಾಳಜಿ, ದೇಶ-ಪರ್ಯಟನ ಹೀಗೆ ಮಹತ್ವದ ಪರಿಕಲ್ಪನೆಗಳ ಮೂಲಕ ಪ್ರಗತಿಯಂತಹ ಅಥವಾ ದಾಸ್ಯ ವಿಮೋಚನೆಯಂತಹ ಪರಿಕಲ್ಪನೆಯನ್ನು ನೈಜ ಆರ್ಥದಲ್ಲಿ ಪರಿಣಾಮಕಾರಿಯಾಗಿ ಮಂಡಿಸಿದ್ದಾರೆ.
ಭಿಕಾಜಿಪಂತ ಕಾಳೆ ಎಂಬುದು ಪೂರ್ಣ ಹೆಸರು. ಭಿ.ಪ.ಕಾಳೆ ಎಂದೇ ಖ್ಯಾತಿ. ಹೆಸರಾಂತ ಕಾದಂಬರಿಕಾರರು. ಪ್ರಕಾಶಕ-ಮುದ್ರಕರೂ ಹೌದು. ತಂದೆ ಪರಶುರಾಮ ಪಂತ ಕಾಳೆ. ಧಾರವಾಡ ಜಿಲ್ಲೆಯ ಕುಂದುಗೋಳ ತಾಲ್ಲೂಕಿನ ಸಂಶಿ ಗ್ರಾಮದಲ್ಲಿ 1889ರ ಜನವರಿ 20ರಂದು ಹುಟ್ಟಿದರು. ಕುರಂದವಾಡ ಸಂಸ್ಥಾನಿಕರ ಅಧೀನದಲ್ಲಿದ್ದ ಈ ಪ್ರದೇಶ ಪಟವರ್ಧನ ಸಂಸ್ಥಾನಿಕರ ಆಡಳಿತಕ್ಕೆ ಒಳಪಟ್ಟಿತ್ತು. ಸಂಸ್ಥಾನಿಕರ ಮನೆ ಮಾತು ಮರಾಠಿ. ಆಡಳಿತದ ಭಾಷೆಯೂ ಮರಾಠಿ. ಸಂಶಿ ಗ್ರಾಮವು ಮರಾಠಿಮಯವೇ ಆಗಿತ್ತು. ಮಹಾರಾಷ್ಟ್ರದಿಂದ ಪಟವರ್ಧನ ಸಂಸ್ಥಾನಕ್ಕೆ ಬಂದು ಅಲ್ಲಿಯ ಬೇರೆ ಬೇರೆ ಊರುಗಳಲ್ಲಿ ನೆಲಸಿದ ಚಿತ್ಪಾವನ (ಕೊಂಕಣಸ್ಥ) ಬ್ರಾಹ್ಮಣ ಮನೆತನಗಳಲ್ಲಿ ಕಾಳೆ ಕುಟುಂಬವೂ ಒಂದು. ಈ ಕುಂಟುಂಬ ಸಾಂಸಿಯಲ್ಲಿ ...
READ MORE