ಸಂಸ್ಕೃತಿ ಚಿಂತಕರು ಹಾಗೂ ವಿಮರ್ಶಕರಾದ ರಹಮತ್ ತರೀಕೆರೆ ಅವರ ಲಲಿತ ಪ್ರಬಂಧಗಳ ಸಂಕಲನ ’ಹಿತ್ತಲ ಜಗತ್ತು’ ಕೃತಿ.
ಈ ಕೃತಿಯಲ್ಲಿನ ಪ್ರಬಂಧಗಳು ಮನೆಯ ಹಿತ್ತಲು ಹಲವು ಅನುಭವಗಳ ಜಗತ್ತಾಗಿದೆ. ಲೇಖಕರ ತಿರುಗಾಟದ ಬರಹಗಳು, ಅವರ ಅನುಭವ ಶೋಧದ ಹಿತ್ತಲಲ್ಲಿ ಹುಟ್ಟಿಕೊಂಡ ಬಗೆಯನ್ನು ಲಲಿತ ಪ್ರಬಂಧಗಳ ಮೂಲಕ ಕಟ್ಟಿದ್ದಾರೆ.
ಲೇಖಕರು ತಮ್ಮ ಹಿತ್ತಲ ಜಗತ್ತಿನ ಬಗ್ಗೆ ಹೇಳಿಕೊಳ್ಳುತ್ತಾ ಒಂದಡೆ ’ ಕಳೆದುಹೋದ ಬಾಲ್ಯವು ಹಗುರವಾಗಿ ಕಾಡುತ್ತಿರುವಾಗ , ನೆಯ್ಗೆಯಲ್ಲಿ ಆತ್ಮಕಥೆಯ ಎಳೆಗಳೂ ಸೇರಿಕೊಂಡವು. `ನಾನುತನ’ವಿಲ್ಲದೆ ಲಲಿತ ಪ್ರಬಂಧ ಮೂಡುವುದಿಲ್ಲ ಎಂದು ಕಾಣುತ್ತದೆ ’ಎಂದಿದ್ದಾರೆ.
ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಾಹಿತ್ಯ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾಗಿರುವ ರಹಮತ್ ತರೀಕೆರೆ ಅವರು ಸಂಶೋಧಕ, ವಿಮರ್ಶಕ, ಲೇಖಕ. ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನ ಸಮತಳದವರಾದ (ಜ. 1959) ಅವರು ಮೈಸೂರು ವಿಶ್ವವಿದ್ಯಾಲಯದಿಂದ ಏಳು ಚಿನ್ನದ ಪದಕಗಳೊಂದಿಗೆ ಎಂ.ಎ. ಪದವಿ ಪಡೆದಿದ್ದಾರೆ. ಸ್ಪಷ್ಟ ಸೈದ್ಧಾಂತಿಕ ನಿಲುವು ಹೊಂದಿರುವ ರಹಮತ್ ಅವರು ಬಂಡಾಯ ಸಾಹಿತ್ಯ ಸಂಘಟನೆಯಲ್ಲಿದ್ದವರು. ಪಶ್ಚಿಮದ ಲೇಖಕರಿಗಿಂತ ಭಾರತೀಯ ಭಾಷೆಗಳ ಲೇಖಕರಿಂದ ಕಲಿಯುವ ಅಗತ್ಯವಿದೆಯೆಂದು ಭಾವಿಸುವ ‘ದೇಸಿವಾದಿ’ ಲೇಖಕ. ‘ಆಧುನಿಕ ಕನ್ನಡ ಕಾವ್ಯ ಮತ್ತು ಪ್ರತಿಭಟನೆ’ ವಿಷಯದ ಮೇಲೆ ಪ್ರಬಂಧ ಬರೆದು ಪಿಎಚ್.ಡಿ. ಪದವಿ ಪಡೆದಿರುವ ಅವರ ಮೊದಲ ...
READ MORE