ಅಭಿವೃದ್ಧಿಗಾಗಿ ಸಿನೆಮಾ-ಕೃತಿಯು ಚಲನಚಿತ್ರ ಕುರಿತಂತೆ ನಾಟಕಕಾರ ಕೆ.ವಿ. ಸುಬ್ಬಣ್ಣ ಬರೆದ ಕಿರು ಪುಸ್ತಿಕೆ. 1978ರಲ್ಲಿ ಒಂದು ವಿಚಾರ ಸಂಕಿರಣದಲ್ಲಿ ಮಂಡಿಸಿದ ವಿಚಾರಗಳನ್ನು ಕೃತಿಯಾಗಿಸಿದೆ. ಕೃತಿಯ ಬೆನ್ನುಡಿಯ ಬರೆಹದಲ್ಲಿ ‘ನಮಗೆ ಸ್ವಾತಂತ್ಯ್ರ ಬಂದಾಗಿನಿಂದ ಈ ದೇಶದ ಅಭಿವೃದ್ಧಿ ಪ್ರಯತ್ನಗಳು ನಡೆದಿವೆ. ಅಭಿವೃದ್ಧಿ ಸಾಧಿಸಲಿಕ್ಕಾಗಿ ಸಿನೆಮಾದಂತಹ ಪ್ರಬಲ ಮಾಧ್ಯಮಗಳನ್ನು ವಿಸ್ತಾರವಾಗಿ ಬಳಸಿಕೊಳ್ಳಬೇಕು ಎನ್ನುವಂತಹ ಪ್ರಯತ್ನ ನಡೆದಿದೆ. ಆದರೆ, 30-35 ವರ್ಷ ಕಳೆದಿದ್ದರೂ ದೊರಕಿರುವ ಫಲ ನಿರಾಶಾದಾಯಕ. ಇದಕ್ಕೆ ಕಾರಣ, ಅಭಿವೃದ್ಧಿಯನ್ನು ಕುರಿತ ನಮ್ಮ ಕಲ್ಪನೆಯಲ್ಲೇ ದೋಷವಿದೆ. ಮತ್ತು ಸಿನೆಮಾವನ್ನು ಕುರಿತ ಕಲ್ಪನೆಯಲ್ಲೇ ದೋಷವಿದೆ’ ಎಂದು ಗಮನ ಸೆಳೆಯಲಾಗಿದೆ. ಇಂತಹ ವಿಚಾರಗಳನ್ನು ಪ್ರತಿಪಾದಿಸುವ ಕೃತಿ ಇದಾಗಿದೆ.
ಕೆ.ವಿ. ಸುಬ್ಬಣ್ಣ ಕನ್ನಡದ ಅಪರೂಪದ ವ್ಯಕ್ತಿಗಳಲ್ಲಿ ಒಬ್ಬರು. ಮೈಸೂರು ವಿಶ್ವವಿದ್ಯಾನಿಲಯದಿಂದ ಎಂ. ಎ. ಪದವಿ ಪಡೆದ ನಂತರ ಅವರು ಕೃಷಿಕಾಯಕ ಆರಂಭಿಸಿದರು. ಸಾಹಿತ್ಯ ಕ್ಷೇತ್ರದಲ್ಲಿ ಅವರು ಮಾಡಿದ ಸಾಧನೆ ಅಚ್ಚರಿಪಡುವ ಹಾಗಿದೆ. ಕವಿ, ನಾಟಕಕಾರ, ಅನುವಾದಕರಾಗಿದ್ದ ಅವರು 'ಅಕ್ಷರ ಪ್ರಕಾಶನ' 'ನೀನಾಸಂ ರಂಗ ಚಟುವಟಿಕೆ'ಗಳನ್ನು ನಿರ್ವಹಿಸಿದವರು. ಭಾರತೀಯ ಸಂಸ್ಕೃತಿಗೆ ವಿಶಿಷ್ಟ ಮಾದರಿ ಎನ್ನುವ ಹಾಗೆ ಸಾಹಿತ್ಯಕ, ಸಾಂಸ್ಕೃತಿಕ ಚಟುವಟಿಕೆಗಳನ್ನು ಪುಟ್ಟಹಳ್ಳಿಯಲ್ಲಿ ನಡೆಸಿದ್ದು ಒಂದು ದಾಖಲೆ. ಮ್ಯಾಗ್ಸೆಸ್ಸೆ ಪ್ರಶಸ್ತಿಯಿಂದ ಹೆಗ್ಗೋಡು ಅಂತರರಾಷ್ಟ್ರೀಯ ನಕ್ಷೆಯಲ್ಲಿ ದಾಖಲಾಯಿತು. ಕೆ.ವಿ. ಸುಬ್ಬಣ್ಣ ಒಬ್ಬ ವ್ಯಕ್ತಿಯಲ್ಲ, ಮಹಾನ್ ಶಕ್ತಿ. ಅವರ ಬೆಳವಣಿಗೆ ವೈಯಕ್ತಿಕವಾದದ್ದಲ್ಲ, ಸಾಂಘಿಕವಾದದ್ದು. 'ಅಕ್ಷರ ಪ್ರಕಾಶನದ ಮೂಲಕ , 'ನೀನಾಸಂ' ಮೂಲಕ ಅನೇಕ ಪ್ರತಿಭೆಗಳನ್ನು ಅವರು ...
READ MORE