‘ಪ್ರವಾಸಿಯ ಪ್ರಬಂಧಗಳು’ ಕೃತಿಯು ಕೃಷ್ಣಾನಂದ ಕಾಮತ್ ಅವರ ಪ್ರವಾಸಾನುಭವ ಆಧಾರಿತ ಲಲಿತ ಪ್ರಬಂಧಗಳಾಗಿವೆ. 23 ಪ್ರಬಂಧಗಳನ್ನು ಒಳಗೊಂಡಿರುವಂತಹ ಈ ಕೃತಿಯು ಹಾಸ್ಯಪ್ರಬಂಧಗಳಿಂದ ಪ್ರಾರಂಭಿಸಿ ವಿಚಾರ ಮಂಥನದತ್ತ ಎಳೆದೊಯ್ಯುವ ಪಯತ್ನವನ್ನು ಮಾಡಿದೆ. ಇಲ್ಲಿನ ಪ್ರತಿಯೊಂದು ಪ್ರಬಂಧಗಳು ಕಳೆದ ಮೂರು ದಶಕಗಳಲ್ಲಿ ಕರ್ಮವೀರ, ಕಸ್ತೂರಿ, ಪ್ರಜಾವಾಣಿ, ಸುಧಾ, ಮಯೂರ, ಮಲ್ಲಿಗೆ, ಉದಯವಾಣಿ, ತರಂಗ, ತುಷಾರ ಮೊದಲಾದ ಕನ್ನಡ ಪತ್ರಿಕೆಗಳಲ್ಲಿ ಪ್ರಕಟವಾದವುಗಳು. ಈ ಪ್ರಬಂಧಗಳ ಕಾಲಾವಧಿಯಲ್ಲಿ ಅನೇಕ ಬದಲಾವಣೆಗಳಿವೆ. ಆದರೆ, ಬರೆದ ಕಾಲದ ಸ್ಥಿತಿಗತಿಗಳನ್ನು ಅವು ಬಿಂಬಿಸುತ್ತವೆ ಎಂದು ಲೇಖಕರು ಅಭಿಪ್ರಾಯಪಟ್ಟಿದ್ದಾರೆ.
ಖ್ಯಾತ ಸಾಹಿತಿ ಹಾಗೂ ವಿಜ್ಞಾನಿಯಾದ ಕೃಷ್ಣಾನಂದ ಕಾಮತ್ ಅವರು 1934ರ ಸೆಟ್ಪಂಬರ್ 29 ರಂದು ಜನಿಸಿದರು. ಊರು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ. ತಂದೆ ಲಕ್ಷ್ಮಣ ವಾಸುದೇವ ಕಾಮತ್, ತಾಯಿ ರಮಾಬಾಯಿ. ಕನ್ನಡದಲ್ಲಿ ಅನೇಕ ವೈಜ್ಞಾನಿಕ ಕೃತಿಗಳನ್ನು ರಚಿಸಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕೀಟ ವಿಜ್ಞಾನದಲ್ಲಿ ಎಂಎಸ್ಸಿ ಪದವಿ, ಅಮೇರಿಕಾದ ನ್ಯೂಯಾರ್ಕ್ ವಿಶ್ವವಿದ್ಯಾಲಯದಲ್ಲಿ ಪರಿಸರ ಮತ್ತು ಅರಣ್ಯ ವಿಜ್ಞಾವ ವಿಷಯದಲ್ಲಿ ಪಿಎಚ್.ಡಿ ಪದವಿ ಪಡೆದಿದ್ದಾರೆ. ರಾಜಸ್ಥಾನದ ಉದಯಪುರ ವಿಶ್ವವಿದ್ಯಾಲಯದ ಜಾಬ್ನೇರ ಕೃಷಿ ಕಾಲೇಜಿನಲ್ಲಿ ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಪಶ್ಚಿಮ ಬಂಗಾಳದ ಪ್ಲಾಸಿಯಲ್ಲಿ ಕಾಮನ್ ವೆಲ್ತ್ ಇನ್ಸ್ಟಿಟ್ಯೂಟ್ ...
READ MORE