ಮಾತಿನ ಮೊದಲು

Author : ಎಸ್. ನಟರಾಜ ಬೂದಾಳು

Pages 214

₹ 200.00




Year of Publication: 2019
Published by: ಪಲ್ಲವ ಪ್ರಕಾಶನ
Address: ಚನ್ನಪಟ್ಟಣ ಪೋಸ್ಟ್ ವಯಾ ಎಂಮ್ಮಿಗನೂರು ಬಳ್ಳಾರಿ ಜಿಲ್ಲೆ
Phone: 9480353507

Synopsys

ಮಾತಿನ ಮೊದಲು – ಎಸ್ ನಟರಾಜ ಬೂದಾಳು ಅವರ ಸಂಸ್ಕೃತಿ ಚಿಂತನೆಯ ಕೃತಿ. ನಿಜವಾದ ಪಠ್ಯ ಓದುಗರದ್ದು; ನನ್ನದೇನಿದ್ದರೂ ಸಾಪೇಕ್ಷ ಪಠ್ಯ ವೆನ್ನುವುದು ಲೇಖಕರ ನಿಲುವು. ಓದುಗರು ಈ ಮಾತುಕತೆಯಲ್ಲಿ ಸಮಾನ ಪಾಲುಗಾರರಾಗಿರುವುದರಿಂದ ಇಲ್ಲಿ ಚರ್ಚಿತವಾಗಿರುವ ಸಂಗತಿಗಳನ್ನು ಕುರಿತ ಒಪ್ಪಿಗೆ, ನಿರಾಕರಣೆ, ಬದಲಾವಣೆ ಇತ್ಯಾದಿಗಳಿಗೆ ಲೇಖಕರು ಓದುಗರಾಗಬಯಸುತ್ತಾರೆ. ಮಾತನ್ನು ಕಲಿತ ಮೇಲೆ ಮನುಷ್ಯ ಅದನ್ನು ತಾನು ಕಂಡು ಅನುಭವಿಸಿದುದನ್ನು ನುಡಿಯಲು ಬಳಸಿರುವುದಕ್ಕಿಂತ, ತಾನೆಂದೂ ಅನುಭವಿಸಿಲ್ಲದುದನ್ನು, ಕಂಡಿಲ್ಲದುದನ್ನು ಕುರಿತು ಆಡಲು ಬಳಸಿರುವುದೇ ಹೆಚ್ಚು. ನಮ್ಮ ಸಾಹಿತ್ಯ, ಕಲೆ, ಮೀಮಾಂಸೆ ಮುಂತಾದುವು ಇಂತಹ ಭ್ರಮಾಸಂಗತಿಗಳಿಂದಲೇ ತುಂಬಿ ಹೋಗಿದೆ. ಕಾಲ್ಪನಿಕ ಸಂರಚನೆಗಳು ನಮ್ಮ ಬದುಕನ್ನು ನಿಯಂತ್ರಿಸುತ್ತಿವೆ. ನಾವು ನಮ್ಮದೇ ಬಾಳನ್ನು ಬಾಳಬಯಸುವುದಾದರೆ ಈ ಭ್ರಮಾ ಸಂರಚನೆಗಳಿಂದ ಮುಕ್ತರಾಗಬೇಕು. ಮಾತಿಗಿಂತ ಮೊದಲಿದ್ದ ಆವರಣಕ್ಕೆ ಒಮ್ಮೆ ಹೋಗಿ ಅಲ್ಲಿಂದ ನಮ್ಮ ಯಾನ ಮೊದಲಾಗಬೇಕು. ಮಾತಿನ ಮೊದಲ ಬಲ್ಲವರನೆನಗೊಮ್ಮೆ ತೋರಾ – ಎಂದ ಅಲ್ಲಮ ಗುರುವಿನ ನುಡಿಯನ್ನು ಈ ಪುಸ್ತಕಕ್ಕೆ ಹೆಸರಾಗಿ ಬಳಸಿಕೊಂಡಿದ್ದೇನೆ ಎನ್ನುತ್ತಾರೆ ಲೇಖಕರು.

About the Author

ಎಸ್. ನಟರಾಜ ಬೂದಾಳು

ತುಮಕೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿರುವ ನಟರಾಜ ಬೂದಾಳು ಅವರು ಕನ್ನಡದ ಸಂಸ್ಕೃತಿ ಚಿಂತಕ-ಸಂಶೋಧಕರಲ್ಲಿ ಒಬ್ಬರು. ಬುದ್ಧಚಿಂತನೆಯನ್ನು ಹರಳುಗೊಳಿಸಿದ ನಾಗಾರ್ಜುನನ ಮೂಲಮಧ್ಯಮಕಾರಿಕಾವನ್ನು ಕನ್ನಡಕ್ಕೆ ಅನುವಾದಿಸಿ ಪ್ರಕಟಿಸಿರುವ ಬೂದಾಳು ಅವರು ಕರ್ನಾಟಕದ ಸಂಸ್ಕೃತಿ ರೂಪಿಸುವಲ್ಲಿ  ಶ್ರಮಣ ಧಾರೆಗಳು ವಹಿಸಿದ ಪ್ರಮುಖ ಪಾತ್ರಗಳ ಬಗ್ಗೆ ವಿಶೇಷ ಒಲವು ಉಳ್ಳವರು. ಕರ್ನಾಟಕ ಸರ್ಕಾರ ಪ್ರಕಟಿಸಿದ ಸಮಗ್ರ ತತ್ವಪದ ಸಾಹಿತ್ಯ ಯೋಜನೆಯ ಪ್ರಧಾನ ಸಂಪಾದಕರಾಗಿ ಕಾರ್ಯನಿರ್ವಹಿಸಿರುವ ಅವರು ಕನ್ನಡ ಸಾಹಿತ್ಯ ಮೀಮಾಂಸೆಯ ಕುರಿತು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. 2020 ನೇ ಸಾಲಿನ ಕೇಂದ್ರ ಸಾಹಿತ್ಯ ಅನುವಾದ ಕೃತಿಗೆ ಕೊಡಮಾಡುವ ...

READ MORE

Related Books