ಕೆದಂಬಾಡಿ ಜತ್ತಪ್ಪ ರೈ ಅವರನ್ನು ಕನ್ನಡದ ಓದುಗ ಮರೆಯುವುದೆಂತು? ಬೇಟೆಯ ನೆನಪುಗಳು, ಬೇಟೆಯ ಉರುಳು, ಈಡೊಂದು ಹುಲಿಯೆರಡು, ಬೆಟ್ಟದ ತಪ್ಪಲಿನಿಂದ ಕಡಲ ತಡಿಗೆ- ಇಂತಹ ಅಮೂಲ್ಯ ಕೃತಿಗಳಿಂದ ಕನ್ನಡಿಗರಿಗೆ ಬೇಟೆ ಸಾಹಿತ್ಯದ ರುಚಿ ಮತ್ತು ಹುಚ್ಚು ಹಿಡಿಸಿದ ಹಿರಿಯ ಲೇಖಕರಿವರು. ಆಗಲೇ ಒಮ್ಮೆ ಮುದ್ರಣವಾಗಿದ್ದ ಈ – ಬೇಟೆಗಾರನ ಹುಲಿಹೆಜ್ಜೆ ಎಂಬ ಬೇಟೆ ಪರಿಸರದ ಅನುಭವ ಪ್ರಬಂಧಗಳ ಸಂಗ್ರಹದ ಓದಿನ ಮಜವೇ ಬೇರೆ. ಹೀಗೆ, ನಾಲ್ಕು ವಿಭಿನ್ನವೂ ರುಚಿಪೂರ್ಣವೂ ಜ್ಞಾನಭರಿತವೂ ಎನಿಸುವ ಕೃತಿಗಳು ನಿಮ್ಮ ಮನರಂಜಿಸಲಿ!
ತುಳು ಸಾಹಿತ್ಯದ ಹೆಸರಾಂತ ಕವಿ ಸಾಹಿತಿ ಕೆದಂಬಾಡಿ ಜತ್ತಪ್ಪ ರೈ ಪುತ್ತೂರು ತಾಲ್ಲೂಕಿನ ಕೆದಂಬಾಡಿಯಲ್ಲಿನ 1916ರಲ್ಲಿ ಜನಿಸಿದರು. ತುಳು ಬರಹಗಳ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ತಮ್ಮ ಅಪಾರ ಸೇವೆ ಸಲ್ಲಿಸಿದವರು. ತುಳುತ್ತ ಪೋರ್ಲು ಅಜ್ಜಬಿರು (ನಾಟಕಗಳು), ಕುಜಿಲೆ ಪೂಜೆ (ಮೂಲ ಡಿ. ವಿ. ಜಿ. ಕನ್ನಡೊಗು ಕಣತ್ತಿನ ಉಮರ್ ಖಯ್ಯಾಮನ ರುಬಾಯತ್) ಅಸೆನಿಯಾಗೊ ಕಾಂತಗ ಜೋಗಿ (ಮೂಲ ಆಂಗ್ಲ ಕವಿ ಬ್ರೌನಿಂಗ್ನನ ದಿ ಪೈಪರ್ ಬೊಕ್ಕ ಕುವೆಂಪು ಅವರ ಕಿಂದರ ಜೋಗಿ). ಕೃಷಿಕರಾಗಿ, ಕೃಷಿಯ ರಕ್ಷಣೆಗಾಗಿ ಅನಿವಾರ್ಯವಾಗಿ ಬೇಟೆಗಾರರಾಗಿ, ತಮ್ಮ ಅರುವತ್ತನೆಯ ವಯೋಮಾನದಲ್ಲಿ ಅದೇ ಬೇಟೆಯ ನೆನಪುಗಳನ್ನು ಅಕ್ಷರಕ್ಕೆ ...
READ MORE