ರೇಡಿಯೊಗೆ ಬರೆದ ಭಾಷಣಗಳು ಹಾಗೂ ವಿಶೇಷ ಸಂಚಿಕೆಗಳಲ್ಲಿ ಪ್ರಕಟವಾದ ಲೇಖನಗಳೂ ಸೇರಿದಂತೆ 23 ಲಘು ಕಥನಗಳನ್ನು ’ಆಗಿಷ್ಟು ಈಗಿಷ್ಟು’ ಕೃತಿ ಹೊಂದಿದೆ. ಬೀchi ಅವರೇ ಹೇಳಿಕೊಂಡಂತೆ ಇದು ’ಆಗಿಷ್ಟು-ಈಗಿಷ್ಟು, ಹಾಗಿಷ್ಟು-ಹೀಗಿಷ್ಟು, ಅದಕ್ಕಾಗಿ ಇದಕ್ಕಾಗಿ, ತೋಚಿದಾಗ-ಗೀಚಿದಾಗ ತಯಾರಾದ ಕಂತಿನ ಮೇಲೆ’. ತಿಂಮನೊಡನೆ ಕಾಲ್ಪನಿಕ ಸಂದರ್ಶನ, ಮಾಸ್ತಿಯವರು ಮುಖ್ಯಮಂತ್ರಿಯಾದರೆ ಎಂಬಂತಹ ವಿಶಿಷ್ಟ ಬರಹಗಳು ಇಲ್ಲಿವೆ.
'ಬೀಚಿ' ಎಂಬುದು ರಾಯಸಂ ಭೀಮಸೇನರಾವ್ ಅವರ ಕಾವ್ಯನಾಮ. ಅವರು ಜನಿಸಿದ್ದು 1913ರ ಏಪ್ರಿಲ್ 23ರಂದು ಬಳ್ಳಾರಿ ಜಿಲ್ಲೆಯ ಹರಪನ ಹಳ್ಳಿಯಲ್ಲಿ. ತಂದೆ ರಾಯಸಂ ಶ್ರೀನಿವಾಸರಾವ್, ತಾಯಿ ಭಾರತಮ್ಮ. 'ಬೀಚಿ' ಯವರ ಹೆಸರಿನ ಹಾಗೆ ಅವರ ಸಹಿಯೂ ವಿಚಿತ್ರ- 'ಬಿ' ಕನ್ನಡವಾದರೆ 'ಚಿ' ಇಂಗ್ಲಿಷು. ಸತಿ ಸೂಳೆ, ಸರಸ್ವತಿ ಸಂಹಾರ, ಖಾದಿ ಸೀರೆ, ಹೆಂಣು ಕಾಣದ ಗಂಡ, ಸತ್ತವನು ಎದ್ದುಬಂದಾಗ, ಮೇಡಮ್ಮನ ಗಂಡ, ಏರದ ಬಳೆ, ಬಂಗಾರದ ಕತ್ತೆ, ಮೂರು ಹೆಂಣು ಐದು ಜಡೆ, ಸುನಂದೂಗ ಏನಂತೆ, ಲೇವಡಿ ಟೈಪಿಸ್ಟ್, ಆರಿದ ಚಹಾ, ಬಿತ್ತಿದ್ದೇ ಬೇವು, ಕಾಮಂಣ (ಕಾದಂಬರಿಗಳು). ತಿಂಮನ ತಲೆ, ಆರು ಏಳು ಸ್ತ್ರೀ ಸೌಖ್ಯ, ಅಮ್ಮಾವ್ರ ಕಾಲ್ಗುಣ, ...
READ MORE