ವೃತ್ತಪತ್ರಿಕೆ ಎಂಬ ಹರಿವ ನೀರಿನಲ್ಲಿ ಲೇಖಕಿ ವೈದೇಹಿ ಅವರು ಕಾಲಕಾಲಕ್ಕೆ ತೇಲಬಿಟ್ಟ ಸ್ಪಂದನಗಳು ಈ ಪುಸ್ತಕದಲ್ಲಿ ಸಂಕಲನಗೊಂಡಿವೆ. ಹಾಗಂತ ಈ ಲೇಖನಗಳು ಬರಹಗಾರರೊಬ್ಬರು ತಮ್ಮ ಮನೋವಿಲಾಸದ ಫಲವಾಗಿ ಹರಿಯಬಿಟ್ಟ ಕಾಗದದ ದೋಣಿಗಳಲ್ಲ; ಕಾರಣ, ಈ ಎಲ್ಲ ಬರಹಗಳೂ ಸಮಕಾಲೀನ ಜಗತ್ತಿನೊಡನೆ ನಡೆಸಿದ ಮೆಲುಸಂವಾದಗಳು. ಕೆಲವೊಮ್ಮೆ ಇವು ನೇರವಾಗಿ ವಾಸ್ತವವನ್ನು ಎದುರಿಗಿಟ್ಟುಕೊಂಡು ಮಾತಾಡುವ ವಿಶ್ಲೇಷಕ ಪ್ರಜ್ಞೆಯ ಅನುಕೃತಿಗಳಾದರೆ, ಕೆಲವೊಮ್ಮೆ ಸಾಧಾರಣವೆಂದು ಕಾಣಬಹುದಾದ ಏನನ್ನೋ ಧ್ಯಾನಿಸುತ್ತ ಅದರೊಳಗಿನಿಂದಲೇ ಮಹತ್ತ್ವದ ಮತ್ತೊಂದನ್ನು ಧ್ವನಿಸುವ ಪ್ರತಿಕೃತಿಗಳು. ಆದರೆ ಬರಹದ ವಸ್ತು-ವಿಧಾನ-ಸಂವಿಧಾನ ಹೇಗೇ ಇರಲಿ, ಇವೆಲ್ಲವುಗಳ ಹಿಂದೆ ಈಗಾಗಲೇ ತಮ್ಮ ಬರಹಗಳಿಂದ ತಮ್ಮದೇ ತಮ್ಮತನವೊಂದನ್ನು ಕಂಡುಕೊಂಡಿರುವ ಬರಹಗಾರ್ತಿಯೊಬ್ಬರ ಕಸುವು ಇದೆ; ಬದುಕನ್ನು ನೋಡುವ ಒಂದು ಹೊಸ ಬಗೆಯ ಕಣ್ಣು ಈ ಬರಹಗಳ ಹಿಂದಿದೆ. ಹರಿವ ನೀರನ್ನು ನಿಂತು ನೋಡುವ ವ್ಯವಧಾನ ಇರುವ ಎಲ್ಲರೊಡನೆಯೂ ಸಂವಾದ ನಡೆಸಬಲ್ಲ ಪುಸ್ತಕ ಇದು.
ಡಾ. ವೈದೇಹಿ ಅವರ ಮೂಲ ಹೆಸರು ಜಾನಕಿ ಶ್ರೀನಿವಾಸಮೂರ್ತಿ. ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ಜನಿಸಿದ ಅವರು ಕಾವ್ಯ, ಪ್ರಬಂಧ, ಮಕ್ಕಳ ಸಾಹಿತ್ಯ, ಜೀವನಚಿತ್ರ, ಕೃತಿ ಸಂಪಾದನೆ ಪ್ರಕಾರದಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ. ಮಾನವ ಸಹಜ ಸಂಬಂಧಗಳು ಮತ್ತು ಹೆಣ್ಣಿನ ಭಾವತರಂಗಗಳನ್ನು ಹಿಡಿದಿಡುವ ಕಥೆ-ಕಾದಂಬರಿ ರಚಿಸಿರುವ ಲೇಖಕಿ. ಮರಗಿಡಬಳ್ಳಿ ಅಂತರಂಗದ ಪುಟಗಳು ಸಮಾಜಶಾಸ್ತ್ರಜ್ಞೆಯ ಟಿಪ್ಪಣಿಗಳು, ಅಮ್ಮಚ್ಚಿ ಎಂಬ ನೆನಪು. ಕತೆ ಕತೆ ಕಾರಣ (ಕಥಾ ಸಂಕಲನಗಳು), ಅಲೆಗಳಲ್ಲಿ ತರಂಗ (ಸಮಗ್ರ ಕಥಾ ಸಂಕಲನ), ಬಿಂದು ಬಿಂದಿಗೆ, ಪಾರಿಜಾತ ಹೂವ ಕಟ್ಟುವ ಕಾಯಕ (ಕವನ ಸಂಕಲನ), ಅಸ್ಪೃಶ್ಯರು (ಕಾದಂಬರಿ), ಮಲ್ಲಿನಾಥನ ಧ್ಯಾನ, ಮೇಜು ಮತ್ತು ...
READ MORE