‘ವಜನು ಕಟ್ಟು’ ಲೇಖಕ ವಿಜಯಕಾಂತ ಪಾಟೀಲರ ಪ್ರಬಂಧ ಸಂಕಲನ. ಇಲ್ಲಿ ಒಂಬತ್ತು ಪ್ರಬಂಧಗಳಿವೆ. ಈ ಒಂಬತ್ತು ಪ್ರಬಂಧಗಳು "ಸವಿಬಂಧಗಳು "ಎಂದು ಲೇಖಕರು ಹೇಳಿಕೊಂಡಿದ್ದಾರೆ, ಅಜ್ಜ, ಅಜ್ಜಿ, ಕಾಕ, ನಾಯಿ, ಸ್ವಗ್ರಾಮವೂ ಸೇರಿದಂತೆ ಪಾಪು, ಚಂಪಾ ಅವರೂ ಇಲ್ಲಿ ಪ್ರಬಂಧಕಾರನ ಲೇಖನಿಗೆ ಆತ್ಮೀಯವಾಗಿಯೂ ವಿಮರ್ಶೆಯ ಮಾನದಂಡದಿಂದಲೂ ಅಳೆದು ತೂಗಿಸಿಕೊಂಡು ಅನಾವರಣಗೊಂಡಿದ್ದಾರೆ. ಆಡುಭಾಷೆಯ ಅಥವಾ ಹಳ್ಳಿತನದ ಸಹಜ ಸೊಗಡು ಇಲ್ಲಿನ ಪ್ರಬಂಧಗಳ ಓದಿನ ಓಟಕ್ಕೆ ಪುಷ್ಠಿ ಒದಗಿಸಿ ಲೇಖಕನ ಲೀಲಾಜಾಲ ನಡಿಗೆಯನ್ನು ಅಚ್ಚರಿಯಿಂದ ಮೆಚ್ಚುಗೆಯಿಂದ ನೋಡುವಂತೆ ಮಾಡುತ್ತವೆ. ಆಡುಮಾತಿನ ಹತ್ತುಹಲ ಹೊಸಪದ ಬಳಕೆಯೂ ಈ ಸಂಕಲನಕ್ಕೆ ಹೊಸ ಮೆರಗು ತಂದಿದೆ. ಪ್ರಬಂಧಕಾರರ ನೇರ , ನಿಷ್ಟುರ ಮಾತಿನಂತೆಯೇ ಇಲ್ಲಿನ ಪ್ರಬಂಧಗಳೂ ಮೈದಳೆದು ಈ ಸಂಕಲನಕ್ಕೆ ವಿಭಿನ್ನ ಆಯಾಮವೊಂದರ ರೂಪು ನೀಡಿದೆ.
ವಿಜಯಕಾಂತ ಪಾಟೀಲ- ಹಾನಗಲ್ಲ ತಾಲೂಕಿನ ಕ್ಯಾಸನೂರಿನಲ್ಲಿ 1969 ರ ಅಗಸ್ಟ್ 9ರಂದು ಹುಟ್ಟಿದ್ದು; ಪ್ರಾಥಮಿಕ, ಪ್ರೌಢಶಿಕ್ಷಣ: ಕ್ಯಾಸನೂರು, ಶಕುನವಳ್ಳಿ (ಸೊರಬ); ಪಿಯುಸಿಯಿಂದ ಎಂ.ಎ (ಅರ್ಥಶಾಸ್ತ್ರ), ಎಲ್ಎಲ್ಬಿ ಧಾರವಾಡ; ಮೈಸೂರು ವಿವಿಯಲ್ಲಿ ಪತ್ರಿಕೋದ್ಯಮ ಡಿಪ್ಲೋಮಾ; ಸದ್ಯ ಹಾನಗಲ್ಲಿನಲ್ಲಿ ನ್ಯಾಯವಾದಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯ, ಹಾನಗಲ್ಲಿನ ಕನ್ನಡ ಯುವಜನ ಕ್ರಿಯಾ ಸಮಿತಿಯ ಪ್ರಧಾನ ಸಂಚಾಲಕ. ಪ್ರಕಟಿತ ಕೃತಿಗಳು: ಮಾಸದ ಕಲೆಗಳು (1994), ಸಲಸಲದ ಪಾಡು : (2003), ನೂರು ಬಣ್ಣದ ಕಣ್ಣು (2012), ಹೌದು ನಾನು ಕೌದಿ (2013), ಇಂತಿ ನದಿ (20050)ಕವನ ಸಂಕಲನ. ಪ್ರಬಂಧ: ವಜನುಕಟ್ಟು (2005), ಮಕ್ಕಳ ಸಾಹಿತ್ಯ: ...
READ MORE