ಕೃಷಿ ವಿಜ್ಞಾನಿ, ಲೇಖಕ ಕೆ.ಎನ್, ಗಣೇಶಯ್ಯ ಅವರ ’ಭಿನ್ನೋಟ’ ಪ್ರಬಂಧಗಳ ಸಂಕಲನ.
ನಾವೇಕ ನಗುತ್ತೇವೆ, ಆಳುತ್ತೇವೆ, ದುಃಖಿಸುತ್ತೇವೆ, ಸಂತೋಷಪಡುತ್ತೇವೆ? ಅತಿಯಾದ ಸುಖ ಮತ್ತು ದುಃಖ ಎರಡೂ ಒಂದೇ ರೀತಿಯ ಭಾವನೆಗಳೆ? ನಮ್ಮ ಬದುಕಿನ ಇಂತಹ ನೂರಾರು ನಡಗಳನ್ನು, ಅಭ್ಯಾಸಗಳನ್ನು, ಜೀವನ ರೀತಿನೀತಿಗಳನ್ನು ಇವು ಏಕೆ ಹೀಗೆ ಎಂದು ಪ್ರಶ್ನಿಸದೆಯೇ ನಾವು ಇಡೀ ಜೀವನ ಕಳೆದು ಬಿಡುತ್ತೇವೆ - ಅವಿಲ್ಲದೆಯೇ ಬದುಕು ಸಾಗಲು ಸಾಧ್ಯವಿಲ್ಲವೆ? ಎನ್ನುವುದನ್ನೂ ಪ್ರಶ್ನಿಸದೆ. ನಮ್ಮ ಮನಸ್ಸನ್ನೂ ಸೆರೆಯಾಗಿಸಿಕೊಳ್ಳುವಷ್ಟು ಶಕ್ತಿಯುತವಾದ ಆ ನಡನುಡಿಗಳನ್ನು ಅರ್ಥ ಮಾಡಿಕೊಳ್ಳದೆಯೇ ಈ ಪ್ರಪಂಚ ತೊರೆದು ಹೋಗುತ್ತೇವೆ ಎನ್ನುವ ಸತ್ಯ ಘೋರ ಶಾಪ ಅನಿಸುತ್ತದೆ. ಆ ಶಾಪಕ್ಕೆ ನಿವಾರಣೆ ಇದೆಯೆ? ಈ ಅಜ್ಞಾನದ ಕತ್ತಲೊಳಗೆ ನುಗ್ಗಿ ಹುಡುಕಾಡಬಹುದೆ? `ಭಿನ್ನೋಟ' ಕೃತಿ ಅಂತಹದ್ದೊಂದು ಪ್ರಯತ್ನವಾಗಿದೆ.
ಜೀವನದ ಹಲವು ನಡೆ ನುಡಿಗಳ ಮೂಲವನ್ನು ಹುಡುಕುವ ಪ್ರಯತ್ನ ಮಾಡಲಾಗಿದೆ.ನಮ್ಮ ವರ್ತನೆಯ ಮೂಲವನ್ನು ಅರಿಯುವುದರಿಂದ ನಮ್ಮನ್ನು ನಾವೇ ಅರಿತುಕೊಳ್ಳಬಹುದು ಎಂಬ ನಂಬಿಕೆಯಿಂದ, ಭಿನ್ನ ರೀತಿಯ ಈ ಲೇಖನಗಳು ಓದುಗರಿಗೆ ಸಾಕಷ್ಟು ಅಚ್ಚರಿ - ವಿಚಾರವನ್ನು ಉಂಟುಮಾಡುತ್ತವೆ.
ವೃತ್ತಿಯಿಂದ ಕೃಷಿ ವಿಜ್ಞಾನಿ ಆಗಿರುವ ಕೆ.ಎನ್. ಗಣೇಶಯ್ಯ ಅವರು ಮೂಲತಃ ಕೋಲಾರ ಜಿಲ್ಲೆಯವರು. ಕಳೆದ ೩೦ ವರ್ಷಗಳಿಂದ ತಳಿ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿರುವ ಅವರು ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರು. ಪ್ರಾಣಿ ಮತ್ತು ಸಸ್ಯಗಳ ವರ್ತನೆಗೆ ಮೂಲಭೂತವಾದ ಜೀವವಿಕಾಸದ ತತ್ವಗಳನ್ನು ಅನ್ವೇಷಿಸುವುದು ಇವರ ಮತ್ತೊಂದು ಸಂಶೋಧನಾಸಕ್ತಿ. ಭಾರತದ ಪ್ರಮುಖ ಜೀವ ವೈವಿಧ್ಯ ತಾಣಗಳಲ್ಲಿನ ಸಸ್ಯಗಳ ಮತ್ತು ದೇಶದ ಜೀವ ಸಂಪತ್ತಿನ ಬಗ್ಗೆ ಇವರು ತಯಾರಿಸಿರುವ ಮಾಹಿತಿಯ ಖಜಾನೆಯ ಸಿ.ಡಿ.ಗಳು ಮತ್ತು ಅಂತರ್ಜಾಲ ಒಂದು ಅಪೂರ್ವ ಹೆಜ್ಜೆ. ಇನ್ನೂರಕ್ಕೂ ಹೆಚ್ಚು ವೈಜ್ಞಾನಿಕ ಪ್ರಬಂಧ ಬರೆದಿರುವ ಅವರು ಆರು ವೈಜ್ಞಾನಿಕ ಕೃತಿಗಳನ್ನು ...
READ MORE