‘ನಾಪತ್ತೆಯಾದ ಗ್ರಾಮಾಫೋನು’ ಎಸ್. ದಿವಾಕರ್ ಅವರ ಪ್ರಬಂಧ ಸಂಕಲನ. 2005ರಲ್ಲಿ ಪ್ರಕಟಗೊಂಡಿದ್ದ ಈ ಕೃತಿ 2020ರಲ್ಲಿ ಮರುಮುದ್ರಣಗೊಂಡಿದೆ. ಓದುವುದೂ ಒಂದು ಕಲೆ, ಹಳದಿ, ಜರಾಫಾ ಎಂಬ ಜಿರಾಫೆ, ಮದರಾಸೆಂಬ ಮಾಂತ್ರಿಕ ವಾಸ್ತವ, ನಾವೇಕೆ ಕತೆ ಕಾದಂಬರಿ ಓದುತ್ತೇವೆ, ಚೀನಾದ ಮಹಾಗೋಡೆ, ರಾಮಮೂರ್ತಿ: ಅಪರೂಪದ ರೂಪರೂಪಕ, ತಂಬೂರಿ, ಸಾದತ್ ಹಸನ್ ಮಂಟೊ ಮತ್ತು ಅತಿಸಣ್ಣಕತೆ, ಈಗ ಕೇಳದ ಡೋಡೋ ಹಾಡು, ರಾಜಕೀಯ ಜೋಕುಗಳು, ಮೂರು ಕತೆಗಳು, ವ್ಯಕ್ತಿ ಮತ್ತು ವೈಶಿಷ್ಟ್ಯ, ಒಂಬತ್ತನ್ನು ಬೆಂಬೆತ್ತಿದಾಗ, ಖೆಡ್ಡಾ, ಮಸಿ ಕಾಣಿಕೆ, ಹಾರ್ಮೋನಿಯಂ, ಕಥಾ ಸಾಹಿತ್ಯ: ಸುಳ್ಳಲ್ಲದ ಸುಳ್ಳು, ಮಾರಾಯಿಸ್: ವಿಜ್ಞಾನಿಯಲ್ಲದ ವಿಜ್ಞಾನಿ, ನವಿಲು, ಬಾರೋ ಗಾಂಧೀ ಬಜಾರಿಗೆ, ಪಠ್ಯದ ಹಾದಿಯ ಕೈಮರಗಳು, ಪ್ರಸಿದ್ಧಿ ಎಂಬ ವ್ಯಾಧಿ, ಶರ್ಮ-ಹಿಕ್ಮೆತ್-ವೈಯೆನ್ಕೆ- ಸತ್ಯಜಿತ್ ರಾಯ್, ಟೆಲಿಫೋನ್ ಡೈರೆಕ್ಟರಿ, ಹೆಪ್ಪುಗಟ್ಟಿದ ನೀರು, ಲೇಖಕರ ಅರಿಕೆ, ಬಿಲಾಸಖಾನಿ ತೋಡಿ, ಈ ಅರ್ಥದ ಶಬ್ದ ಇದೊಂದೇ ಭಾಷೆಯಲ್ಲಿ, ಬೆರಳ ಗುರುತು, ಪ್ರತಿಮಾ ಪುರಾಣ, ಬಂದೂಕು, ಇವರಲ್ಲವೆ ಕನ್ನಡಿಗರು, ಕಾಲ ಮತ್ತು ಇತಿಹಾಸ, ಕಲೆಯ ಕಣ್ಣು, ಎಸ್ತಾಂತ ತಾಂತ ತುಂಬ, ಬತ್ತಿಹೋಗದ ಗಂಗೆ, ಸಂಕೇತಗಳು ಸೇರಿದಂತೆ 69 ಪ್ರಬಂಧಗಳು ಸಂಕಲನಗೊಂಡಿವೆ.
ಎಸ್. ದಿವಾಕರ್ ಅವರು 28 ನವೆಂಬರ್ 1944 ರಲ್ಲಿ ಜನಿಸಿದರು. ಹುಟ್ಟಿದ್ದು ಬೆಂಗಳೂರು ಜಿಲ್ಲೆಯ ಸೋಮತ್ತನಹಳ್ಳಿಯಲ್ಲಿ. ಸಣ್ಣಕಥೆ, ಕಾವ್ಯ, ಪ್ರಬಂಧ, ವಿಮರ್ಶೆ, ಅಂಕಣ ಬರಹ, ಭಾಷಾಂತರ, ಸಂಪಾದನೆ ಇವೆಲ್ಲದರಲ್ಲಿ ಸ್ವೋಪಜ್ಞತೆ ಮತ್ತು ವಿಶಿಷ್ಟತೆ ಮೆರೆದಿರುವ ಎಸ್. ದಿವಾಕರ್, ಸವಿಸ್ತಾರ ಓದಿನ ಜಾಗೃತ ಮನಸ್ಸಿನ ಲೇಖಕರು. ಸುಧಾ, ಪ್ರಜಾವಾಣಿ ಪತ್ರಿಕೆಗಳಲ್ಲಿ ಕೆಲಸ ಮಾಡಿ, ನಂತರ ಅಮೆರಿಕನ್ ಕಾನ್ಸುಲೇಟ್ ಕಚೇರಿಯಲ್ಲಿ ಕನ್ನಡ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ. ಇವರ ಪ್ರಕಟಿತ ಕೃತಿಗಳಾದ ಇತಿಹಾಸ, ಎಲ್ಲ ಬಲ್ಲವರಿಲ್ಲ ಈ ಊರಿನಲ್ಲಿ ಆಯ್ದ ಕತೆಗಳು (ಕಥಾ ಸಂಕಲನಗಳು), ಆತ್ಮಚರಿತ್ರೆಯ ಕೊನೆಯ ಪುಟ (ಕವನ ಸಂಕಲನ), ನಾಪತ್ತೆಯಾದ ಗ್ರಾಮಾಫೋನು, ಕೃಷ್ಣಲೀಲೆಯಿಂದ ರಾಮರಾಜ್ಯಕ್ಕೆ ...
READ MORE