ಲೇಖಕಿ ರೇಖಾ ಕಾಖಂಡಕಿ ಅವರ `ನನ್ನ ಪುಟ’ ಕೃತಿ ಅನುಭವ ಸ್ವಗತಗಳಾಗಿವೆ. ಈ ಕೃತಿಗೆ ಆನಂದ ಝಂಗರವಾಡ ಅವರು ಮುನ್ನಡಿ ಬರೆದಿದ್ದಾರೆ. ‘ನನ್ನ ಪುಟ’ ಈ ಕೃತಿಯಲ್ಲಿ ಲೇಖಕಿ ರೇಖಾ ಬಾಗಲಕೋಟೆಯ ತಮ್ಮ ಅಪ್ಪಟವಾದ ನೆನಪುಗಳನ್ನು ಬಿಚ್ಚಿ ಇಟ್ಟಿದ್ದಾರೆ. ಹದಿನೆಂಟು ಭಿನ್ನ ಭಿನ್ನ ನೆನಪುಗಳನ್ನು ಅವರು ಇಲ್ಲಿ ಅತ್ಯಂತ ಆಪ್ತ ಮಾತುಗಳಲ್ಲಿ ಬಿಡಿಸಿಡುತ್ತ ಈ ಇಡೀ ಕೃತಿಯೇ ಹೃದ್ಯ ನೆನಪುಗಳ ಆರ್ದ್ರ ಸಂಕಲನವಾಗುವಂತೆ ಮಾಡಿದ್ದಾರೆ. ಅವರಿಗೆ ಅವರ ನೆಲದ ಭಾಷೆ ಸಹ ಎಷ್ಟು ಪ್ರೀತಿಯದು ಎಂದರೆ ಆ ನೆನಪುಗಳಿಗೆ ಒಂದು ಬಗೆಯ ಹಚ್ಚ-ಹಸಿರಾದ ಲಲಿತ-ಗದ್ಯದ ಶಕ್ತಿ ಬಂದಿದೆ. ಇವುಗಳನ್ನು ಒಂದು ಅನುಭವ ಕಥನದಂತೆಯೂ ಓದಿಕೊಳ್ಳಬಹುದು. ಅಥವ ಒಂದು ಕನ್ನಡದ ಕತೆಗಳ ಮಾಲೆ ಎಂದೂ ಓದಿಕೊಳ್ಳಬಹುದು. ಮರಾಠಿಯ ಸಾನೆ ಗುರೂಜಿ ಅವರ ‘ಶ್ಯಾಮನ ತಾಯಿ’ಯಂತಹ ಕೃತಿಗಳು ಇದೇ ಬಗೆಯ ಕೃತಿಗಳು’ ಎಂಬುದಾಗಿ ಮುನ್ನುಡಿಯಲ್ಲಿ ಹೇಳಿದ್ದಾರೆ.
ರೇಖಾ ಕಾಖಂಡಕಿಯವರು ಹಲವಾರು ಪ್ರಮುಖ ಕೃತಿಗಳನ್ನು ರಚಿಸಿದ್ದಾರೆ. ಅವರು ಮೂಲತಃ ಬಾಗಲಕೋಟೆಯವರು. ಇವರು ಬರೆದ ಕಥೆಗಳು ಮಲ್ಲಿಗೆ, ಜನಪ್ರಗತಿ, ಪ್ರಜಾಮತ ಮುಂತಾದ ಪತ್ರಿಕೆಗಳಲ್ಲಿ ಬೆಳಕು ಕಂಡವು. ಕಾಲೇಜು ಓದುತ್ತಿದ್ದಾಗ ಬರೆದ ಕೋಟಿ ಕಾದಂಬರಿಯು ಬಾಗಕೋಟೆಯ ಪರಿಸರದ ವಸ್ತು ಇರುವ ಕಾದಂಬರಿ. ಮಲ್ಲಿಗೆ ಮಾಸಪತ್ರಿಕೆಯ ಕಾದಂಬರಿ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಪಡೆಯಿತು. ನಂತರ ಬರೆದ ಕಾದಂಬರಿಗಳು ಬಂಧನ, ಅರುಣರಾಗ, ಹೊಸಹೆಜ್ಜೆ ಮುಂತಾದವುಗಳು. ಇವರ ಹಲವಾರು ಕಾದಂಬರಿಗಳಲ್ಲಿ ಪ್ರಾದೇಶಿಕ ಭಾಷೆಯ ಸೊಗಡು, ದಟ್ಟ ಅನುಭವ, ಸಾಮಾಜಿಕ ಸ್ಥಿತ್ಯಂತರಗಳು ಮುಂತಾದವುಗಳೇ ವೈವಿಧ್ಯಮಯ ವಸ್ತುಗಳಾಗಿ, ಮೂಲದ್ರವ್ಯಗಳಾಗಿ ಪ್ರಕಟಗೊಂಡಿವೆ. ಆರುಣರಾಗ ಚಲನಚಿತ್ರವಾಗಿ ಪ್ರಖ್ಯಾತಿ ಪಡೆದಿದ್ದರೆ ಲಂಬಾಣಿಗಳ ...
READ MORE