ಲೇಖಕ ಜಿ.ಎಂ.ಕೃಷ್ಣಮೂರ್ತಿ ಅವರ ಕೃತಿ-ವಿದ್ಯಾರ್ಥಿಗಳಿಗಾಗಿ 51 ಸರಳ ವಿಜ್ಞಾನ ಪ್ರಬಂಧಗಳು. ಕಠಿಣ ವಿಷಯವನ್ನು ಹೇಗೆ ಸರಳವಾಗಿ ಹೇಳಬಹುದು ಎಂಬುದಕ್ಕೆ ಈ ಕೃತಿ ಕನ್ನಡಿ ಹಿಡಿಯುತ್ತದೆ. ಸಣ್ಣ ವಿಷಯವನಬ್ನು ಆಯ್ದುಕೊಂಡು ಅದನ್ನು ಹೇಗೆ ಪ್ರೌಢ ವಿಷಯದ ಪ್ರಬಂಧವನ್ನಾಗಿಸುವ ಕಲೆಯೂ ಇಲ್ಲಿ ಕಾಣಬಹುದು. ಆಕಾಶ, ಚಂದ್ರ, ನೀರು, ಗಾಳಿ, ಮೀನು, ಪಕ್ಷಿ, ಯಂತ್ರಗಳು, ರಾಕೆಟ್, ಸರೋವರ, ಪರ್ವತ, ಬೆಳಕು, ಧೂಮಕೇತ ಹೀಗೆ 51 ವಿಷಯ ಕುರಿತ ವೈಜ್ಞಾನಿಕ ಮಾಹಿತಿಗಳಿವೆ.
ಜಿ.ಎಂ. ಕೃಷ್ಣಮೂರ್ತಿ ಅವರು ಹಿರಿಯ ಲೇಖಕರು, ಅನುವಾದಕರು ಹಾಗೂ ವಿಮರ್ಶಕರು ಆಗಿದ್ದಾರೆ. ಮಹಾಭಾರತದ ಪ್ರಸಿದ್ಧ ಪಾತ್ರಗಳಾದ, ಪಿತಾಮಹ ಭೀಷ್ಮ, ಬಲ ಭೀಮಸೇನ, ಛಲಗಾರ ದುರ್ಯೋಧನ, ವೀರ ಅರ್ಜುನ, ಪಾಂಡವ ಪಟ್ಟಮಹಿಷಿ ದ್ರೌಪದಿ, ದಾನಶೂರ ಕರ್ಣ, ಸೂತ್ರಧಾರ ಶ್ರೀ ಕೃಷ್ಣ, ಶೋಕತಪ್ತ ತಾಯಿಕುಂತಿ, ಕುರುಡುದೊರೆ ಧೃತರಾಷ್ಟ್ರ, ಹಿರಿಯಪಾಂಡವ ಧರ್ಮರಾಯರ ಕುರಿತು ಸಾಹಿತ್ಯವನ್ನು ರಚಿಸಿದ್ದಾರೆ. ವಿಜ್ಞಾನ ವಿಚಾರಗಳ ಕುರಿತು ಲೇಖನಗಳನ್ನು ಬರೆದಿರುತ್ತಾರೆ. ಪ್ರಸ್ತುತ ಬೆಂಗಳೂರಿನ ರಾಜಾಜಿನಗರದಲ್ಲಿ ವಾಸವಿದ್ದಾರೆ. ಕೃತಿಗಳು: ಸ್ವಂತ ಉದ್ಯಮ ಆರಂಭಿಸುವುದು ಹೇಗೆ? ಭಗವಾನ ಬುದ್ಧ, ವಿಜ್ಞಾನ ವಿಶ್ವಕೋಶ, ಮಕ್ಕಳ ವಿಶ್ವ ಜ್ಞಾನ ಕೋಶ (ಸರಣಿಗಳು), ಜನಪದ ಸಂಸ್ಕೃತಿಯ ಮಹಾ ...
READ MORE